ಮೈಸೂರು | 2022ರಲ್ಲಿ ಮೋದಿ ಯೋಗ ಕಾರ್ಯಕ್ರಮಕ್ಕೆ 21 ಕೋಟಿ ರೂ. ಖರ್ಚು; ಪ್ರತಿಫಲ ಶೂನ್ಯ

Date:

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದ ಹಿಂದಿನ ವರ್ಷ 2022ರಲ್ಲಿ ಪ್ರಧಾನಿ ಮೋದಿ ಮೈಸೂರಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದ್ದರು. 15 ಗಂಟೆಗಳ ಕಾಲ ಮೈಸೂರಿನಲ್ಲಿದ್ದ ಅವರು ಸಾರ್ವಜನಿಕ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಯೋಗ ಮಾಡಿ, ಭಾಷಣಗೈದು ಹೋಗಿದ್ದರು.

ಅಂದು, ಅವರ ಆ 15 ಗಂಟೆಗಳ ಪ್ರವಾಸ ಮತ್ತು ಗರಿಷ್ಠ 2 ಗಂಟೆಗಳ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 21.6 ಕೋಟಿ ರೂ. ವೆಚ್ಚವಾಗಿತ್ತು. ಅಂದರೆ, 15 ಗಂಟೆಗಳ ಪ್ರವಾಸದಲ್ಲಿ ಗಂಟೆಗೆ ಸರಾಸರಿ 1.4 ಕೋಟಿ ರೂ. ವೆಚ್ಚವಾಗಿತ್ತು. 21 ಕೋಟಿ ರೂ. ವ್ಯಯಿಸಿ ಯೋಗ ಮಾಡಿದ ದುಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದರೆ, ತಪ್ಪಾಗಲಾದರು.

ಅದಾಗ್ಯೂ, ಆ ಯೋಗ ದಿನದ ಆಚರಣೆಯಿಂದ ರಾಜ್ಯಕ್ಕಾಗಲೀ, ಮೈಸೂರಿಗಾಗಲೀ ಯಾವುದೇ ಪ್ರಯೋಜನವಾಗಿದ್ದು ಈವರೆಗೆ ಕಾಣಸಿಗುತ್ತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂದು, ಜೂನ್ 2022ರ ಜೂನ್ 21ರಂದು ಮೈಸೂರಿನಲ್ಲಿ ಯೋಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದ ಮೋದಿ, 45 ನಿಮಿಷ ಯೋಗ ಮಾಡಿ, ರಾಮ ಮನೆತನದ ಪ್ರಮೋದಾ ದೇವಿ (ಹಾಲಿ ಸಂಸದ ಯದುವೀರ್ ಒಡೆಯಾರ್ ತಾಯಿ) ಅವರ ಮನೆಯಲ್ಲಿ ರಾಜಾತಿಥ್ಯ ಪಡೆದು, ಬೆಳ್ಳಿ ತಟ್ಟೆಯಲ್ಲಿ ಉಪಹಾರ ತಿಂದು ದೆಹಲಿಗೆ ತೆರಳಿದ್ದರು.

ದೇಶ ಸ್ವಾತಂತ್ರ್ಯಗೊಂಡು 75 ವರ್ಷಗಳ ಪೂರೈಸಿದ್ದ ಅಮೃತ ಮಹೋತ್ಸವದ ಆ ವರ್ಷ ಮೋದಿ ಯೋಗದಿನವನ್ನು ಮೈಸೂರಿನಲ್ಲಿ ಆಚರಿಸಿದ್ದು, ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಮೈಸೂರಿನಲ್ಲಿ ಯೋಗ ವಿಶ್ವವಿದ್ಯಾಲಯ ತೆರೆಯಲಾಗುತ್ತದೆ ಎಂಬ ಚರ್ಚೆ ಆಗ್ಗಾಗ್ಗೆ ನಡೆದಿತ್ತು. ಆದರೆ, ಅದರ ಯಾವುದೇ ಕುರುಹು ಈವರೆಗೆ ದೊರೆತಿಲ್ಲ.

 

ಇದೀಗ, ಯೋಗದಲ್ಲಿ ಭಾಗಿಯಾಗಿ 2 ವರ್ಷಗಳ ಕಳೆದಿವೆ. ಯೋಗ ವಿಶ್ವವಿದ್ಯಾಲಯ ನಿರ್ಮಾಣ ಮಾಡದೇ ಇದ್ದರೂ, ಪರವಾಗಿಲ್ಲ. ಕನಿಷ್ಠ, ಯೋಗ ಭವನವನ್ನಾದರೂ ನಿರ್ಮಾಣ ಮಾಡಿ ಎಂಬ ಬೇಡಿಕೆಯನ್ನ ಮೈಸೂರಿನ ಯೋಗಾಸಕ್ತರು ಆಯುಷ್ ಇಲಾಖೆಯ ಮುಂದಿಟ್ಟಿದ್ದಾರೆ. ಆದರೆ, ಅದಕ್ಕೂ ಯಾವುದೇ ಸ್ಪಂದನೆ ತೊರೆದಿಲ್ಲ.

ಮೋದಿ ಅವರು ಬಂದರು, ನಾಲ್ಕಾರು ಯೋಗಾಸನಗಳನ್ನು ಮಾಡಿದರು, ಅಬ್ಬರದ ಭಾಷಣ ಮಾಡಿ ಪ್ರಚಾರ ಪಡೆದರು, ರಾಜಾತಿಥ್ಯ ಪಡೆದು ಮರಳಿದರು. ಇದಕ್ಕಾಗಿ ಖರ್ಚಾಗಿದ್ದು ಬರೋಬ್ಬರಿ 21.6 ಕೋಟಿ ರೂ.ಗಳು. ಆದರೆ, ಮೈಸೂರಿಗೆ ದೊರೆತದ್ದು, ಶೂನ್ಯ ಪ್ರತಿಫಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...