ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿ ಸ್ವಾತಂತ್ರದ ಹೋರಾಟದಲ್ಲಿ ಅಪ್ರತಿಮ ಸ್ಥಾನ ಪಡೆದವರು. ಆಜಾದ್ ಹಿಂದ್ ಪೌಜ್ ಸೇನೆಯ ಸ್ಥಾಪಿಸಿ ಭಾರತ ಸ್ವಾತಂತ್ರ್ಯ ಚಳವಳಿಯ ಅಮರ ಸೇನಾನಿ, ಇವರ ಜನ್ಮದಿನವಾದ ಜನವರಿ 23 ಶೌರ್ಯ ದಿನ ಅಥವಾ ಪರಾಕ್ರಮ ದಿನವೆಂದು ರಾಷ್ಟ್ರೀಯ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ ಎಂದು ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ ಎಸ್ ವೆಂಕಟೇಶ್ ಹೇಳಿದರು.
ಸಮರ್ಪಣ ಟ್ರಸ್ಟ್ ಮತ್ತು ಐಕ್ಯ ಅಲಯನ್ಸ್, ಶ್ರೀರಂಗ ಪಟ್ಟಣ ಪ್ರಜ್ಞಾವಂತರ ವೇದಿಕೆ ವತಿಯಿಂದ ನಗರದ ಯುವಜನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 129ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐಕ್ಯ ಅಲಯನ್ಸ್ ಸಂಸ್ಥೆಯ ನಿರ್ದೇಶಕಿ ಎನ್ ಸರಸ್ವತಿ ಮಾತನಾಡಿ, “ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿದ ನಾಲ್ಕು ದಳಗಳಲ್ಲಿ ಮೂರು ದಳಕ್ಕೆ ಗಾಂಧಿ ಜವಹಾರ ಲಾಲ್ ನೆಹರೂ ಮತ್ತು ಮೌಲಾನಾ ಅಜಾದ್ ಅವರ ಹೆಸರುಗಳನ್ನು ಇಟ್ಟಿದ್ದರು ಎನ್ನುವುದು ಗಮನಾರ್ಹ ಸಂಗತಿ. ಹಾಗೆಯೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತಮ್ಮ ಸೈನ್ಯದಲ್ಲಿ ಝಾನ್ಸಿ ಲಕ್ಷ್ಮೀ ಎಂಬುವವರನ್ನು ಮುಖ್ಯಸ್ಥೆಯನ್ನಾಗಿ ಮಹಿಳೆಯರಿಗೂ ಸ್ವಾತಂತ್ರ್ಯ ಹೋರಾಟದ ಸ್ಥಾನವನ್ನು ಕಲ್ಪಿಸಿದ್ದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ‘ಅಕ್ಕ ಪಡೆ’ ಗಸ್ತು ವಾಹನಕ್ಕೆ ಚಾಲನೆ ನೀಡಿದ ಸಚಿವ ಕೆ ವೆಂಕಟೇಶ್
ಕಾರ್ಯಕ್ರಮದಲ್ಲಿ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಶ್ರೀರಂಗಪಟ್ಟಣ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ ಶೆಟ್ಟಹಳ್ಳಿ ಅಪ್ಪಾಜಿ, ದಸಂಸ ಸುರೇಶ್, ಚಿಕ್ಕ ತಮ್ಮೇಗೌಡ, ಬಾಬುರಾಯನ ಕೊಪ್ಪಲು ಸುರೇಶ್, ಆಟೋ ರಾಮು ಸೇರಿದಂತೆ ಇತರರು ಇದ್ದರು.





