ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ರೈತ ನಾಯಕ ದಿವಂಗತ ಕೆ ಎಸ್ ಪುಟ್ಟಣ್ಣಯ್ಯನವರ 8ನೇ ವರ್ಷದ ಪುಣ್ಯ ಸ್ಮರಣೆಯನ್ನು ಗ್ರಾಮಸ್ಥರು ಅರ್ಥಪೂರ್ಣವಾಗಿ ಆಚರಿಸಿದರು.
ಗ್ರಾಮದ ಪ್ರಮುಖ ವೃತ್ತದಲ್ಲಿರುವ ಪುಟ್ಟಣ್ಣಯ್ಯನವರ ಪ್ರತಿಮೆಗೆ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ರೈತ ಸಮುದಾಯದ ಹಿತರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಪುಟ್ಟಣ್ಣಯ್ಯನವರ ಹೋರಾಟದ ಹಾದಿ ಮತ್ತು ಅವರ ತತ್ವಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಗ್ರಾಮದ ಹಿರಿಯರು ಮಾತನಾಡಿ, “ಪುಟ್ಟಣ್ಣಯ್ಯನವರು ಕೇವಲ ಒಬ್ಬ ನಾಯಕರಾಗಿರದೆ, ರೈತರ ಧ್ವನಿಯಾಗಿದ್ದರು. ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಶಿಸ್ತುಬದ್ಧವಾಗಿ ಪಾಲ್ಗೊಂಡು ಕೃಷಿ ಕಾಯಕದ ಮಹತ್ವವನ್ನು ಸಾರುವ ರೈತ ಗೀತೆಯನ್ನು ಹಾಡಿದರು.
ಇದನ್ನೂ ಓದಿ: ಮಂಡ್ಯ | ಇಂಡುವಾಳು ಗ್ರಾಮ ಪಂ.ಯಲ್ಲಿ ಅಕ್ರಮ; ಇಬ್ಬರು ಪಿಡಿಒ ಸೇರಿ ನಾಲ್ವರ ಅಮಾನತು
ಈ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಘು, ಮಂಜು, ಪ್ರಕಾಶ್, ರೋಹಿತ್, ರಾಘವೇಂದ್ರ, ಬಾಲಕೃಷ್ಣ, ಶ್ರೀನಿವಾಸ್ ಬಾಬು, ಸುಬ್ಬಣ್ಣ, ದರ್ಶನ್, ಪಾರ್ಥ ಸಾರಥಿ, ವೆಂಕಟೇಶ್ ಜಿ, ಹರ್ಷ ಸೇರಿದಂತೆ ಹಲವಾರು ಗ್ರಾಮಸ್ಥರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.





