ಅಯೋಧ್ಯೆಗೆ ಮೆಮು ರೈಲು ರವಾನೆ; ಕೋಲಾರ ಜನರ ಪರದಾಟ

Date:

ಕೋಲಾರ – ಬೆಂಗಳೂರು – ಯಲಹಂಕ ನಡುವೆ ಪ್ರಯಾಣಿಸುವ ಪ್ರಯಾಣಿಕರು ಎಲೆಕ್ಟ್ರಿಕ್ ರೈಲು (ಮೆಮು) ಸಂಚಾರವಿಲ್ಲದೆ ಹತಾಶರಾಗಿದ್ದಾರೆ. ಕೋಲಾರದವರೆಗೆ ಮೆಮು ರೈಲು ಓಡಿಸಬೇಕೆಂದು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಆದರೆ, ಮೆಮು ರೈಲುಗಳ ಕೊರತೆಯಿಂದ ಈ ಬೇಡಿಕೆ ಈಡೇರಿಸಲು ರೈಲ್ವೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಆದರೂ, ಇತ್ತೀಚೆಗೆ, ವಿನಂತಿಯ ಮೇಲೆ ಬೆಂಗಳೂರು ವಿಭಾಗವು ಅಯೋಧ್ಯೆಗೆ ಮೆಮು ರೈಲೊಂದನ್ನು ಕಳಿಹಿಸಿದೆ ಎಂದು ತಿಳಿದುಬಂದಿದೆ.

ಚಿಂತಾಮಣಿ ಮೂಲದ ಆರ್‌ಟಿಐ ಕಾರ್ಯಕರ್ತ ಅಮೃತಗೌಡ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೈಋತ್ಯ ರೈಲ್ವೇ ಉತ್ತರಿಸಿದೆ. “ವಿನಂತಿಯ ಮೇರೆಗೆ ಅಯೋಧ್ಯೆಗೆ ಒಂದು ಮೆಮು ರೈಲನ್ನು ಕಳುಹಿಸಲಾಗಿದೆ. ಅದನ್ನು ಇನ್ನೂ ಹಿಂದಿರುಗಿಸಲಾಗಿಲ್ಲ. ಅಲ್ಲದೆ, ಕೋಲಾರ ರೈಲು ನಿಲ್ದಾಣದಲ್ಲಿ ಮೆಮು ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ” ಎಂದು ಹೇಳಿದೆ.

ಏಳು ತಿಂಗಳ ಹಿಂದೆ ಕೋಲಾರ ಮೂಲಕ ಯಲಹಂಕ ಮತ್ತು ಬಂಗಾರಪೇಟೆ ನಡುವಿನ 149 ಕಿ.ಮೀ ರೈಲು ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡೀಸೆಲ್ ರೈಲುಗಳನ್ನು ಎಲೆಕ್ಟ್ರಿಕ್ ರೈಲುಗಳಾಗಿ ಬದಲಾಯಿಸಬೇಕು. ಮೆಮು ರೈಲುಗಳನ್ನು ಓಡಿಸಬೇಕು. ಈ ರೈಲುಗಳು ಹೆಚ್ಚಿನ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುತ್ತವೆ. ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಸ್ತುತ ಮೆಮು ರೈಲುಗಳು ಬೆಂಗಳೂರಿನಿಂದ ಚಿಕ್ಕಬಳ್ಳಾಪುರದವರೆಗೆ ಮಾತ್ರ ಚಲಿಸುತ್ತಿವೆ. ಅವುಗಳನ್ನು ಕೋಲಾರದವರೆಗೆ ವಿಸ್ತರಿಸಲು ರೈಲ್ವೇ ಮುಂದಾಗಿಲ್ಲ.

“ಕೋಲಾರದವರೆಗೆ ಮೆಮು ಓಡಿಸಲು ನಮ್ಮಲ್ಲಿ ಸಾಕಷ್ಟು ಮೆಮು ರೈಲುಗಳು ಇಲ್ಲ. ಇದಲ್ಲದೆ, ಇತ್ತೀಚೆಗೆ, ಅಯೋಧ್ಯೆಗೆ ಮೆಮು ರೈಲನ್ನು ಕಳುಹಿಸಲಾಗಿದೆ. ಆದರೆ, ಅದು ಮರಳಿಬಂದಿಲ್ಲ. ನಾವು ಅದನ್ನು ಬಳಸಬಹುದಿತ್ತು. ಆ ಮೆಮು ಬಳಕೆಯಿಂದ ದಿನಕ್ಕೆ ಕನಿಷ್ಠ 2-3 ಟ್ರಿಪ್‌ ಓಡಿಸಬಹುದು. ಈಗ ಅದೂ ಸಾಧ್ಯವಿಲ್ಲ” ಎಂದು ರೈಲ್ವೆ ಮೂಲಗಳು ಹೇಳಿರುವುದಾಗಿ ‘ಟಿಎನ್‌ಐಇ’ ವರದಿ ಮಾಡಿದೆ.

“ಮೆಮು ರೈಲಿನ ಕೊರತೆಯೊಂದೇ ಕಾರಣವಲ್ಲ. ಸಿಬ್ಬಂದಿ ಕೊರತೆಯಿಂದ ನಾವೂ ಬಳಲುತ್ತಿದ್ದೇವೆ. ನಾವು ಕೋಲಾರದವರೆಗೆ ಮೆಮು ರೈಲುಗಳನ್ನು ಪ್ರಾರಂಭಿಸಿದರೆ, ಅವುಗಳನ್ನು ನಿರ್ವಹಿಸಲು ಮತ್ತು ವಿದ್ಯುತ್ ಉಪಕರಣಗಳನ್ನು ಸಹ ರಕ್ಷಿಸಲು ಕೋಲಾರ ರೈಲು ನಿಲ್ದಾಣದಲ್ಲಿ ನಮಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಸದ್ಯಕ್ಕೆ ಯಾವುದೇ ನೇಮಕಾತಿ ನಡೆಯುತ್ತಿಲ್ಲ,” ಎಂದು ರೈಲ್ವೇ ವಿಭಾಗ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ಹಾಸನ | ಅಲೆಮಾರಿ ಸಮುದಾಯದ ಜನರ ಮೇಲೆ ಸವರ್ಣೀಯರ ದೌರ್ಜನ್ಯ; ಪ್ರಕರಣ ದಾಖಲು

ಕೋಲಾರದಿಂದ ಯಲಹಂಕಕ್ಕೆ ಪ್ರಯಾಣಿಸುವವರಲ್ಲಿ ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಸೇರಿದ್ದಾರೆ. ಮೆಮು ರೈಲು ಓಡಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ-ಕೋಲಾರ ರೈಲು ಬಳಕೆದಾರರ ಸಂಘದ ಸದಸ್ಯ ಯು ಯಧುಕೃಷ್ಣ ಹೇಳಿದ್ದಾರೆ.

“ನಾಲ್ಕು ಡೆಮು ರೈಲುಗಳು ಬೆಂಗಳೂರು-ಕೋಲಾರ ನಡುವೆ ಓಡುತ್ತಿವೆ. ಅವು ಕೆಎಸ್‌ಆರ್ ಬೆಂಗಳೂರು – ಯಲಹಂಕ – ಕೋಲಾರಕ್ಕೆ ಸಂಪರ್ಕಿಸುತ್ತವೆ. ಅಲ್ಲದೆ, ಒಂದು ರೈಲು ಹಾಸನದವರೆಗೆ ಸಹ ಚಲಿಸುತ್ತದೆ. ಡೆಮು ರೈಲುಗಳಲ್ಲಿ ಕೋಲಾರದಿಂದ ಬೆಂಗಳೂರಿಗೆ 3 ಗಂಟೆಗಳ ಕಾಲ ಪ್ರಯಾಣ. ಡೆಮು ರೈಲುಗಳಲ್ಲಿ ಅನೇಕ ಪ್ರಯಾಣಿಕರಿಗೆ ಸೀಟುಗಳೇ ಇರುವುದಿಲ್ಲ. ಅವರು ತಮ್ಮ ಕೆಲಸದ ಸ್ಥಳವನ್ನು ತಲುಪುವ ಹೊತ್ತಿಗೆ ದಣಿದುಹೋಗುತ್ತಾರೆ. ಒಂದು ಡೆಮು ರೈಲಿನಲ್ಲಿ ಎಂಟು ಕೋಚ್‌ಗಳು ಇರುತ್ತವೆ ಮತ್ತು ಗರಿಷ್ಠ 800 ಪ್ರಯಾಣಿಕರಿಗೆ ಮಾತ್ರ ಕುಳಿತುಕೊಳ್ಳಲು ಆಸನಗಳು ಇರುತ್ತವೆ. ಆದರೆ, 16 ಬೋಗಿಗಳ ಮೆಮು ರೈಲಿನಲ್ಲಿ ಆರಾಮದಾಯಕವಾಗಿ 1,000 ಪ್ರಯಾಣಿಕರು ಕುಳಿತು ಪ್ರಯಾಣಿಸಬಹುದು. ಅಲ್ಲದೆ, ಮೆಮು ವೇಗವಾಗಿ ಚಲಿಸುವುದರಿಮದ ಪ್ರಯಾಣದ ಸಮಯವೂ ಉಳಿಯುತ್ತದೆ” ಎಂದು ಯಧುಕೃಷ್ಣ ವಿವರಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...