ಮುಂಡಗೋಡ ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಗ್ರಾಮ ಅಭಿವೃದ್ಧಿ ಸಮಿತಿ, ಲೊಯೋಲ ವಿಕಾಸ ಕೇಂದ್ರ–ಮುಂಡಗೋಡ ಹಾಗೂ ಯುವರತ್ನ ಯುವ ಒಕ್ಕೂಟ–ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಲೊಯೋಲ ವಿಕಾಸ ಕೇಂದ್ರದ ಕಾರ್ಯಕರ್ತ ಭರಮಣ್ಣ ಚಕ್ರಸಾಲಿ ಮಾತಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಸಂವಿಧಾನ ರಚನೆಗೆ ಅವರ ಕೊಡುಗೆ ಹಾಗೂ ಅವರು ನೀಡಿದ “ಶಿಕ್ಷಣ–ಸಂಘಟನೆ–ಹೋರಾಟ” ತತ್ವಗಳ ಬಗ್ಗೆ ಗ್ರಾಮಸ್ಥರಿಗೆ ವಿವರಿಸಿದರು. ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ಶ್ರೀಕಾಂತ ಪೂಜಾರ್ ಮಾತನಾಡಿ,“ನಾವು ಎಲ್ಲರೂ ಅಂಬೇಡ್ಕರ್ ರಚಿಸಿದ ಸಂವಿಧಾನದಡಿ ಬದುಕುತ್ತಿದ್ದೇವೆ. ಅದರ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಅಂಬೇಡ್ಕರ್ ಅವರ ಕನಸು ನಿಜವಾಗುತ್ತದೆ,” ಎಂದರು.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ರಾತ್ರಿ ಪೂರ್ತಿ ಅಕ್ರಮವಾಗಿ ಮರಳು ಸಾಗಾಟ; ಅರಣ್ಯ ಇಲಾಖೆಯ ಮೌನಕ್ಕೆ ಸಾರ್ವಜನಿಕರ ಆಕ್ರೋಶ
ಕಾರ್ಯಕ್ರಮದಲ್ಲಿ ಕೋಡಂಬಿ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಅರಳೇಶ್ವರ, ಜನವೇದಿಕೆ ನಾಯಕಿ ಸಾವಿತ್ರಿ ಪೂಜಾರ್, ಸಮಿತಿ ಸದಸ್ಯ ಸಿದ್ರಾಮಯ್ಯ ಬಡಿಗೇರ್, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮ ಅಭಿವೃದ್ಧಿ ಸಮಿತಿಯ ಮಹಿಳೆಯರು ಪಾಲ್ಗೊಂಡಿದ್ದರು. ಶ್ರೀಮತಿ ಮಂಗಳಾ ಮೋರೆ ಸ್ವಾಗತಿಸಿ, ಶ್ರೀ ಪ್ರವೀಣ ಶೇದಿಯಣ್ಣನವರ ವಂದನೆ ಸಲ್ಲಿಸಿದರು.ಶ್ರೀ ಹಜರತ್ ಮುಲ್ಲಾನವರ ಅವರು “ಸಂವಿಧಾನ ಅರಿಯೋ–ಸಂವಿಧಾನ ತಿಳಿಯೋ” ಎಂಬ ಜಾಗೃತಿ ಹಾಡನ್ನು ಹೇಳಿದರು.





