ಮೈಸೂರು | ಗ್ರಾಮೀಣ ಪ್ರಜ್ಞಾವಂತಿಕೆ ಮೂಡಿಸಿದ ಶ್ರೇಯಸ್ಸು ರೈತ ಸಂಘಟನೆಯದ್ದು: ಬಡಗಲಪುರ ನಾಗೇಂದ್ರ

Date:

“ರೈತ ಸಂಘಟನೆ ಮೌಢ್ಯದ ವಿರುದ್ಧ ಹೋರಾಟಗಳು, ಮಹಿಳಾ ಹೋರಾಟ, ಸ್ವಾಭಿಮಾನಿ ಹೋರಾಟ, ರೈತ ಹೋರಾಟ ಸಾಕಷ್ಟು ನಡೆದಿವೆ. ಗ್ರಾಮೀಣ ಪ್ರಜ್ಞೆ ಇಲ್ಲದ ಸಮಯದಲ್ಲಿ, ಪ್ರಜ್ಞಾವಂತಿಕೆ ಮೂಡಿಸಿದ ಶ್ರೇಯಸ್ಸು ರೈತ ಸಂಘಟನೆಗೆ ಸಲ್ಲಬೇಕು” ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಎನ್ ಎಸ್ ಸಭಾಂಗಣದಲ್ಲಿ ನ.9ರ ಶನಿವಾರದಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕಾಯಕ ಯೋಗಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.

“ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹಿಂದೆ ರೈತ ಸಂಘ ಪ್ರಬಲವಾಗಿತ್ತು. ರಾಮಕೃಷ್ಣ ಹೆಗಡೆ ಪಿರಿಯಾ ಪಟ್ಟಣದಲ್ಲಿ ಬಹಿರಂಗ ಸಭೆ ನಡೆಸಿದ್ದರು. ಅಷ್ಟರಮಟ್ಟಿಗೆ ರೈತ ಸಂಘಟನೆ ಪ್ರಬಲವಾಗಿತ್ತು. ಈಗ ಅಂತಹ ವಾತಾವರಣ ಇಲ್ಲ. ಜಾತಿಯ ಜಡತ್ವ ಇರುವುದರಿಂದ ವರ್ಗ ಹೋರಾಟ ರೂಪುಗೊಂಡಿತ್ತು. ಅಂದಿನ ಸಮಯದಲ್ಲಿ ಆಧುನಿಕತೆ ಇರದ ವೇಳೆ ರೈತ ಸಂಘಟನೆ ಬಲವಾಗಿ ರೂಪಿತವಾಗಿತ್ತು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
raita sangha2 1

ರೈತ ಸಂಘ ಬರೀ ಹೋರಾಟ ಅಷ್ಟೇ ಅಲ್ಲ. ಸಾಕ್ಷರತೆ ರೂಪಿಸುವಲ್ಲಿಯೂ ಸಾಕಷ್ಟು ಕೆಲಸ ಮಾಡಿದೆ. ಸಾಮೂಹಿಕ ಬೇಸಾಯಕ್ಕೆ ಬುನಾದಿ ಹಾಕಿದ್ದು ರೈತ ಸಂಘ. ಈಗ ರಚನಾತ್ಮಕ ಕೆಲಸ ನಡೆಯುತ್ತಿಲ್ಲ. ರೈತ ಶಾಲು ಹಾಕೋದು ಪುಡಾರಿತನ ಮಾಡುವುದು, ವಸೂಲಿ ಮಾಡುವ ಕೆಲಸ ಮಾಡಿದ್ದಾರೆ.ಅಂತಹ ಅಪವಿತ್ರ ಕೆಲಸ ಮಾಡಬಾರದು ಎಂದು ಬಡಗಲಪುರ ನಾಗೇಂದ್ರ ಮನವಿ ಮಾಡಿದರು.

ಸಂಘಟನೆಯ ಕಾರ್ಯಕರ್ತ ಯಾವುದೇ ಕಾರಣಕ್ಕೂ ಇಂತಹ ಧೋರಣೆ ಮಾಡಕೂಡದು. ಮೊದಲು ಮಾಡಬೇಕಿರುವುದು ಯಾವುದೇ ರಾಜಕೀಯ ಪಕ್ಷಗಳ ಬಾವುಟ ಹಿಡಿದು ಹೋಗಬಾರದು. ಇಲ್ಲವಾದಲ್ಲಿ ಸಂಘಟನೆಯ ಕಾರ್ಯಕರ್ತರ ಮೇಲಿನಿ ನಂಬಿಕೆ ಉಳಿಯುವುದಿಲ್ಲ. ಜನರು ನಂಬುವುದು ನಂಬಿಕೆ ,ವಿಶ್ವಾಸದಿಂದ ಹೊರತು ಯಾವುದೇ ಕಾರಣಕ್ಕೂ ರೈತ ಶಾಲು ಹಾಕಿ ನಂಬಿಕೆ ದ್ರೋಹ ಮಾಡುವುದನ್ನಲ್ಲ. ರೈತ ಸಂಘ ಅಂದರೆ, ತನ್ನ ಮಗ ತಪ್ಪು ಮಾಡಿದರೂ ದಂಡ ಹಾಕಿದ ನಡೆ ನಮ್ಮ ಸಂಘಟನೆಯದು. ಪ್ರಾಮಾಣಿಕವಾಗಿ ಇದ್ದರೆ ಹಸಿರು ಟವೆಲ್ ಹಾಕಿ, ಇಲ್ಲವಾದರೆ ಹಾಕಬಾರದು ಎಂದರು.

ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರೈತರಿಗೆ ಅನುಕೂಲ ಆಗುವಂತಹ,ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ರೈತ ಹೋರಾಟ ಚುರುಕಾಗಬೇಕು. ಯುವಕರು ಹೆಚ್ಚು ಹೆಚ್ಚು ರೈತ ಸಂಘಟನೆಯಲ್ಲಿ ತೊಡಗಿಸಿಕೊಂಡು ರೈತ ಹೋರಾಟಕ್ಕೇ ಬಲ ತುಂಬಬೇಕು. ಸರ್ಕಾರಗಳು ರೈತರಿಗೆ ಭರವಸೆ ಕೊಡುವುದು ಆಗುತ್ತಿದೆಯೇ ಹೊರತು, ಯಾವುದೇ ಸರ್ಕಾರ ರೈತರ ಹಿತ ಕಾಯುವ ಕೆಲಸ ಮಾಡುತ್ತಿಲ್ಲ. ರೈತರ ಭೂಮಿ ಬಂಡವಾಳ ಶಾಹಿಗಳ ಹಿಡಿತಕ್ಕೆ ಹೋಗುತ್ತಿದ್ದು, ಬಹು ಸಂಖ್ಯಾತರಾದ ರೈತ ಕುಲ ಇಂದು ಕಾರ್ಪೊರೇಟ್ ಕುಳಗಳ ಕೂಯ್ಯಲ್ಲಿ ಸಿಲುಕಿ ನಲುಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

raita sangha 1

ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ ಮಾತನಾಡಿ, ‘ಕಟ್ಟುತ್ತೇವ ನಾವು ಕಟುತ್ತೇವೆ, ಒಡೆದ ಮನಸುಗಳ ನಾವು ಕಟ್ಟುತ್ತೇವ ಅನ್ನುವ ಹಾಡಿನಂತೆ ರೈತರ ಕಷ್ಟಕ್ಕೆ ಹೆಗಲು ಕೊಟ್ಟು, ರೈತರ ಕಷ್ಟಕ್ಕೆ ಸ್ಪಂದಿಸಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲ ಒಗ್ಗೂಡಬೇಕಿದೆ. ಜನ ಪ್ರತಿನಿಧಿಗಳು ರೈತರ ಮತ ಪಡೆಯುವುದಷ್ಟೇ. ಅದನ್ನ ದಾಟಿ ರೈತರು ನಮ್ಮವರು, ನಾಡಿಗೆ ಅನ್ನ ಕೊಡುವವರು. ಅವರ ಪರವಾಗಿ ಕೆಲಸ ಮಾಡಬೇಕು ಅನ್ನುವ ಯಾವುದೇ ಇರಾದೆ ಇಲ್ಲದವರಿಗೆ ಸಂಘಟನೆಯ ಹೋರಾಟದ ಮೂಲಕ ಪಾಠ ಕಲಿಸಬೇಕಿದೆ ಎಂದರು.

ನಾಡಿಗೆ ಅನ್ನ ನೀಡುವ ರೈತ ಸರ್ಕಾರ, ಅಧಿಕಾರಿಗಳ ದಬ್ಬಾಳಿಕೆ ಸಿಲುಕಿ ಇಂದು ಆತ್ಮಹತ್ಯೆಯ ಕಡೆಗೆ ಹೆಜ್ಜೆ ಹಾಕ್ತಾ ಇದ್ದಾನೆ. ಅನ್ನ ಕೊಡುವ ಕೈ ವಿಷ ಕುಡಿಯುವ ಪರಿಸ್ಥಿತಿಗೆ ದೂಡಿದವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ? ಮಂಗಳೂರು | ಅಸಮರ್ಪಕ ರಸ್ತೆಯಿಂದಾಗಿ ಸ್ಕಿಡ್ ಆಗಿ ಬಿದ್ದ ಬೈಕ್: ಟ್ಯಾಂಕರ್ ಹರಿದು ಮಹಿಳೆ ಮೃತ್ಯು

ಕಾರ್ಯಕ್ರಮದಲ್ಲಿ ಡಾ ರಾಜೇಶ್, ಡಾ ವೈ ವಿ ಪ್ರಕಾಶ್, ಶ್ರೀಮತಿ ಜವರಮ್ಮ, ಕರೀಗೌಡ, ಭರತ್ ಅರಸು ಹಾಗೂ ಶಾರದಮ್ಮ ಅವರಿಗೆ ‘ಕಾಯಕ ಯೋಗಿ ಪ್ರಶಸ್ತಿ’ ಪ್ರದಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಕಿಪುರ ಚಿಕ್ಕಣ್ಣ, ಮರಂಕಯ್ಯ, ಅಗ್ರಹಾರ ರಾಮೇಗೌಡ, ಸ್ವಾಮಿ ಗೌಡ, ಮಹಾದೇವ, ಮೀನಾಕ್ಷಿ ಮಹೇಶ್, ಗಡಿಗೌಡ, ಪ್ರಕಾಶ್ ರಾಜ್ ಅರಸ್ ಮೊದಲಾದವರು ಉಪಸ್ಥಿತರಿದ್ದರು.

raita sangha1
WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...