ಅಂತರಂಗ ತಂಡವು ಮೈಸೂರಿನ ನಿರಂತರ ಫೌಂಡೇಶನ್ ಸಹಕಾರದಲ್ಲಿ ಟಿ.ಪಿ. ಕೈಲಾಸಂರ ‘ಹುತ್ತದಲ್ಲಿ ಹುತ್ತ’ ಹಾಸ್ಯ ನಾಟಕದ 64ನೇ ಪ್ರದರ್ಶನವನ್ನು ದಿನಾಂಕ-22-02-2026ನೇ ಭಾನುವಾರ, ಸಂಜೆ 7-15ಕ್ಕೆ ಕಿರು ರಂಗಮಂದಿರ, ಕಲಾಮಂದಿರ ಆವರಣ, ಮೈಸೂರಿನಲ್ಲಿ ಪ್ರದರ್ಶಿಸಲಿದೆ.
ಕೈಲಾಸಂರ ಹುತ್ತದಲ್ಲಿ ಹುತ್ತ ನಾಟಕದ 64ನೇ ಪ್ರದರ್ಶನವಾಗಿದ್ದು, ಅಂತರಂಗ ತಂಡ 46 ವರ್ಷಗಳಿಂದ ರಂಗಕ್ರಿಯೆಯನ್ನು ನಡೆಸಿಕೊಂಡು ಬಂದಿದೆ. ಅಂತರಂಗ ತಂಡವು ಕೈಲಾಸಂರ ‘ಹುತ್ತದಲ್ಲಿ ಹುತ್ತ’ ಹಾಸ್ಯ ನಾಟಕವನ್ನು ಈಗಾಗಲೇ ಯಶಸ್ವಿಯಾಗಿ ಪ್ರದರ್ಶಿಸಿದೆ. ಕೈಲಾಸಂ ಒಬ್ಬ ಅಪ್ರತಿಮ ನಾಟಕಕಾರ. ಇಂದಿಗೂ ಅವರ ನಾಟಕಗಳು ಪ್ರಸ್ತುತವಾಗಿದೆ.
ರಂಗಭೂಮಿಯಲ್ಲಿ ಚಿರಸ್ಥಾಯಿಯಾಗಿರುವ ಹೆಸರು ಟಿ.ಪಿ. ಕೈಲಾಸಂ ರಚಿಸಿರುವ ವಿಭಿನ್ನ ಹಾಸ್ಯ ನಾಟಕ ‘ಹುತ್ತದಲ್ಲಿ ಹುತ್ತ’ ಹಲವಾರು ರಂಗಪ್ರದರ್ಶನ ಕಂಡಿದೆ. ಈ ನಾಟಕದ ಮೂಲ ನಿರ್ದೇಶನ ಡಾ. ಬಿ.ವಿ. ರಾಜಾರಾಂ. ಪರಿಷ್ಕೃತ ನಿರ್ದೆಶನ ಅರ್ಚನಾ ಶ್ಯಾಮ್. ಈ ನಾಟಕದಲ್ಲಿ ಪ್ರತಿಯೊಂದು ಸಂಭಾಷಣೆಯಲ್ಲೂ ಹಾಸ್ಯದ ಜೊತೆಗೆ ಗಂಭೀರ ಚಿಂತನೆಯೂ ಇದೆ.

ಈಗಾಗಲೇ ಹಲವಾರು ಪ್ರದರ್ಶನ ಕಂಡಿರುವ ನಾಟಕ ಇದೇ ಫೆಬ್ರವರಿ.22ರಂದು ಕಿರುರಂಗಮಂದಿರ, ಮೈಸೂರಿನಲ್ಲಿ ಪ್ರದರ್ಶನವಾಗಲಿದ್ದು, ಅತಿ ಹೆಚ್ಚಾಗಿ ರಂಗಾಸಕ್ತರು ಆಗಮಿಸಿ, ಪ್ರೋತ್ಸಾಹಿಸಬೇಕಾಗಿ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುಶಾಲನಗರ | ‘ಪತ್ರಕರ್ತರ ನಡೆ ಹಾಡಿಯ ಕಡೆ’
ಆನ್ಲೈನ್ ಬುಕ್ಕಿಂಗ್-ಬುಕ್ ಮೈ ಶೋ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಅಂತರಂಗ ಶ್ಯಾಮ್-98809 14509, ಅಂತರಂಗ ಮುರುಳಿಧರ್-99869 11321.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಪಾದಯಾತ್ರೆಗೂ ಸ್ಪಂದಿಸದ ಜಿಲ್ಲಾಡಳಿತ: ಆದಿವಾಸಿಗಳ ಹಕ್ಕುಗಳನ್ನು ಕೊಲ್ಲುತ್ತಿದೆಯೇ?
ಪತ್ರಿಕಾಗೋಷ್ಠಿಯಲ್ಲಿ ವಿ. ರಂಗನಾಥರಾವ್, ನಿರಂತರ ಶ್ರೀನಿವಾಸ್ ಪಾಲಹಳ್ಳಿ, ಅಂತರಂಗ ಶ್ಯಾಮ್, ಎಚ್.ವಿ. ನಟರಾಜ್, ವಿ. ನಂಜುಂಡ ರಾವ್ ಇದ್ದರು.





