ಡಾ.ಬಿ.ಆರ್. ಅಂಬೇಡ್ಕರ್ ಅವರ ಧರ್ಮಪತ್ನಿ ರಮಾಬಾಯಿ ಅವರ ಜೀವನಾಧಾರಿತ ನಾಟಕವನ್ನು ಆಯೋಜಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ ಮತ್ತು ಪ್ರಸ್ತುತವಾಗಿ ಇಂತಹ ನಾಟಕಗಳು ಹೆಚ್ಚಾಗಿ ಪ್ರದರ್ಶನಗೊಳ್ಳಬೇಕು ಎಂದು ಬೆಳಗು ಸಂಸ್ಥೆಯ ಸಂಸ್ಥಾಪಕ ಎ.ಶರಣಕುಮಾರ ಹೇಳಿದರು
ಮಾನ್ವಿ ತಾಲ್ಲೂಕು ಮುದ್ದಮಗುಡ್ಡಿ ಗ್ರಾಮದಲ್ಲಿ ಬೆಳಗು ಸಂಸ್ಥೆ ವತಿಯಿಂದ ಪ್ರೊ. ಹೆಚ್.ಟಿ. ಪೋತೆಯವರು ವಿರಚಿತಗೊಂಡ ‘ರಮಾಬಾಯಿ’ ಕಾದಂಬರಿ ಆಧಾರಿತ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ. ಅಂಬೇಡ್ಕರ್ ಅವರ ಜೀವನ ಆದರ್ಶಗಳು ಮತ್ತು ಹೋರಾಟದ ಮನೋಭಾವ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿವೆ. ಇಂತಹ ನಾಟಕಗಳು ವಿದ್ಯಾರ್ಥಿಗಳಲ್ಲಿ ಚಿಂತನೆ, ಸಾಮಾಜಿಕ ಜಾಗೃತಿ ಹಾಗೂ ಪ್ರತಿಭಟನಾತ್ಮಕ ಮನೋಭಾವವನ್ನು ಬೆಳೆಸಲು ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೋರ್ವ ಸಾಮಾಜಿಕ ಕಾರ್ಯರ್ತರು ಮತ್ತು ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಮಿರ್ಜಾ ಮೊಹಮ್ಮದ್ ಬೇಗ್ ಅವರು ಮಾತನಾಡಿ ‘ರಮಾಬಾಯಿ’ ಅವರು ಅಂಬೇಡ್ಕರ್ ಅವರ ಬದುಕಿನ ಹೋರಾಟದ ಯಶಸ್ವಿಗೆ ಬೆನ್ನೆಲುಬಾಗಿ ನಿಂತ ಮಹಸಾಧ್ವಿ ಶಿರೋಮಣಿ ಎಂದರು.
ನಂತರ ಕರ್ನಾಟಕ ಮಾದಿಗರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಪ್ರಭುರಾಜ್ ಕೊಡ್ಲಿ ಅವರು ಮಾತನಾಡಿ, ಈ ದೇಶಕ್ಕೆ ಸಂವಿಧಾನ ಬರೆಯುವಲ್ಲಿ ಅಂಬೇಡ್ಕರ್ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಅವರ ಕಾರ್ಯಗಳನ್ನು ಶ್ಲಾಘಿಸಿದರು.
ರಮಾಬಾಯಿ ಕಾದಂಬರಿ ಆಧಾರಿತ ನಾಟಕವನ್ನು ‘ಸಂಗಮ ಕಲಾತಂಡ’ ಬಾಗಲಕೋಟೆ ಇವರಿಂದ ಮನೋಜ್ಞವಾಗಿ ಮೂಡಿಬಂದಿತು.. ಅಂಬೇಡ್ಕರ್ ಅವರ ವಿದ್ಯಾಭ್ಯಾಸ, ಕಷ್ಟಗಳ ಮಧ್ಯ ಸಾಗಿದ ಕುಟುಂಬದ ಹಿನ್ನೆಲೆ, ರಮಬಾಯಿ ಪಟ್ಟಿರುವ ಪಾಡು,ಶಾಹು ಮಹಾರಾಜರ ವಿದ್ಯಾಭ್ಯಾಸಕ್ಕೆ ನೀಡಿದ ಪ್ರೋತ್ಸಾಹ, ಮಹಡ್ ಕೆರೆಯ ಸತ್ಯಾಗ್ರಹ, ಅಂಬೇಡ್ಕರ್ ಅವರ ತಮ್ಮ ಮಕ್ಕಳನ್ನು ಕಳೆದುಕೊಂಡ ದಾರುಣ ಘಟನೆ, ಛಲ ಬಿಡದೆ ಶೋಷಿತ ಧಮನಿತರ ಬದುಕಿಗೆ ಬೆಳಕಾಗುವ ನಿಟ್ಟಿನಲ್ಲಿ ಅಂಬೇಡ್ಕರ ಅವರ ಅವಿರತ ಶ್ರಮವು ನಾಟಕದ ಪ್ರಮುಖ ಭಾಗವಾಗಿ ವಿದ್ಯಾರ್ಥಿಗಳ ಗಮನಸೆಳೆದಿತು.
ಸಂಗಮ ಕಲಾ ತಂಡದ ಕಲಾವಿದರಿಗೆ ಬೆಳಗು ಸಂಸ್ಥೆ ಮುದ್ದಮಗುಡ್ಡಿ ಸಂಸ್ಥೆ ವತಿಯಿಂದ ಪ್ರೋತ್ಸಾಹ ಧನವನ್ನು ನೀಡಿ ಅಭಿನಂದಿಸಿದರು ಮತ್ತು ಲೊಯೋಲ ಕಾಲೇಜಿನ ವತಿಯಿಂದ ಪ್ರಾಚಾರ್ಯರಾದ ಫಾ. ವಿನೋದ್ ಪೌಲ್ ಅವರು ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಾರ್ವತ್ರಿಕ ಮುಷ್ಕರ; 4 ಕಾರ್ಮಿಕ ಕೋಡ್ಗಳ ವಿರೋಧಿಸಿ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ
ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ವರ್ಗ, ದಲಿತ ಪ್ಯಾಂಥರ್ಸ ಜಿಲ್ಲಾಧ್ಯಕ್ಷರು ಲಕ್ಷ್ಮಣ ಜಾನೇಕಲ್, ಕರ್ನಾಟಕ ಜನಶಕ್ತಿ ಮಾರೆಪ್ಪ ಹರವಿ ರಾಘವೇಂದ್ರ ಚೌಡ್ಕಿ ಹಾಗೂ ಉಪಪ್ರಾಂಶುಪಾಲರಾದ ಖಾಸಿಂ ಸಾಬ್ ಅವರು ಉಪಸ್ಥಿತರಿದ್ದರು.





