ಮೈಸೂರು | ಶಿಲಾಫಲಕದ ಮೇಲೆ ಮೂಡಿದ ‘ಸಂವಿಧಾನ ಪೀಠಿಕೆ’

Date:

ಮೈಸೂರು ಪುರಭವನದ ಆವರಣದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಬಳಿ ಸಮಾಜ ಕಲ್ಯಾಣ ಇಲಾಖೆಯಿಂದ ಶಿಲಾ ಫಲಕದಲ್ಲಿ ‘ಸಂವಿಧಾನ ಪೀಠಿಕೆ’ ಕೆತ್ತಿಸಲಾಗಿದೆ.

ಈಗಿನ ಸರ್ಕಾರ 2023ರಲ್ಲಿ ಶಾಲಾ ಕಾಲೇಜುಗಳಲ್ಲಿ ‘ಸಂವಿಧಾನ ಪೀಠಿಕೆ’ ಓದುವುದನ್ನು ಕಡ್ಡಾಯಗೊಳಿಸಿ ಆದೇಶ ಮಾಡಿತ್ತು. ಅದರಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಲಾಫಲಕ ಮೇಲೆ ಸಂವಿಧಾನ ಪೀಠಿಕೆ ಕೆತ್ತಿಸಿ ಅನಾವರಣ ಮಾಡುವಂತೆ ಸೂಚಿಸಿತ್ತು. ಅಂತೆಯೇ ಮೈಸೂರಿನಲ್ಲಿಯೂ ನಿರ್ಮಿಸುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ತಿಳಿಸಿದ್ದರು.

ಈ ಹಿಂದೆ ಜಸ್ಟೀಸ್ ನಾಗಮೋಹನ್ ದಾಸ್ ಅವರೂ ಕೂಡಾ ‘ಸಂವಿಧಾನ ಪೀಠಿಕೆ’ ಸರಳವಾಗಿ ಅರ್ಥವಾಗುವಂತೆ ಪುಸ್ತಕ ಬರೆದು ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಿ, ಸಂವಿಧಾನ ಪೀಠಿಕೆ ಪುಸ್ತಕ ಹಂಚಿಕೆ ಮಾಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೈಸೂರಿನ ಹೃದಯ ಭಾಗವಾದ ಪುರಭವನ, ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ, ಚಾಮರಾಜ ಒಡೆಯರ್ ಪ್ರತಿಮೆ, ಗಾಂಧಿ ಪ್ರತಿಮೆ ಇರುವ ಸಮೀಪದಲ್ಲಿಯೇ ಈಗಾಗಲೇ ಅನಾವರಣಕ್ಕೆ ಶಿಲಾಫಲಕ ಸಿದ್ಧವಾಗಿದೆ. ಸರ್ಕಾರ ₹25 ಲಕ್ಷ ಅನುದಾನ ಒದಗಿಸಿದ್ದು, ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ₹15 ಲಕ್ಷ ಸಂದಾಯವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮಾಹಿತಿ ಒದಗಿಸಿದೆ.

‘ಸಂವಿಧಾನ ಪೀಠಿಕೆ’ ಶಿಲಾಫಲಕ 10 ಅಡಿ ಎತ್ತರ, 6 ಅಡಿ ಅಗಲ, ಒಂದೂಕಾಲು ಅಡಿ ದಪ್ಪವುಳ್ಳ ಶಿಲೆಯಲ್ಲಿ ನಿರ್ಮಿಸಲಾಗಿದೆ. ಪೀಠಿಕೆ ಕನ್ನಡದಲ್ಲಿದ್ದು, ಕೆಳಗಿನ ಪೀಠದಲ್ಲಿ ಇಂಗ್ಲಿಷ್ ಬರಹಗಳಿವೆ. ಜನರನ್ನು ಆಕರ್ಷಿಸುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಸಧ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ಮೈಸೂರಿನಲ್ಲಿ ಹಲವು ಮಹನೀಯರ ಪ್ರತಿಮೆಗಳಿದ್ದು, ಈಗ ‘ಸಂವಿಧಾನ ಪೀಠಿಕೆ ಶಿಲಾ ಫಲಕ’ ಸೇರ್ಪಡೆಯಾಗಿರುವುದು ಮೈಸೂರಿಗೆ ಮೆರಗು ತಂದಿದ್ದು, ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

ಈ ದಿನ.ಕಾಮ್ ಜತೆಗೆ ನೆಲೆ ಹಿನ್ನಲೆಯ ಕೆ ಆರ್ ಗೋಪಾಲ ಕೃಷ್ಣ ಮಾತನಾಡಿ, “ಭಾರತ ದೇಶದಲ್ಲಿ ಸಂವಿಧಾನದ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ, ಕರ್ನಾಟಕ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಸಂವಿಧಾನ ಪರಿಚಯ ಮಾಡುವ ನಿಟ್ಟಿನಲ್ಲಿ ಹಾಗೂ ಜನ ಸಾಮಾನ್ಯರಿಗೆ, ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಅರ್ಥ, ಆಶಯಗಳ ಬಗ್ಗೆ ಸರಳವಾಗಿ ಅರ್ಥವಾಗುವಂತೆ ಮಾಡುವ ಪ್ರಯತ್ನ ಮಾಡಿದೆ. ಇದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿದೆ” ಎಂದು ಶ್ಲಾಘಿಸಿದರು.

“ಮೈಸೂರಿನ ಪುರಭವನದ ಮುಂದೆ ‘ಸಂವಿಧಾನ ಪೀಠಿಕೆ’ಯನ್ನು ಕಲ್ಲಿನಲ್ಲಿ ಕೆತ್ತನೆ ಮಾಡಿಸಿರುವುದನ್ನು ಗಮನಿಸಿದರೆ, ಇತಿಹಾಸದಲ್ಲಿ ಅಶೋಕ ತನ್ನ ಕಾಲಘಟ್ಟದಲ್ಲಿ ಬೌದ್ಧ ಧರ್ಮ ಪ್ರಚಾರ ಮಾಡುವ ವೇಳೆ ಬುದ್ದನ ಸ್ತೂಪದಲ್ಲಿ ಕೆತ್ತನೆ ಮಾಡಿಸುತ್ತ ಅರಿವು ಮೂಡಿಸಿದ್ದು ಕಂಡುಬರುತ್ತದೆ. ಹಾಗೇ, ಸಂವಿಧಾನದ ಆಶಯವೂ ಅಷ್ಟೇ, ಬೌದ್ಧ ಧರ್ಮದ ರೀತಿಯಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇರಬೇಕು, ಬ್ರಾತೃತ್ವದಿಂದ ಬಾಳಬೇಕು ಅನ್ನುವುದು ಹಾಗೆ ಸಂವಿಧಾನದ ಪೀಠಿಕೆ ಪ್ರಸ್ತಾವನೆ ಕಲ್ಲಿನಲ್ಲಿ ಕೆತ್ತನೆ ಮಾಡಿಸಿರುವುದು ಪ್ರಶಂಸನೀಯ” ಎಂದರು.

ಮಾಜಿ ನಗರಸಭಾ ಸದಸ್ಯ, ನೂರ್ ಮರ್ಚೆಂಟ್ ಮಾತನಾಡಿ “ಬಾಬಾ ಸಾಹೇಬರ ಪ್ರತಿಮೆ ಬಳಿ ‘ಸಂವಿಧಾನ ಪೀಠಿಕೆ’ ಶಿಲಾ ಫಲಕ’ ಅನಾವರಣ ಆಗುತ್ತಿರುವುದು ಸಮಂಜಸವಾದದ್ದು, ಅರ್ಥ ಪೂರ್ಣವಾದದ್ದು. ಯಾಕೆಂದರೆ ಅಲ್ಲಿ ಬರುವವರಿಗೆ ಅರಿವು ಮೂಡುತ್ತದೆ, ಅರಿವು ಮೂಡಿಸುವ ಕೆಲಸವೇ ಅತಿ ಮುಖ್ಯವಾಗಿ ಆಗಬೇಕಿರುವಂತದ್ದು. ಮುಂಚೆಗಿಂತ ಈಗ ಪರ್ವಾಗಿಲ್ಲ ಸಂವಿಧಾನ ಅಂದ್ರೆ ಏನು, ಎಂಬುದರ ಮಹತ್ವದ ಬಗ್ಗೆ ತಿಳುವಳಿಕೆ ಬಂದಿದೆ. ಇದಿಷ್ಟೇ ಸಾಲದು ಇನ್ನೂ ಹೆಚ್ಚು ತಿಳಿಯುವಂಥ, ತಿಳಿಸುವಂಥ ಕೆಲಸವಾಗಬೇಕು. ಈಗ ಶಿಲಾ ಫಲಕ ಅನಾವರಣ ಆಗುತ್ತಿರುವುದು ಸೂಕ್ತವಾದ ಕೆಲಸ” ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವಂತೆ ದಸಂಸ ಮನವಿ

ಮನುಜಮತ ನಾಗರಾಜು ಮಾತನಾಡಿ “ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಬಳಿ ‘ಸಂವಿಧಾನ ಪೀಠಿಕೆ’ ಶಿಲಾಫಲಕ ಅನಾವರಣ ಆಗುತ್ತಿರುವುದು ಸ್ಮರಣೀಯ ಕೆಲಸ. ಬಾಬಾ ಸಾಹೇಬರು ಹಾಗೂ ಸಂವಿಧಾನ ಪೀಠಿಕೆಯ ಅವಿನಾಭಾವ ಸಂಬಂಧ ಬೆಸೆದಂತಾಗಿದೆ. ಇದು ಸಾಮಾಜಿಕ ಅರಿವಿನ ಬದ್ಧತೆಯನ್ನು ಹೆಚ್ಚಿಸಿದಂತಿದೆ” ಎಂದರು.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...