ಮಂಡ್ಯ | ಮುಯ್ಯಾಳು ಸಂಸ್ಕೃತಿಯನ್ನು ಮತ್ತೆ ಮುನ್ನೆಲೆಗೆ ತಂದ ಕನ್ನಡದ ಮನಸ್ಸುಗಳು

Date:

ಸಕ್ಕರೆನಾಡು ಮಂಡ್ಯ ಒಂದು ವಿನೂತನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯುತ್ತಿದೆ. ಮೈಸೂರು, ಬೆಂಗಳೂರು ಮತ್ತು ಮಂಡ್ಯ ನಗರಗಳಲ್ಲಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉತ್ಸಾಹಿ ಯುವಕರು ಇದೇ ಭಾನುವಾರ ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದ ರೈತರೊಬ್ಬರ ಭತ್ತದ ನಾಟಿಗೆ ನೆರವಾಗಲು ಗದ್ದೆಗೆ ಇಳಿಯುವ ಮೂಲಕ ‘ಮುಯ್ಯಾಳು ಸಂಸ್ಕೃತಿ’ಯನ್ನು ಮತ್ತೆ ಮುನ್ನೆಲೆಗೆ ತರುತ್ತಿದ್ದಾರೆ.

ಭಾರತದಲ್ಲೇ ಮೊದಲು ಎಂದು ಹೇಳಲಾಗುತ್ತಿರುವ ಆಲಕೆರೆಯ ‘ರೈತರ ಶಾಲೆ’ ಸಂಸ್ಥೆ ಈ ನೆಲದ ನಂಟು ಕಾರ್ಯಕ್ರಮವನ್ನು ಆಯೋಜಿಸಿದೆ. ಉದ್ಯೋಗದ ಜತೆಗೆ ತಿಂಗಳಿಗೊಮ್ಮೆ ಸಮಾಜಕ್ಕೆ, ಸರ್ಕಾರಿ ಶಾಲೆಗೆ ನೆರವಾಗುವ ‘ಕನ್ನಡ ಮನಸ್ಸುಗಳು – ಕರ್ನಾಟಕ’ ತಂಡದ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮಂಡ್ಯದ ಹತ್ತಾರು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದಾರೆ.

ಏನಿದು ಮುಯ್ಯಾಳು ಸಂಸ್ಕೃತಿ?
ಹಿಂದಿನ ಕಾಲದಲ್ಲಿ ರೈತರು ಹಣದ ಕೂಲಿಗೆ ಬದಲು ಮುಯ್ಯಾಳು ಆಧಾರದ ಮೇಲೆ ಬೇಸಾಯದ ಕೆಲಸಗಳನ್ನು ಪರಸ್ಪರ ಸಹಕಾರದ ಮೇಲೆ ಮಾಡಿ ಮುಗಿಸುತ್ತಿದ್ದರು. ಈಗ ಅದೇ ಮುಯ್ಯಾಳು ಪದ್ಧತಿಯನ್ನು ರೈತರ ಶಾಲೆ ಜಾರಿಗೆ ತರುತ್ತಿದೆ. ರೈತ ಕುಟುಂಬಗಳ ಸದಸ್ಯರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಕೂಲಿ ಪಡೆಯದೆ ಅವರ ಹೊಲದಲ್ಲಿ ಇವರು, ಇವರ ಹೊಲದಲ್ಲಿ ಅವರು ಕೆಲಸ ಮಾಡುವುದೇ ಮುಯ್ಯಾಳು ಪದ್ಧತಿ. ಇದರಿಂದ ಕೆಲಸ ಹಗುರವಾಗುತ್ತದೆ. ಹಣದ ಉಳಿತಾಯವೂ ಆಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕಳೆದ ತಿಂಗಳು ನಾನು ಮೈಸೂರಿನಲ್ಲಿ ಹೊಸದಾಗಿ ಆರಂಭಿಸಿದ ಪೆಟ್ರೋಲ್ ಬಂಕ್ ಕೆಲಸಗಳಿಗೆ ನಂಬಿಕಸ್ಥರು ಬೇಕಿತ್ತು. ಆಗ ವಾರಗಟ್ಟಲೆ ನನ್ನ ಜತೆ ನಿಂತವರು ರೈತರ ಶಾಲೆಯ ಸ್ಥಾಪಕರಾದ ಪ್ರೊ. ಸತ್ಯಮೂರ್ತಿ. ಅವರ ಋಣವನ್ನು ಹೇಗಾದರೂ ತೀರಿಸಬೇಕಲ್ಲ ಎಂದು ಯೋಚಿಸುತ್ತಿದ್ದೆ. ಉದ್ಯಮಿಯಾದ ನನಗೆ ಕೃಷಿ ಜಮೀನಿಲ್ಲ. ಆದರೆ, ವ್ಯವಸಾಯ ಮಾಡಬೇಕೆಂಬ ಹಂಬಲವಿದೆ. ಹೀಗಾಗಿ, ಈ ಭಾನುವಾರ ಆಲಕೆರೆಯಲ್ಲಿ ನಡೆಯಲಿರುವ ಗದ್ದೆ ನಾಟಿಯಲ್ಲಿ ಮುಯ್ಯಾಳಾಗಿ ಒಂದು ದಿನ ದುಡಿಯಲು ನಿರ್ಧರಿಸಿದ್ದೇನೆ” ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ ಅಧ್ಯಕ್ಷ ವಿನಯ್ ಕುಮಾರ್ ಎಂ ಸಂತಸ ವ್ಯಕ್ತಪಡಿಸಿದ್ದಾರೆ.

WhatsApp Image 2025 09 05 at 10.49.39 AM

“ಮಹಾನಗರಗಳ ಆಕರ್ಷಣೆಗೆ ಒಳಗಾಗಿ ಹಳ್ಳಿಗಳನ್ನು‌ ತೊರೆಯುತ್ತಿರುವ ಯುವಜನತೆ ಒಂದು ಕಡೆಯಾದರೆ, ಕೃಷಿ ಕೆಲಸಗಳಿಗೆ ಜನರಿಲ್ಲದೆ ಉತ್ತರ ಪ್ರದೇಶ, ಬಿಹಾರಗಳಿಂದ ಕೂಲಿ ಕಾರ್ಮಿಕರನ್ನು ಕರೆತರುತ್ತಿರುವ ದುರಿತ ಕಾಲದಲ್ಲಿ ಇಂದು ನಾವಿದ್ದೇವೆ. ಇದೊಂದು ಗಂಭೀರ ಸಮಸ್ಯೆ. ಇದಕ್ಕೆ ಪರಿಹಾರವೇನು? ಎಂದು ಹುಡುಕುತ್ತಾ ಹೊರಟಾಗ ಗದ್ದೆ ನಾಟಿಗೆ ನೆಲದ ನಂಟು ಇರುವ ಯುವಜನರನ್ನು ಯಾಕೆ ಕರೆತರಬಾರದು ಎಂಬ ಆಲೋಚನೆ ಬಂತು. ಈ ಬಾರಿ ಐದು ಎಕರೆ ಜಮೀನಿಗೆ ಉಚಿತವಾಗಿ ನಾಟಿ ಮಾಡಿಸುತ್ತಿದ್ದೇವೆ. ನೂರು ಮಂದಿ ಮುಯ್ಯಾಳುಗಳನ್ನು ಗದ್ದೆಗೆ ಇಳಿಸುತ್ತಿದ್ದೇವೆ. ಮುಂದಿನ ವರ್ಷ ಕನಿಷ್ಠ 50 ಎಕರೆ ನಾಟಿ ಮಾಡಿಸುವ ಗುರಿ ಇದೆ” ಎನ್ನುತ್ತಾರೆ ʼರೈತರ ಶಾಲೆʼಯ ಮುಖ್ಯಸ್ಥ ಪ್ರೊ. ಸತ್ಯಮೂರ್ತಿ.

WhatsApp Image 2025 09 05 at 10.49.39 AM 1

ಇದನ್ನೂ ಓದಿ: ಮಂಡ್ಯ | ಶಿಕಾರಿಪುರ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯ ಜನರ ಬದುಕು ಅತಂತ್ರ

“ನನ್ನ ಅಪ್ಪ, ಅಜ್ಜ, ಮುತ್ತಜ್ಜ ಎಲ್ಲರೂ ರೈತರು. ಹೊಲಗದ್ದೆಗಳಲ್ಲಿ ಆಡಿ ಬೆಳೆದವರು‌ ನಾವು. ಈ ಕರ್ನಾಟಕದ ಕೃಷಿ‌ ಕ್ಷೇತ್ರ ಸಂಕಷ್ಟದಲ್ಲಿದೆ. ಅನ್ನ ಕೊಡುವ ರೈತನನ್ನು ನಾವು ಒಂಟಿಯಾಗಲು ಬಿಡಬಾರದು. ಬೆಂಗಳೂರಿನಲ್ಲಿ ನಾವು ಬದುಕು ಕಟ್ಟಿಕೊಂಡಿದ್ದರೂ ನೆಲದ ನಂಟು ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತದೆ. ನನ್ನದೇ ಸಮಾನ ಆಲೋಚನೆಯ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಅನೇಕ ಗೆಳೆಯರು ಶನಿವಾರವೇ ಮಂಡ್ಯಕ್ಕೆ ಬರುತ್ತಿದ್ದೇವೆ. ಭಾನುವಾರ ಇಡೀ ದಿನ ಆಲಕೆರೆಯ ರೈತರ ಗದ್ದೆ ನಾಟಿಯಲ್ಲಿ ಶ್ರಮದಾನ ಮಾಡಲಿದ್ದೇವೆ. ನೀವೂ ಬನ್ನಿ” ಎಂದು ಕನ್ನಡ ಮನಸ್ಸುಗಳು ಕರ್ನಾಟಕ ಸಂಸ್ಥೆಯ ಮುಖ್ಯಸ್ಥ ಪವನ್ ಧರೆಗುಂಡಿ ಮನವಿ ಮಾಡಿದ್ದಾರೆ.

WhatsApp Image 2025 09 05 at 10.49.40 AM

ನೆಲದ ನಂಟು ಕಾರ್ಯಕ್ರಮಕ್ಕೆ ಬರುವ ಮುಯ್ಯಾಳುಗಳು ದುಬಾರಿ ಬಟ್ಟೆ ಧರಿಸಿ ಬಂದು ಗದ್ದೆ ನಾಟಿಯಲ್ಲಿ ಪಾಲ್ಗೊಳ್ಳದಂತೆ ರೈತರ ಶಾಲೆ ಮನವಿ ಮಾಡಿದೆ. ಇಷ್ಟೇ ಅಲ್ಲದೆ ವೇದಿಕೆ ಕಾರ್ಯಕ್ರಮವನ್ನು ರದ್ದುಗೊಳಿಸಿ, ಭಾಷಣ, ಸನ್ಮಾನ, ಹಾರ ತುರಾಯಿಗಳನ್ನು ನಿಷೇಧಿಸಿ ಹೊಸ ಮಾದರಿ ಹಾಕಿಕೊಟ್ಟಿದೆ. ಕಲಾನಿಕೇತನ ಶಾಲೆಯ ಕಲಾವಿದರು ಸ್ಥಳದಲ್ಲೇ ವ್ಯವಸಾಯದ ಕುರಿತು ಚಿತ್ರ ಬಿಡಿಸಲಿದ್ದಾರೆ. ಜನಪದ ಗಾಯಕರಾದ ಗಾಮನಹಳ್ಳಿ ಸ್ವಾಮಿ ಮತ್ತು ಗಾನಾಸುಮ ಅವರು ಹಳ್ಳಿ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಜಮೀನಿನಲ್ಲಿ ಶ್ರಮದಾನ ಮಾಡಿ ಒಂದು ದಿನವನ್ನು ರೈತರ ಜತೆ ಕಳೆಯುವಂತೆ ಪ್ರೀತಿಯಿಂದ ಮನವಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...