ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪನವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಕೃತಿಯು ನಾಳೆ(ಜ.10) ಜನಾರ್ಪಣೆಯಾಗಲಿದೆ. ಬೆಂಗಳೂರು, ಹಾಸನ ಸೇರಿದಂತೆ ರಾಜ್ಯದ ಹಲವೆಡೆ ನಾಳೆ ಈ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ.
ಜನ ಪ್ರಕಾಶನವು ಪ್ರಕಟಿಸಿರುವ ಈ ಪುಸ್ತಕವನ್ನು ನಾಳೆ ಬೆಂಗಳೂರು, ಮೈಸೂರು, ಹಾಸನ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಬಳ್ಳಾರಿ, ಮಂಡ್ಯ, ವಿಜಯನಗರ, ಶಿವಮೊಗ್ಗ, ಕೊಪ್ಪಳ, ರಾಮನಗರ, ಕೊಡಗು, ರಾಯಚೂರು, ಕಲಬುರಗಿ ಸೇರಿದಂತೆ ರಾಜ್ಯದ ಒಟ್ಟು 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಜನಾರ್ಪಣೆ ಮಾಡಲಾಗುತ್ತಿದೆ. ಜತೆಗೆ ಹಲವು ಕಡೆಗಳಲ್ಲಿ ಸೌಹಾರ್ದೆತೆಯ ವಿಷಯ ಕೇಂದ್ರಿತವಾಗಿ ವಿಚಾರ ಸಂಕಿರಣ, ಸಂವಾದಗಳೂ ನಡೆಯಲಿವೆ.
ಇದನ್ನು ಓದಿದ್ದೀರಾ? ತುಮಕೂರು | ಸರ್ಕಾರಿ ಶಾಲೆಗಳಿಗೆ ಬೀಗಮುದ್ರೆ : ಪ್ರೊ. ಬರಗೂರು ರಾಮಚಂದ್ರಪ್ಪ ಕಳವಳ
ಬೆಂಗಳೂರಿನಲ್ಲಿ ಸೌಹಾರ್ದ ಕರ್ನಾಟಕ, ಜನ ಪ್ರಕಾಶನ ಹಾಗೂ ಪ್ರಸಾರಾಂಗ, ಡಾ. ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದ ಸಮೀಪದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಇನ್ನು ಹಾಸನದಲ್ಲಿ ಸೌಹಾರ್ದ ಕರ್ನಾಟಕ ಮತ್ತು ಜನಪರ ಚಳವಳಿಗಳ ಒಕ್ಕೂಟ ವತಿಯಿಂದ ಶನಿವಾರ ಸಂಜೆ 4:30ಕ್ಕೆ ನಗರದ ಆರ್ ಸಿ ರಸ್ತೆ ಬಳಿ ಇರುವ ಶ್ರಮ ಸಭಾಂಗಣದಲ್ಲಿ ಕೃತಿ ಜನಾರ್ಪಣೆ ಕಾರ್ಯಕ್ರಮ ನಡೆಯಲಿದೆ.





