ಮೈಸೂರು | ಭೂಮಿಯ ಜತೆಗಿನ ವಸ್ತು ನಮಗೆ ಸ್ಥಳೀಯ ಎನಿಸುತ್ತದೆ: ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

Date:

ಭೂಮಿ ಕಾದಂಬರಿಯಲ್ಲಿ ಭೂಮಿಯ ಜತೆಗಿನ ವಸ್ತು ನಮಗೆ ಸ್ಥಳೀಯ ಅನ್ನಿಸುತ್ತದೆ ಎಂದು ನಿವೃತ್ತ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಗಳು ಹಾಗೂ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯವರು ಅಭಿಪ್ರಾಯಪಟ್ಟರು.

ಮೈಸೂರು ರಂಗಾಯಣದಲ್ಲಿ ಸೃಷ್ಟಿ ಪಬ್ಲಿಕೇಷನ್‌, ಬೆಂಗಳೂರು ಹಸಿರು ಆರ್ಗ್ಯಾನಿಕ್ಸ್‌ ಪ್ರಕಟಿಸಿರುವ ಬಂಜಗೆರೆ ಜಯಪ್ರಕಾಶ್ ಅವರ ʼಭೂಮಿʼ ಪುಸ್ತಕದ ಲೋಕಾರ್ಪಣೆ ವೇಳೆ ಮಾತನಾಡಿದರು.

“ಗಾಂಧೀಜಿ ಹೇಳಿದಂತೆ ಭಾರತ ಮೂಲಭೂತವಾಗಿ ಹಳ್ಳಿಗಳ ಮತ್ತು ರೈತರ ದೇಶ. ಯವ್ಯಾವ ದೇಶಗಳಲ್ಲಿ ಕೃಷಿಯನ್ನು ಪ್ರಾಥಮಿಕ ಉದ್ಯೋಗ(ಪ್ರೈಮರಿ ಆಕ್ಯುಪೇಷನ್‌)ವನ್ನಾಗಿ ಮಾಡಿಕೊಂಡಿರುತ್ತಾರೆ, ಅಲ್ಲಿಯವರಿಗೆ ಇಂತಹ ಕಾದಂಬರಿಗಳು ಬಹಳ ಬೇಗ ಅವರ ಹೃದಯಕ್ಕೆ ತಟ್ಟುತ್ತವೆ” ಎಂದು ಮನ ಮಿಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕೃತಿಗಳು ಅನುವಾದಗೊಳ್ಳುವ ಪ್ರಕ್ರಿಯೆಯೊಳಗೆ ಯಾವ್ಯಾವ ರೀತಿಯ ಸ್ವರೂಪವನ್ನು ತಾಳುತ್ತವೆಂಬುದನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ಎಷ್ಟೇ ಸುಲಭವಾದ ಅಥವಾ ಕಠಿಣವಾದ ಪದವಾಗಿರಲಿ, ಇಲ್ಲವೇ ನೂರು ಪೇಜಿನ ಪುಸ್ತವಾಗಿರಲಿ, 1000 ಪುಟಗಳ ಪುಸ್ತಕವಾಗಿದ್ದರೂ ಅನುವಾದಕ್ಕೆಂದು ತೆಗೆದುಕೊಂಡಾಗ ಸಾಂಸ್ಥಿಕ ಅನುವಾದಗಳ ಅಗತ್ಯವಿದೆ. ಆದರೆ ಅಲ್ಲಿ ಒಂದು ಕೃತಿ ಹತ್ತರಿಂದ ಇಪ್ಪತ್ತು ವರ್ಷಗಳವರೆಗೆ ಅನುವಾದವೇ ಆಗುವುದಿಲ್ಲ” ಎಂದರು.

“ಸೃಷ್ಟಿ ನಾಗೇಶ್‌ ಅವರು ತಮ್ಮ ಪ್ರಕಟಣಾ ಪ್ರಕಾಶನಗಳನ್ನು ಶುರುಮಾಡಿ ಕೆಲವೇ ವರ್ಷಗಳಾಗಿರಬಹುದು. ಆ ಪ್ರಕಟಣೆ ಸಂಸ್ಥಯಲ್ಲಿ ಈಗಾಗಲೇ ನೂರಕ್ಕಿಂತ ಹೆಚ್ಚು ಅನುವಾದದ ಪುಸ್ತಕಗಳು ಬಂದಿವೆ. ಅದು ಯಾವ ಸಾಂಸ್ಥಿಕ ಸಂಸ್ಥೆಯಲ್ಲ. ಒಂದು ಪ್ರಕಟಣಾ ಮಂದಿರ. ಅವರು ವಿಶೇಷವಾಗಿ ಅನುವಾದಗಳನ್ನೇ ಪ್ರಕಟ ಮಾಡುತ್ತಿರುವುದು ಸಂತೋಷದ ವಿಚಾರ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಏಳೆಂಟು ತಿಂಗಳ ಬಾಕಿ ವೇತನ ಪಾವತಿಸುವಂತೆ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಒತ್ತಾಯ

“ಇನ್ನು ʼಭೂಮಿʼ ಎಂಬ ಕಾದಂಬರಿಯನ್ನು ನಾನು ಓದಿದಾಗ ನನಗೆ ಯಾಕೆ ಇಷ್ಟ ಆಯಿತೆಂದರೆ, ಈ ಕಾದಂಬರಿಯಲ್ಲಿ ಸುಮಾರು ನೂರು ಮಂದಿ ಪಾತ್ರಧಾರಿಗಳು ಬರುತ್ತಾರೆ. ಹಾಗೆಯೇ ಈ ಪಾತ್ರದಾರಿಗಳಿಗೆ ಕನ್ನಡದವರ ಹೆಸರನ್ನು ಹಾಕಿದರೆ ನಿಜವಾಗಿಯೂ ಒಂದು ಅಪ್ಪಟ ದೇಶೀಯ ಕೃತಿಯಾಗುತ್ತದೆ. ಇದರಲ್ಲಿರುವ ಭೂಮಿಯ ಜತೆಗಿನ ವಸ್ತು ತುಂಬಾ ಆಪ್ತವೆನಿಸುತ್ತೆ” ಎಂದರು.

ಈ ವೇಳೆ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ, ಸತೀಶ್ ತಿಪಟೂರು, ಸ್ವಾಮಿ ಆನಂದ್, ರೇಣುಕಾರಾಧ್ಯ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...