ಮೈಸೂರು ಜಿಲ್ಲೆ ಕೃಷ್ಣರಾಜನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನದಂದು ಶಾಸಕರಾದ ಡಿ. ರವಿಶಂಕರ್ ಗೌರವ ಸಲ್ಲಿಸಿದರು.
ಅಂಬೇಡ್ಕರ್ ಅವರು ಸಮಾನತೆಯ ಹರಿಕಾರರಾಗಿ, ಅಸಮಾನತೆ ತೊಡೆದು ಹಾಕುವಲ್ಲಿ ಸಂವಿಧಾನ ರಚಿಸಿ, ನಿಯಮಾವಳಿಗಳ ಮೂಲಕ ಎಲರಿಗೂ ಸಮಾನಾದ ಹಕ್ಕುಗಳನ್ನು ರಚಿಸಿದ್ದಾರೆ. ಶೋಷಿತ, ಧಮನಿತ, ದಲಿತರ ಏಳಿಗೆಗಾಗಿ ಒಳಮೀಸಲಾತಿ ಜಾರಿ ಕುರಿತಾಗಿ ಅಂದೇ ಬರೆದಿದ್ದಾರೆ. ಇಂತಹ ಮಹಾನಾಯಕರಿಗೆ ದೀಪ ನಮನದ ಮೂಲಕ ಗೌರವ ಸಲ್ಲಿಸಿದರು.

ಬೆಳಗ್ಗೆ 10-30 ರ ಸುಮಾರಿಗೆ ದಲಿತ ಸಂಘಟನೆಗಳ ಮುಖಂಡರು ಹಾಗೂ ಶಾಸಕರು ಮಾಲಾರ್ಪಣೆ ಮಾಡಿದರು. ಸಂಜೆ 7 ರ ಹೊತ್ತಿಗೆ ಶಾಸಕರಾದ ಡಿ. ರವಿಶಂಕರ್ ಹಾಗೂ ತಹಶೀಲ್ದಾರ್ ಸುರೇಂದ್ರಮೂರ್ತಿ ಅವರು ದೀಪ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯಿಂದ ವಿವಿ ರಸ್ತೆ ಮೂಲಕ, ಪುರಸಭೆ ವೃತ್ತ, ಸಿಎಂ ರಸ್ತೆ, ಡಬಲ್ ಟ್ಯಾಂಕ್, ಬಜಾರ್ ರಸ್ತೆ ಮೂಲಕ ಮೆರವಣಿಗೆ ಸಾಗಿತು. ಬಳಿಕ ಕೃಷ್ಣರಾಜನಗರದ ತತ್ವಜ್ಞಾನಿ ಕಲಾತಂಡದಿಂದ ನುಡಿನಮನ ಕಾರ್ಯಕ್ರಮ ಹಾಗೂ ಹನಸೋಗೆ ಕಲಾತಂಡದಿಂದ ನೃತ್ಯರೂಪಕ ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಶಂಕರಮೂರ್ತಿ, ದಲಿತ ಮುಖಂಡರಾದ ಹನಸೋಗೆ ನಾಗರಾಜು, ನಂಜಪ್ಪ, ಚೆಲುವರಾಜು ಹೊಸಕೋಟೆ, ಕಳ್ಳಿಮುದ್ದನಹಳ್ಳಿ ಚಂದ್ರು, ಗುರುಸ್ವಾಮಿ ಮೂಲೆಪೆಟ್ಲು, ಶಿವು ಹೆಬ್ಬಾಳು, ಮಾದೇವ (ಗುಂಡ) ಗಂಧನಹಳ್ಳಿ, ರುಕ್ಮಾಂಗದ ಡಿ. ಕೆ ಕೊಪ್ಪಲು, ಶಾಂತಿ ರಾಜು, ಗೌರಮ್ಮ ಕಗ್ಗೆರೆ ಸೇರಿದಂತೆ ಇನ್ನಿತರರು ಇದ್ದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಲಗಿದ್ದ ವಿದ್ಯಾರ್ಥಿಗೆ ಹಾವು ಕಡಿತ; ಆಸ್ಪತ್ರೆಗೆ ದಾಖಲು






