ಮೈಸೂರು | ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ: ಸಾಹಿತಿ ದೇವನೂರು ಮಹಾದೇವ ಕರೆ

Date:

ಕೆಂಡವನ್ನು ಮಡಿಲಿನಲ್ಲಿ ಇಟ್ಟುಕೊಂಡ ಅನುಭವ ನಮ್ಮದು, ರೈತರನ್ನು ಭಾರತದ ಬೆನ್ನೆಲುಬು ಎನ್ನುತ್ತಾರೆ. ಅದರಲ್ಲೂ ಮೋದಿಯವರೂ ಕೂಡ ಸಮರ್ಥನೆ ಮಾಡುತ್ತಾರೆ. ಆದರೆ ರೈತರ ಮಣಿಕಟ್ಟು ಕಿತ್ತು ನುಂಗಿ ನೀರು ಕುಡಿದು, ರೈತರ ಬದುಕು ಕಿತ್ತವರು ಇವರೇ ಎಂದು ಸಾಹಿತಿ ದೇವನೂರು ಮಹಾದೇವ ಅವರು ದೂರಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ‘ರೈತ ಸಮುದಾಯವನ್ನು ಉಳಿಸಿ’ ಅಭಿಯಾನದ ಭಾಗವಾಗಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

“ಮನೆಗೊಂದು ಕರಪತ್ರ ಘೋಷಣೆಯೊಂದಿಗೆ ಕಳೆದ ದಿನ ಅಮೃತ ಭೂಮಿಯಲ್ಲಿ ಪ್ರೊ ಎಂಡಿಎನ್ ಸ್ಮಾರಕದಿಂದ ಅಧಿಕೃತ ಚಾಲನೆಯಾಗಿದೆ. ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಕರಪತ್ರ ಹಿಡಿದು “ಬಿಜೆಪಿ ಸೋಲಿಸಿ” ಅಭಿಯಾನ ಕೈಗೊಳ್ಳಲಿದ್ದಾರೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಪ್ರಧಾನಿಯವರು, ಸ್ವಾಮಿನಾಥನ್ ವರದಿ ಅನುಸಾರ ಎಂಎಸ್‌ಪಿ ಜಾರಿ ಮಾಡುತ್ತೇವೆಂದು ಹೇಳಿದರು. ಆದರೆ ಯಾವುದನ್ನೂ ಮಾಡಲೇ ಇಲ್ಲ. ರೈತ ಸಮುದಾಯ ನೊಂದಿದೆ. ಬೆಳೆದ ಬೆಳೆಗೆ ಬೆಲೆ ಇಲ್ಲದೆ ಒಂದು ದಿನ ತನ್ನ ಭೂಮಿ ಮಾರಿ ಪಟ್ಟಣ ಸೇರಬೇಕಾದ ಪರಿಸ್ಥಿತಿ ರೈತನದ್ದು” ಎಂದು ವಿಷಾದಿಸಿದರು.

“ಪ್ರಧಾನಿಯವರು ಈವರೆಗೆ ರೈತರ ಬಗ್ಗೆ ಆಡಿದ ಮಾತುಗಳು ಮಾತಾಗಿಯೇ ಉಳಿದಿವೆಯೇ ಹೊರತು ಕಾರ್ಯರೂಪಕ್ಕೆ ಬರಲೇ ಇಲ್ಲ. ಅನುಷ್ಠಾನ ಮಾಡಲಿಲ್ಲ” ಎಂದು ಆರೋಪಿಸಿದರು.

“ರೈತರು ತಮ್ಮ ತಮ್ಮ ಬೇಡಿಕೆ ಇಟ್ಟು ಹೋರಾಟ ಮಾಡುತ್ತಿದ್ದಾರೆ. ಹೃದಯ ಇರದ ಪ್ರಧಾನಿಗೆ, ರೈತರು ಹೋರಾಟ ಮಾಡುತ್ತಾರೆ ಹೋಗುತ್ತಾರೆ ಎನ್ನುವ ಜಡ್ಡಿನ ನಿಲುವಿದೆಯೇ ಹೊರತು, ವಾಸ್ತವದ ಅರಿವಿಲ್ಲ. ಮನುಷ್ಯತ್ವ ಮರೆತ ವ್ಯಕ್ತಿಯಿಂದ ರೈತ ಕುಲಕ್ಕೆ ಸಾಮಾಜಿಕ ನ್ಯಾಯ ಖಂಡಿತ ಸಿಗಲಾರದು” ಎಂದರು.

“ಪ್ರಧಾನಿ ಹೇಳಿದಂತೆ ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಪರಮಾಪ್ತರಾದ ಕಾರ್ಪೊರೇಟ್ ಕುಳ ಅದಾನಿ, ಅಂಬಾನಿ ಅವರ ಆದಾಯ ದುಪ್ಪಟ್ಟು ಆಗಿದೆಯೇ ಹೊರತು ಇನ್ನಾರ ಬದುಕೂ ಹಸನಾಗಲಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.

“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ, ಎಂಎಸ್‌ಪಿ ನಿಗದಿ ಮಾಡುವುದಾಗಿಯೂ ಕಾಂಗ್ರೆಸ್ ಹೇಳಿದೆ.‌ ಆದರೆ ನುಡಿದಂತೆ ನಡೆಯದೇ ಇದ್ದರೆ ಕಾಂಗ್ರೆಸ್‌ಗೂ ಬುದ್ಧಿ ಕಲಿಸದೆ ಬಿಡೆವು” ಎಂದರು.

“ಬಣ್ಣ ಬಣ್ಣದ ಪೋಷಕಿನ, ಬಣ್ಣ ಬಣ್ಣದ ಮಾತಿನ ವ್ಯಕ್ತಿ ವಿಕಸಿತ ಭಾರತದ ಬಗ್ಗೆ ಮಾತಾಡುತ್ತಾ, ಅಚ್ಛೇ ದಿನ್ ಅಚ್ಛೇ ದಿನ್ ಎಂದು ಹತ್ತು ವರ್ಷಗಳಲ್ಲಿ ಏನನ್ನೂ ಮಾಡಲೇ ಇಲ್ಲ” ಎಂದು ಕಿಡಿಕಾರಿದರು.

“ನಿರುದ್ಯೋಗ ಯುವಜನರ ಬದುಕು ಹಿಂಡಿದೆ. ಜೀವನ ಜರ್ಜರಿತವಾಗಿದೆ. ಆದರೆ ಯುವ ಪೀಳಿಗೆಯ ಬದುಕಿನ ಚಿಂತೆ ಪ್ರಧಾನಿ ಅವರಿಗೆ ಅರಿವಿಲ್ಲ. ರಥ ಚಕ್ರಕ್ಕೆ ಸಿಲುಕಿದ ನಿಂಬೆಯಂತೆ ಬದುಕು ದುತ್ತರವಾಗಿದೆ. ಬಿಜೆಪಿಗೆ ಮಣಿಪುರ ಬೆಂದರೂ ಕಾಣಲೇ ಇಲ್ಲ, ಮಣಿಪುರದ ಹಿನ ಕೃತ್ಯ ಗಮನ ಸೆಳೆಯಲೇ ಇಲ್ಲ, ಒಮ್ಮೆಯೂ ಕೂಡ ಮಣಿಪುರಕ್ಕೆ ಕಾಲಿಡಲಿಲ್ಲ. ಇದು ನಮ್ಮ ದೇಶದ ದುರ್ದೈವ” ಎಂದರು.

“ಪ್ರಜ್ಞಾವಂತ ನಾಗರಿಕರು ಬ್ರಾಹ್ಮಣ್ಯ ಮನಸ್ಥಿತಿಯನ್ನು ಒಪ್ಪಲು ಸಾಧ್ಯವೇ ಇಲ್ಲ.
ಯದುವೀರ್, ಡಾ ಮಂಜುನಾಥ್ ಅವರ ಮೇಲೆ ಗೌರವ ಇದೆ. ಇವರಿಬ್ಬರೂ ಅಮಾಯಕರು.
ಹಿಂದುತ್ವದ ಖೆಡ್ಡಕ್ಕೆ ಬಿದ್ದಿದ್ದಾರೆ. ಇವರನ್ನು ಭಗವಂತ ಕಾಪಾಡಬೇಕಿದೆ. ಇವರ ಸೋಲಿನ ಮೂಲಕ ಇವರ ಉಳಿವು ಸಾಧ್ಯ” ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೇವನೂರು ಮಹಾದೇವ, “ಬಿಜೆಪಿ ಸೋಲಿಸಬೇಕು,
ಅನಿವಾರ್ಯವಾಗಿ ಕಾಂಗ್ರೆಸ್ ಗೆಲ್ಲಿಸಬೇಕು” ಎಂದು ಹೇಳಿದರಲ್ಲದೆ, ಪರ್ಯಾಯ ರಾಜಕಾರಣದ ಸುಳಿವು ಕೊಟ್ಟು ಸರ್ವೋದಯ ಪಕ್ಷದ ನಿಲುವು ಸ್ಪಷ್ಟ ಪಡಿಸಿದರು.

ಚಾಮರಸ ಮಾಲಿ ಪಾಟೀಲ್ ಮಾತನಾಡಿ, “ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆ ಬರೀ ಸುಳ್ಳಾಗಿದೆ. ಬಿಜೆಪಿ ಸರ್ಕಾರ ಬಂದ ಕೂಡಲೇ ರೈತರ ಕಷ್ಟ ನಿವಾರಣೆ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಉತ್ತರ ಪ್ರದೇಶದ ರ್‍ಯಾಲಿಯಲ್ಲಿ ಹೇಳುತ್ತಾರೆ. ಆಗ ಅಲ್ಲಿ ನೆರೆದಿದ್ದ ಜನ ಕಡತಾನನ ಗೈದು ಸಂತಸ ಪಟ್ಟರು ಮತ ಹಾಕಿದರು, ಗೆಲ್ಲಿಸಿದರು. ಗೆದ್ದ ಮೇಲೆ ಮೋದಿ ಹೇಳಿದಂತೆ ನಡೆಯಲೇ ಇಲ್ಲ, ರೈತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಬಿಜೆಪಿ-ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ

“ರೈತ ಸಮುದಾಯದ ಸಾಲ, ಎಂಎಸ್‌ಪಿ ನಿಗದಿ ಮಾಡಲು ಶಕ್ತಿಯಿರದ ಮೋದಿ ಸರ್ಕಾರಕ್ಕೆ ಕಾರ್ಪೊರೇಟ್ ಕುಳಗಳು ಲಕ್ಷಾಂತರ ರೂಪಾಯಿ ಸಾಲ ಮಾಡಿ ದೇಶ ಬಿಟ್ಟವರಿಗೆ ರೈಟ್ ಆಫ್ ಮೂಲಕ ಸಾಲ ಮನ್ನಾ ಮಾಡಿದೆ. ಇಂತಹ ದುಷ್ಟಕೂಟಕ್ಕೆ ಜನತೆ ಮತದಾನದ ಮೂಲಕ ಬುದ್ಧಿ ಕಲಿಸಬೇಕಿದೆ” ಎಂದರು.

ಪತ್ರಿಕಾಗೋಷ್ಟಿಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಹಾಗೂ ಮೈಸೂರು ತಾಲೂಕು ಗೌರವಾಧ್ಯಕ್ಷ ನಾಗನಹಳ್ಳಿ ವಿಜಯೇಂದ್ರ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...