ಕೋಮು ಪ್ರಚೋದನಾತ್ಮಕ ಭಾಷಣದ ಮೂಲಕ ಸಮಾಜದ ಸಾಮರಸ್ಯ ಕದಡುವವರ ಪರವಾಗಿ ನಿಲ್ಲುವ ಬಿಜೆಪಿ ಶಾಸಕರ ನಡೆ ಖಂಡನೀಯವೆಂದು ಎಸ್ಡಿಪಿಐ ಮಂಗಳೂರು ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕವಾಗಿ ಕಮೆಂಟ್ ಹಾಕಿದ ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಆತನ ಪರವಾಗಿ ಹೇಳಿಕೆ ನೀಡಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ನಡೆ ಖಂಡನೀಯವೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ಸಮಾಜಘಾತುಕ ಕುಕೃತ್ಯಗಳಲ್ಲಿ ಭಾಗಿಯಾಗಿ ಕೊಲೆಯಂತಹ ಕೃತ್ಯವನ್ನು ಸಮರ್ಥಸಿ ಹೇಳಿಕೆ ನೀಡುವ ರೌಡಿಶೀಟರ್ ಗಳ ಪೋಷಕನಾಗಿರುವ ಸಮಾಜಘಾತುಕ ಬಜರಂಗದಳದ ಶರಣ್ ಪಂಪ್ವೆಲ್ ಅವನಂತಹ ವ್ಯಕ್ತಿಗಳ ಪರವಾಗಿ ಚುನಾಯಿತ ಜನಪ್ರತಿನಿಧಿಯಾದ ವೇದವ್ಯಾಸ್ ಕಾಮತ್ ಮಾತಾನಾಡಯವುದು ಸಂವಿಧಾನವಿರೋದಿ ನಡೆ, ಗೂಂಡಾನ ಪರವಾಗಿ ನಿಂತು ಪೋಲಿಸರ ವಿರುದ್ದ ಗೂಂಡಾಗಿರಿ ತೋರಿಸಿದ ಕಾಮತ್ ಅವರಿಗೆ ಶಾಸಕ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ. ಸಮಾಜದಲ್ಲಿ ದ್ವೇಷದ ಬೀಜ ಬಿತ್ತುವವರ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನಿನ ಕರ್ತವ್ಯವಾಗಿದ್ದು, ಕೋಮು ಪ್ರಚೋದಕ ಕ್ರಿಮಿಗಳನ್ನು ಬೆಂಬಲಿಸುವ ಜನಪ್ರತಿನಿಧಿಯ ನಡೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆ ತರುವಂತಾಗಿದೆ. ಶಾಂತಿ, ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸ್ಥಾನದಲ್ಲಿರುವ ಶಾಸಕರು ಬದಲಾಗಿ ಕೋಮು ಅಸಹಿಷ್ಣುತೆಗೆ ಆಸರೆ ನೀಡುವುದು ಅತ್ಯಂತ ವಿಷಾದನೀಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು | ತುಳು ಮೌಖಿಕ ಸಾಹಿತ್ಯವು ಇತಿಹಾಸದ ಕೊಂಡಿ: ಡಾ ತುಕಾರಾಂ ಪೂಜಾರಿ
ಎಸ್ಡಿಪಿಐ ಪಕ್ಷವು ಇಂತಹ ಯಾವುದೇ ಕೋಮು ಪ್ರಚೋದನೆ ಹಾಗೂ ಅದರ ಬೆಂಬಲಿಗರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.





