ಮುಂಡಗೋಡ: ಇಲ್ಲಿನ ಟಿಬೇಟಿಯನ್ ಕ್ಯಾಂಪ್ನಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಎಸ್. ಕಾದ್ರೊಳ್ಳಿ ಬಣ) ವತಿಯಿಂದ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
ಬೌದ್ಧ ಧರ್ಮದ ಪರಮೋಚ್ಚ ಗುರುಗಳು ಹಾಗೂ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಪೂಜ್ಯ ದಲಾಯಿ ಲಾಮ ಅವರನ್ನು ಸಂಘಟನೆಯ ಪದಾಧಿಕಾರಿಗಳು ಭೇಟಿ ಮಾಡಿ, ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದಲಾಯಿ ಲಾಮ ಅವರಿಗೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ನೀಡುವುದರ ಮೂಲಕ ಸಂಘಟನೆಯ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು. ಶಾಂತಿ ಮತ್ತು ಮಾನವೀಯತೆಯ ಸಂದೇಶ ಸಾರುವ ಇಬ್ಬರು ಮಹಾನ್ ಚೇತನಗಳ ಆಶಯಗಳನ್ನು ಈ ಗೌರವ ಸಮರ್ಪಣೆಯು ಪ್ರತಿಬಿಂಬಿಸುವಂತಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ್ ಸಂಗಮೇಶ್ವರ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಹರಿಜನ ಚಿಗಳ್ಳಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಮರಿಯಪ್ಪ ಬೆನಕನಹಳ್ಳಿ ಅವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಮುಂಡಗೋಡ ತಾಲೂಕಾಧ್ಯಕ್ಷರಾದ ನಾಗರಾಜ್ ಮೇತ್ರಿ, ತಾಲೂಕ ಗೌರವಾಧ್ಯಕ್ಷರಾದ ಎನ್.ಎಮ್. ಮೇತ್ರಿ ಮತ್ತು ಪಾಳಾ ತಾಲೂಕ ಉಪಾಧ್ಯಕ್ಷರಾದ ಚಂದ್ರಶೇಖರ್ ತೊಂಡೂರ್ ಅವರು ಸನ್ಮಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ತಾಲೂಕಿನಾದ್ಯಂತ ಸಕ್ರಿಯಗೊಂಡ ಇಟ್ಟಿಗೆ ಭಟ್ಟಿಗಳು: ಅರಣ್ಯ–ಪರಿಸರದ ಮೇಲೆ ಹೆಚ್ಚಿದ ಒತ್ತಡ
ಇನ್ನುಳಿದಂತೆ ತಾಲೂಕ ಪ್ರಧಾನ ಕಾರ್ಯದರ್ಶಿ ಅರ್ಜುನ್ ಸನವಳ್ಳಿ, ಉಪಾಧ್ಯಕ್ಷ ಕನಕಪ್ಪ ಹರಿಜನ, ಕೋಶಾಧ್ಯಕ್ಷ ಮಂಜುನಾಥ ಗೋಟಗೊಡಿಕೊಪ್ಪ ಹಾಗೂ ಪ್ರಮುಖರಾದ ಅಶೋಕ್ ಹರಿಜನ, ಶಂಕರ್ ಹರಿಜನ, ಗಣಪತಿ ನಡಕಿನಮನಿ, ಬಸವರಾಜ ನಡುಕಿನಮನಿ, ಬಸವರಾಜ್ ಅತ್ತಿವೇರಿ ಮತ್ತು ಪರಶುರಾಮ್ ಹರಿಜನ ಉಪಸ್ಥಿತರಿದ್ದರು.
ಅಲ್ಲದೆ ಕೊಳಗಿ ಪರಶುರಾಮ ಗೌಡಣ್ಣನವರ್ ಶಿಡ್ಲಗುಂಡಿ, ವೀರಭದ್ರ ಕೊಳಗಿ ಹಾಗೂ ಮಹಿಳಾ ಘಟಕದ ತಾಲೂಕ ಅಧ್ಯಕ್ಷರಾದ ಶಿವಕ್ಕ ಹರಿಜನ್ ಹುನಗುಂದ, ಉಪಾಧ್ಯಕ್ಷೆ ಸರೋಜಾ ದೊಡ್ಮನಿ ಮತ್ತು ಹುನುಗುಂದ ಘಟಕದ ಅಧ್ಯಕ್ಷರಾದ ಮಂಜುನಾಥ್ ಹರಿಜನ ಸೇರಿದಂತೆ ಸಂಘಟನೆಯ ಅನೇಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





