ಮೇ ಸಾಹಿತ್ಯ ಮೇಳ | ಭಾರತದಲ್ಲಿ ಮನುವಾದದ ವಿರುದ್ಧ ಶರಣರ ಪರಂಪರೆಯಿದೆ: ಪ್ರಕಾಶ್ ಅಂಬೇಡ್ಕರ್

Date:

ಭಾರತದ ಸಂಸ್ಕೃತಿಯಲ್ಲಿ ಎರಡು ಬಗೆಯ ಪರಂಪರೆಗಳಿವೆ. ಒಂದು, ಯಾಜಮಾನ್ಯ ಆಳ್ವಿಕೆಯ ದಬ್ಬಾಳಿಕೆಯ ಪರಂಪರೆ, ಮತ್ತೊಂದು, ಶರಣರ ಪರಂಪರೆ. ನಾವು ಅಪ್ಪಿಕೊಳ್ಳುವುದು ಶರಣ ಪರಂಪರೆಯನ್ನು, ಇದು ದೇಶದುದ್ದಕ್ಕೂ ಹಬ್ಬಿದೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಬಿಜಾಪುರದಲ್ಲಿ ನಡೆಯುತ್ತಿರುವ ‘ಮೇ ಸಾಹಿತ್ಯ ಮೇಳ’ದಲ್ಲಿ ಅವರು ಮಾತನಾಡಿದರು. “ಯಾಜಮಾನ್ಯ ಪರಂಪರೆಯು ಹಿಟ್ಲರ್ ಶಾಹಿಯಾದದ್ದು, ಇದರಲ್ಲಿ ನಿಮಗೆ ಚಿಂತಿಸುವ ಅವಕಾಶವಿಲ್ಲ. ಇದನ್ನು ವಿವರಿಸುವಾಗ ಮನುಸ್ಮೃತಿಯನ್ನು ಉದಾಹರಿಸಲಾಗುತ್ತದೆ. ಅಂದರೆ ಇಲ್ಲಿ ಯಾಜಮಾನ್ಯ ಮಾತ್ರವಲ್ಲ, ಅಸಹಿಷ್ಣುತೆಯೂ ಇದೆ ಎಂದರ್ಥ” ಎಂದರು.

“ಮತ್ತೊಂದೆಡೆ ಸಂತರ ಪರಂಪರೆಯಿದೆ. ಇಲ್ಲಿ ಶಾಂತಿಯಿದೆ, ಪರಸ್ಪರರನ್ನು ಒಪ್ಪಿಕೊಳ್ಳುವುದಿದೆ, ಸಹಬಾಳ್ವೆಯಿದೆ. ಜಾತಿ ಪದ್ಧತಿಯ ವಿರುದ್ಧ ಹೋರಾಟವಿದೆ. ಉದಾಹರಣೆಗೆ – ಸಂತರ ಸಂಸ್ಕೃತಿಯಲ್ಲಿ ಪುನರ್ವಿವಾಹವಿದೆ. ಆದರೆ, ವೈದಿಕಶಾಹಿಯಲ್ಲಿ ಮಹಿಳೆಯರಿಗೆ ಮರುವಿವಾಹದ ಅವಕಾಶವಿಲ್ಲ” ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಯಾರು ಸರ್ಕಾರಿ ಶಾಲೆಗಳಲ್ಲಿ ಕಲಿತರೋ, ಮೀಸಲಾತಿ ಅಡಿಯಲ್ಲಿ ಶಿಕ್ಷಣ ಪಡೆದರೋ ಅವರು ಈಗ ಅವರೆಡರ ವಿರುದ್ಧವೂ ಮಾತನಾಡುತ್ತಿದ್ದಾರೆ. ಇದೇ ಶಾಲೆಗಳಿಲ್ಲದಿದ್ದಾರೆ ಅವರು ಓದಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಸಾಮಾಜಿಕ, ಆರ್ಥಿಕ ಸುಭದ್ರತೆ ದೊರೆತ ನಂತರ, ಅವು ಬೇರೆ ವಿಷಯಗಳಂತೆ ಕಾಣುತ್ತಿವೆ. ಅವರೆಲ್ಲರೂ ಶಿಕ್ಷಣದ ಖಾಸಗೀಕರಣದ ಸಮರ್ಥಕರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮೊದಲೂ ಕೂಡಾ ಶಿಕ್ಷಣ ಖಾಸಗೀಕರಣದಲ್ಲೇ ಇತ್ತು. ಅದರಿಂದಲೇ ಅದನ್ನು ಧರ್ಮದ ಅಡಿಯಾಳಾಗಿ ಮಾಡಲಾಗಿತ್ತು. ಈ ಸಮುದಾಯ ಓದಬಹುದು, ಇವರು ಓದಬಾರದು ಎಂಬ ಧಾರ್ಮಿಕ ಕಟ್ಟುಪಾಡುಗಳಿದ್ದವು. ಬ್ರಿಟಿಷ್ ಸರ್ಕಾರ ಅದನ್ನು ಬದಲಿಸಿತು. ಈಗ ಶಿಕ್ಷಣದಲ್ಲಿ ಹೊಸ ಪದ್ದತಿಯನ್ನು ತರಲು ಯತ್ನಿಸಲಾಗುತ್ತಿದೆ. ‘ನೀವು ಎಷ್ಟು ಬೇಕಾದರೂ ಓದಿ ನಾವು ಬೇಡ ಎನ್ನುವುದಿಲ್ಲ. ಆದರೆ, ಅದರ ಖರ್ಚು ನೀವೇ ಭರಿಸಬೇಕು’ ಎಂದು ಹೇಳಲಾಗುತ್ತಿದೆ. ಯೋಚಿಸಿ ನೋಡಿ, ಒಂದುವೇಳೆ ಎಲ್ಲ ಸರ್ಕಾರಿ ಶಾಲೆಗಳು ಮುಚ್ಚಿಹೋದರೆ, ನಾವು ವೆಚ್ಚ ಭರಿಸಿ ನಮ್ಮ ಮಕ್ಕಳನ್ನು ಓದಿಸಲು ಸಾಧ್ಯವೇ?” ಎಂದರು.

ಈ ಸುದ್ದಿ ಓದಿದ್ದೀರಾ?: ಮೇ ಸಾಹಿತ್ಯ ಮೇಳ | ದಲಿತ ಚಳವಳಿ ನಾಯಕ ಎನ್ ವೆಂಕಟೇಶ್ ಸೇರಿ ಹಲವರಿಗೆ ಪ್ರಶಸ್ತಿ

“ಶಿಕ್ಷಣದ ಜೊತೆಗೆ ಬಾಬಾಸಾಹೇಬರು ಇನ್ನೆರಡು ವಿಚಾರ ಹೇಳಿದರು, ಸಂಘಟನೆ ಮತ್ತು ಹೋರಾಟ. ಎಲ್ಲಿಯತನಕ ಸಂಘಟನೆ ಇಲ್ಲ, ಅಲ್ಲಿಯತನಕ ನಮ್ಮ ದನಿಯಿಲ್ಲ. ಕರ್ನಾಟಕದ ಚುನಾವಣೆಯಲ್ಲಿ ಬದಲಾವಣೆ ಬಂದಿದೆ. ಬಿಜೆಪಿ ಹೋಗಿ ಕಾಂಗ್ರೆಸ್ ಬಂದಿದೆ. ಆದರೆ, ಕೇಂದ್ರದಲ್ಲಿ ಮನುವಾದಿಗಳಿದ್ದಾರೆ. ಅವರಿಗೆ ಪೂರ್ತಿ ಬಹುಮತ ಇದೆ. ಕೇಂದ್ರ ಸರ್ಕಾರವು ಅನೇಕ ರಾಜಕೀಯ ನಾಯಕರನ್ನು ಇಡಿ, ಸಿಬಿಐ ಇತ್ಯಾದಿಗಳ ಮೂಲಕ ನಿಯಂತ್ರಿಸಲು ನೋಡುತ್ತದೆ” ಎಂದು ಹೇಳಿದರು.

“ರಸ್ತೆಯಲ್ಲಿ ಕೂಗಾಡುವುದರಿಂದ ಪ್ರಯೋಜನವಿಲ್ಲ. ಜನರು ಎಚ್ಚರಗೊಂಡಿದ್ದಾರೆ. ಅವರಿಗೆ ವಿಷಯ ಗೊತ್ತಿದೆ. ಅದನ್ನು ವ್ಯಕ್ತಪಡಿಸುವ ಸಾಧನ ಅವರ ಬಳಿ ಇಲ್ಲ. ಕಾರ್ಯಾಚರಣೆಯ ಸಾಧನವನ್ನು ತಯಾರಿಸುವುದು ಇಂದಿನ ಮುಖ್ಯ ಕೆಲಸ. ಅದನ್ನು ಸಿದ್ಧಪಡಿಸುವ ಯೋಜನೆ ನಮ್ಮ ಬಳಿಯಿರಬೇಕು” ಎಂದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...