ಮೈಸೂರು | ಬರಿದಾದ ಕಾವೇರಿ ಒಡಲು; ಕೆರೆಕಟ್ಟೆಗಳು ಖಾಲಿ ಖಾಲಿ – ನೀರಿಗೆ ಹಾಹಾಕಾರ

Date:

ಕೊಡಗಿನಲ್ಲಿ ಹುಟ್ಟಿ ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಹರಿಯುವ ಜೀವನದಿ ಕಾವೇರಿ. ಬೇಸಿಗೆಯಲ್ಲಿ ಸಹಜವಾಗಿ ನೀರಿನ ಹರಿವು ಕಡಿಮೆಯಾಗುವುದು. ನೀರಿನ ಕೊರತೆ ಸಹಜ. ಆದರೆ ಈ ಭಾರಿ ಕುಡಿಯಲು ಕಾವೇರಿ ನೀರು ಸಿಗುತ್ತಿಲ್ಲ. ಕಾವೇರಿ ನದಿಯನ್ನೇ ಅವಲಂಬಿತವಾದ ಪಟ್ಟಣಗಳಿಗೆ ಬಿಸಿ ಮುಟ್ಟಿದೆ.

ಈಗಾಗಲೇ ಪಿರಿಯಾಪಟ್ಟಣ ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದ್ದು, ಪುರಸಭೆಯ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಇಲ್ಲ. ಟ್ಯಾಂಕರ್ ಮೂಲಕ ಮನೆ ಮನೆಗಳಿಗೆ ಯಾವಾಗಲೋ ಒಮ್ಮೆ ಅನ್ನುವಂತೆ ಒಂದು ಟ್ಯಾಂಕರ್ ನೀರನ್ನ ಮೂರು ಮನೆಗಳಿಗೆ ನೀಡುವ ವ್ಯವಸ್ಥೆ ಆಗುತ್ತಿದೆ. ಎಲ್ಲಿ ನೋಡಿದರೂ ದೈನಂದಿನ ಬಳಕೆಗೆ, ಕುಡಿಯುವ ನೀರಿಗೆ ಖಾಸಗಿಯವರಿಂದ ದುಬಾರಿ ಹಣ ಕೊಟ್ಟು ನೀರನ್ನು ತರಿಸಿಕೊಳ್ಳುವಂತಾಗಿದೆ. ಸಂಬಂದಪಟ್ಟ ಅಧಿಕಾರಿಗಳನ್ನು ಕೇಳಿದರೆ ನೀರಿನ ಅಭವಾವಿದ್ದು 2 ದಿನಕ್ಕೆ ಒಮ್ಮೆ ಟ್ಯಾಂಕರ್ ಮೂಲಕ ಹಾಗೆ ವಾರದಲ್ಲಿ ಎರಡು ಬಾರಿ ನೀರು ಬಿಡುವ ಕೆಲಸ ಆಗುತ್ತಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

“ಹಳ್ಳಿಯ ಪರಿಸ್ಥಿತಿ ತೀರಾ ತೊಂದರೆಗೀಡಾಗಿದೆ. ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ನೀರಿಲ್ಲ, ಮೇವಿನ ಸಮಸ್ಯೆ ತಲೆದೂರಿದೆ. ಮೇವಿಗಾಗಿ ಪರದಾಟ, ಹುಲ್ಲಿನ ಕಂತೆ ಕೊಳ್ಳಲು ಆಗ್ತಾ ಇಲ್ಲ, ಹಸಿರು ಮೇಯಲು ಏನೂ ಇಲ್ಲ. ಕುಡಿಯಲು ಕೆರೆಕಟ್ಟೆ ಬತ್ತಿವೆ. ನೀರಿನ ವ್ಯವಸ್ಥೆ ಇರದೆ ಈ ಭಾಗದ ಹಲವು ಗ್ರಾಮಗಳ ಪರಿಸ್ಥಿತಿ ಕಂಗಾಲಾಗಿದೆ” ಎನ್ನುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬರಿದಾದ ಕಾವೇರಿ ಒಡಲು

ಜವರಪ್ಪ ದೊಡ್ಡ ಹನಸೋಗೆ ಈ ದಿನ.ಕಾಮ್ ಜತೆಗೆ ಮಾತನಾಡಿ, “ಹಿಂದೆಲ್ಲೂ ಕಾಣದ ಇಂತಹ ಉರಿಬಿಸಿಲನ್ನು ಇದೇ ಮೊದಲು ಕಾಣುತ್ತಿದ್ದೇವೆ. ಬೇಸಿಗೆ ಆರಂಭವಿರುವಾಗಲೇ ಬಿಸಿಲ ಜಳ ತಡೆಯಲು ಆಗುತ್ತಿಲ್ಲ. ಕೆರೆಕಟ್ಟೆ ಒಣಗಿ ಜಾನುವಾರುಗಳಿಗೆ, ಆಡುಕುರಿಗೆ ನೀರುಣಿಸಲು ಆಗುತ್ತಿಲ್ಲ. ನಾನೇ ಕಳೆದ ವಾರ ಎರಡು ಹಸು, ನಾಲ್ಕು ಕುರಿಗಳನ್ನು ಮಾರಿದ್ದೇನೆ. ಜಾನುವಾರುಗಳಿಗೆ ಮೇವು ತರಲು ಶಕ್ತಿ ಇಲ್ಲ. ಮೇವು ಹೊಂದಿಸಲು ಆಗುತ್ತಿಲ್ಲ” ಎಂದು ಅಳಲು ತೋಡಿಕೊಂಡರು.

ಹೊಸೂರು ಗೌರಮ್ಮ ಮಾತನಾಡಿ, “ನಾನು ಮದುವೆ ಆಗಿ ಬಂದಾಗಿನಿಂದ ಈವರೆಗೆ ಕಾವೇರಿ ಬತ್ತಿದ್ದನ್ನೇ ಕಂಡಿಲ್ಲ. ನದಿಯಲ್ಲಿ ನೀರಿಲ್ಲ. ಆಡು ಕುರಿಗಳಿಗೆ ನೀರು ಕುಡಿಸಲು ಬೋರ್‌ವೆಲ್‌  ಹುಡುಕಬೇಕು. ಅದರಲ್ಲೂ ಜಲ ಇಲ್ಲ ನೀರೆ ಇಲ್ಲ. ಇದ್ದೋರು ಕೊಡಲ್ಲ ಹಿಂಗಾದ್ರೆ ಮುಂದೆ ಪರದಾಟ ತಪ್ಪಿದ್ದಲ್ಲ” ಎನ್ನುತ್ತಾರೆ.

ಬರಿದಾದ ಕಾವೇರಿ ಒಡಲು 1 1

ತಿಪ್ಪೂರ ರಮೇಶ್ ಮಾತನಾಡಿ, “48 ವರ್ಷದಲ್ಲಿ ಇದೆ ಮೊದಲ ಸಲ ಕಾವೇರಿ ಬತ್ತಿದ್ದು, ಬೇಸಿಗೆಯಲ್ಲಿ ನೀರು ಕಡಿಮೆ ಇರುತ್ತಿತ್ತು. ಮೋಟ್ರು ಹಾಕಂಡು ಸೊಪ್ಪು ಬೆಳಿಯಕೆ, ಹೊಗೆಪಟಕೆ ನೀರು ಹುಯ್ಯಕೆ, ದನಕರುಗಳಿಗೆ, ಆಡು ಕುರಿಗೆ ನೀರು ಆಯ್ತಾ ಇತ್ತು. ಈ ಸಲ ಯಾವದಕ್ಕೂ ನೀರಿಲ್ಲ. ಬರ್ದಾಗೈತೆ. ಮರಳು ಹೊಡೆದಿರೋ ಜಾಗದಲ್ಲಿ ವಸಿ ನೀರ್ ಅದೆ. ಆ ನೀರನ್ನು ಸಿಂಡ್ ಬಂದದೆ ಅಂತ ದನಕರ ಕುಡಿಯಲ್ಲ. ಹುಲ್ಲು ಕಂತೆ ರೇಟು ಗಗನಕ್ಕೆ ಹೋಗದೆ. ಒಂದ್ ಗಾಡಿ ಹುಲ್ಲು ತರಕೆ ಆಯ್ತಿಲ್ಲ. ಜೋಳದ ಕಡ್ಡಿ ಹಾಕೋಣ ಅಂದ್ರೆ ನೀರಿಲ್ಲ. ದಿಕ್ಕೇ ತೋಚ್ತಾ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕುಡಿಯುವ ನೀರಿಗೆ ಹಾಹಾಕಾರ; ಚುನಾವಣಾ ಪ್ರಚಾರದಲ್ಲಿ ಮಗ್ನರಾದ ಜನಪ್ರತಿನಿಧಿಗಳು

ಚುಂಚನ ಕಟ್ಟೆ ರಾಮಯ್ಯ ಮಾತನಾಡಿ, “ಬೇಸಿಗೆ ಆರಂಭದಲ್ಲೇ ನೀರಿಲ್ಲ. ಕಟ್ಟೆಲಿ ಮುಂದೆ ಬಿಸಿಲು ಜಳ ಹೆಚ್ಚಾಗತ್ತೆ. ನೀರಿಗೆ ಏನು ಮಾಡುವುದೆಂಬುದೇ ಗೊತ್ತಾಗುತ್ತಿಲ್ಲ. ಪಂಪ್ ಸೆಟ್ ಇರೋರಿಗೆ ಹೆಂಗೋ ಆಯ್ತದೆ. ನಮಗೆ ರಾಸುಗಳಿಗೆ ನೀರು ಉಣಿಸಕೆ ಆಯ್ತಿಲ್ಲಾ. ಮಳೆ ಬೀಳಂಗದೆ, ಮೋಡ ಅಯ್ತೇ. ಆದ್ರೆ ಮಳೆ ಆಗ್ತಿಲ್ಲ. ಹೊಸ ಮಳೆ ಹುಟ್ಟಕೆ ಇನ್ನೂ ಸಮಯ ಆದೆ. ಆದ್ರೂ ಅಡ್ಡಮಳೆ ಆದ್ರೂ ಹುಯ್ದಿದ್ದರೆ ಭೂಮಿ ಕಾವು ಕಡಿಮೆ ಆಗ್ತಿತ್ತು. ಈ ಸಲ ಬಿಸಿಲು ಜಳ ತಡಿಯಕೆ ಆಯ್ತಾ ಇಲ್ಲ. ಆಡು-ಕುರಿ ನೀರಿಲ್ದೆ ಸೊರಗಿವೆ. ಹಿಂಗೆ ಆದ್ರೆ ಹಟ್ಟಿಲಿರವ ಮಾರಾಕ್ತಿನಿ” ಎಂದು ಬೇಸರ ವ್ಯಕ್ತಪಡಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...