​ದೇವರ ಹೆಸರಲ್ಲಿ ನಡೆಯುವ ಸುಲಿಗೆ ತಡೆಗೆ ಬಸವಣ್ಣನ ಅರಿವಿನ ಹಾದಿ ಅನಿವಾರ್ಯ: ಎಂ ಸಿ ಬಸವರಾಜು

Date:

ಇಂದು ಸಮಾಜದಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ವಂಚನೆ ಮತ್ತು ಸುಲಿಗೆಗಳನ್ನು ತಡೆಯಲು ಬಸವಣ್ಣನವರು ತೋರಿದ ‘ಅರಿವಿನ ಹಾದಿ’ ನಮಗೆ ದಾರಿದೀಪವಾಗಬೇಕಿದೆ ಎಂದು ಕರಾವೈಸಂ ಪರಿಷತ್ತಿನ ಗೌರವಾಧ್ಯಕ್ಷ ಎಂ ಸಿ ಬಸವರಾಜು ಪ್ರತಿಪಾದಿಸಿದರು.

​ಪಟ್ಟಣದ ಸಂಜಯ ಪ್ರಕಾಶನದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ʼವೈಜ್ಞಾನಿಕ ಚಿಂತನೆಗಳಿಗೆ ಮೌಢ್ಯತೆಯ ತೊಡಕುಗಳುʼ ಕಾರ್ಯಕ್ರಮದರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಬಸವಣ್ಣನವರು ಮಂತ್ರಿಯಾಗಿದ್ದ ಕಾಲದಲ್ಲಿ ದೇಶ ಪರ್ಯಟನೆ ಮಾಡುವಾಗ, ಭಕ್ತರಿಂದ ಚಿನ್ನ, ಬೆಳ್ಳಿ, ನಾಣ್ಯಗಳನ್ನು ಕಿತ್ತುಕೊಂಡು ಅವರನ್ನು ನೀರಿನಲ್ಲಿ ಮುಳುಗಿಸಿ, ತಲೆಯ ಮೇಲೆ ಕಾಲಿಟ್ಟು ಸುಲಿಗೆ ಮಾಡುತ್ತಿದ್ದ ದೃಶ್ಯಗಳನ್ನು ಕಂಡು ಮಮ್ಮಲ ಮರುಗಿದ್ದರು. ಭಕ್ತ ಮತ್ತು ದೇವರ ನಡುವೆ ದಳ್ಳಾಳಿಗಳ ಅವಶ್ಯಕತೆಯಿಲ್ಲ ಎಂಬ ಸತ್ಯವನ್ನು ಅವರು ಅಂದೇ ಸಾರಿದ್ದರು” ಎಂದು ನೆನಪಿಸಿದರು.

“ಜಗತ್ತಿನ ಮಹಾಪುರುಷರೆಲ್ಲರೂ ಜನರಿಗೆ ಅರಿವು ಮೂಡಿಸಿದ್ದು ಅವರವರ ಆಡುಭಾಷೆಯಲ್ಲೇ ಹೊರತು, ಜನಸಾಮಾನ್ಯರಿಗೆ ತಿಳಿಯದ ಸಂಸ್ಕೃತದಂತಹ ‘ದೇವ ಭಾಷೆ’ಯಲ್ಲಲ್ಲ. ಸಾಮಾನ್ಯ ಜನರಿಗೆ ಸತ್ಯ ದರ್ಶನವಾಗಬಾರದು ಎಂಬ ಕಾರಣಕ್ಕೆ ಅಂದು ಸಂಸ್ಕೃತವನ್ನು ದೇವ ಭಾಷೆ ಎಂದು ಕರೆದು ಜನರನ್ನು ದೂರ ಇಡಲಾಗಿತ್ತು. ಆದರೆ ಬಸವಣ್ಣನವರು ಜನಸಾಮಾನ್ಯರ ಆಡುನುಡಿಯಲ್ಲೇ ವಚನಗಳ ಮೂಲಕ ಜ್ಞಾನದ ಜ್ಯೋತಿ ಬೆಳಗಿದರು” ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬ್ಲಾಕ್ ಹೋಲ್ ಕುರಿತು ಮೊದಲ ಬಾರಿಗೆ ವೈಜ್ಞಾನಿಕ ವ್ಯಾಖ್ಯಾನ ನೀಡಿದವರು ಭಾರತೀಯ ಮೂಲದ ಸುಬ್ರಹ್ಮಣ್ಯಂ ಚಂದ್ರಶೇಖರ್. ಅವರು ಈ ಸಿದ್ಧಾಂತ ಮಂಡಿಸಿದಾಗ ಪಾಶ್ಚಾತ್ಯ ಜಗತ್ತು ಅದನ್ನು ಒಪ್ಪಲು ಸಿದ್ಧವಿರಲಿಲ್ಲ. ಒಬ್ಬ ಭಾರತೀಯ ಬಂದು ನಮಗೆ ವಿಜ್ಞಾನ ಹೇಳಿಕೊಡುವುದೇ ಎಂಬ ಅಹಂಕಾರ ಅವರಲ್ಲಿತ್ತು. ಆದರೆ ಇಂದು ವಿಜ್ಞಾನ ಅದೆಷ್ಟೋ ಮುಂದುವರಿದಿದ್ದು, ಅಂದು ಅವರು ಹೇಳಿದ ಸತ್ಯವನ್ನೇ ಜಗತ್ತು ಒಪ್ಪಿಕೊಂಡಿದೆ” ಎಂದು ಡಾ. ಸುಜಯ್ ಕುಮಾರ್ ಸ್ಮರಿಸಿದರು.

ಮುಂದುವರಿದು, “ನಮ್ಮ ಕಲ್ಪನೆಯ ದೇವರು ಮತ್ತು ವಿಜ್ಞಾನಿಗಳ ದೃಷ್ಟಿಕೋನದ ನಡುವೆ ವ್ಯತ್ಯಾಸವಿದೆ. ಎ.ಎನ್. ಮೂರ್ತಿರಾಯರಂತಹ ಚಿಂತಕರು ಸತ್ಯವನ್ನು ನಿರಾಕರಿಸಲಿಲ್ಲ, ಆದರೆ ಮೂರ್ತಿ ಪೂಜೆಯ ಕಲ್ಪನೆಯನ್ನು ಒಪ್ಪಲಿಲ್ಲ. ಸುಬ್ರಹ್ಮಣ್ಯಂ ಚಂದ್ರಶೇಖರ್ ಪ್ರಕಾರ, ದೇವರು ಎನ್ನುವುದು ‘ಡಿಸ್ಕವರಿ ಆಫ್ ಲೈಟ್’ ಅಥವಾ ಬೆಳಕಿನ ಆವಿಷ್ಕಾರದ ಕಲ್ಪನೆ. ಬದುಕಿನಲ್ಲಿ ಏನೋ ಒಂದು ಶಕ್ತಿ ಇದೆ ಎಂದು ನಂಬಲು ನಮಗೆ ಈ ‘ಟೈಟಲ್’ ಅವಶ್ಯಕತೆ ಇದೆ” ಎಂದು ಅವರು ಅಭಿಪ್ರಾಯಿಸಿದರು.

ಇದನ್ನೂ ಓದಿ: ಮಂಡ್ಯ | ಪ್ರೇಮ ವಿವಾಹ; ಯುವಕನ ಮನೆಗೆ ಬೆಂಕಿ ಹಚ್ಚಿದ ಯುವತಿ ತಂದೆ

“ನಮ್ಮ ಸಮಾಜವನ್ನು ಕಾಡುತ್ತಿರುವ ಜಾತಿ ಎಂಬ ಹುಳಗಳನ್ನು ಎಲ್ಲಿಯವರೆಗೆ ಹೊತ್ತು ತಿರುಗುತ್ತೀರಿ? ಮೊದಲು ವಾಸ್ತವತೆಯ ಅರಿವನ್ನು ನಮ್ಮೊಳಗೆ ನಾವು ಬೆಳೆಸಿಕೊಳ್ಳಬೇಕಿದೆ. ನಮ್ಮೊಳಗಿನ ವಿಚಾರಗಳನ್ನು ನಾವೇ ಸರಿಪಡಿಸಿಕೊಳ್ಳದಿದ್ದರೆ ಯಾವ ದೇವರು ಬಂದು ಸರಿ ಮಾಡಲು ಸಾಧ್ಯ? ದೇವರು ಎನ್ನುವುದೇ ಒಂದು ಪರಿಕಲ್ಪನೆ. ‘ದೇವರು ಸತ್ತ’ ಎನ್ನುವ ಪುಸ್ತಕದ ಬಗ್ಗೆ ಚರ್ಚೆ ನಡೆಸುವವರು ಕೆಲವರು ನಕ್ಷತ್ರ ಎನ್ನುತ್ತಾರೆ, ಇನ್ನು ಕೆಲವರು ಗ್ರಹ ಎನ್ನುತ್ತಾರೆ. ಆದರೆ ನಾವು ಯಾವುದನ್ನು ನಂಬಬೇಕು? ಸೂರ್ಯನೂ ಒಂದು ನಕ್ಷತ್ರ ಎಂಬ ವೈಜ್ಞಾನಿಕ ಸತ್ಯ ತಿಳಿದ ಮೇಲೂ, ಹೊಟ್ಟೆಪಾಡಿಗಾಗಿ ಸುಳ್ಳು ಹೇಳುವವರ ಮಾತುಗಳನ್ನು ನಂಬುವುದು ಎಷ್ಟು ಸರಿ? ನಿಮಗೆ ಯಾವುದು ಸತ್ಯ ಎಂದು ಅನಿಸುತ್ತದೋ ಅದನ್ನು ಮಾತ್ರ ನಂಬಿ. ಸತ್ಯ ತಿಳಿದ ಮೇಲೆಯೂ ಮೌಢ್ಯಕ್ಕೆ ಶರಣಾಗಬೇಡಿ” ಎಂದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ (ಕ.ರಾ.ವೈ.ಸಂ. ಪರಿಷತ್ತು) ಪ್ರಧಾನ ಕಾರ್ಯದರ್ಶಿಗಳಾದ ಜಿ. ಎಸ್. ಕೆಂಪರಾಜು ಕಿವಿಮಾತು ಹೇಳಿದರು.

ಈ ಸಮಾರಂಭದಲ್ಲಿ ಸಮಾಜದ ವಿವಿಧ ರಂಗಗಳ ಪ್ರಮುಖರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಶಿವಲಿಂಗಯ್ಯ, ಪ್ರಜ್ಞಾವಂತ ವೇದಿಕೆಯ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಯೋಗ ಶಿಕ್ಷಕ ಕೆ. ಶೆಟ್ಟಹಳ್ಳಿ ಅಪ್ಪಾಜಿ, ಸಂಜಯ ಪ್ರಕಾಶನದ ಎಸ್.ಎಂ. ಶಿವಕುಮಾರ್, ಮತ್ತು ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ​ವಕೀಲರಾದ ಎಸ್.ಆರ್. ಸಿದ್ದೇಶ್, ಬಾಲರಾಜ್, ವಿರೂಪಾಕ್ಷಪ್ಪ, ಪ್ರೊ. ಮಹಾದೇವು, ಶಿಕ್ಷಕಿ ಎಚ್.ಜೆ. ಶೀಲಾ, ಸುಜಾತಾ, ಚಿಕ್ಕ ತಮ್ಮೇಗೌಡ ಹಾಗೂ ಕ್ಯಾತನಹಳ್ಳಿ ಚಂದ್ರಣ್ಣ ಮುಂತಾದ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಶಸ್ಸಿನ ಶಿಖರವನ್ನೇರಲು ಉತ್ತಮ ಚಿಂತನೆಗಳಿಂದ ಮಾತ್ರ ಸಾಧ್ಯ: ಪದ್ಮಶ್ರೀ ಪುರಸ್ಕೃತ ಎಂ ಅಂಕೇಗೌಡ ಅಭಿಮತ

ವಿದ್ಯಾರ್ಥಿಗಳು ಮನರಂಜನೆಗಳಿಂದ ದೂರ ಉಳಿದು ಉತ್ತಮ ಚಿಂತನೆಗಳತ್ತ ಮುಖ ಮಾಡಿದರೆ ಮಾತ್ರ...

ಕೆ ಆರ್ ಪೇಟೆ | ಅಕ್ಕಿಹೆಬ್ಬಾಳು ಶಾಲೆ ಜಾಗ ಒತ್ತುವರಿ ಆರೋಪ; ಗ್ರಾಮಸ್ಥರಿಂದ ಶಿಕ್ಷಣ ಸಚಿವರಿಗೆ ದೂರು

ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ...