ಹಾಸನಾಂಬ ದೇವಾಲಯದಲ್ಲಿ ಕೆಂಡದ ಮೇಲೆ ನಡೆಯುವ ವಿಧಿ: ಜಿಲ್ಲಾಧಿಕಾರಿಗೆ ಪ್ರೊ. ನರೇಂದ್ರ ನಾಯಕ್ ಬಹಿರಂಗ ಪತ್ರ

Date:

ಹಾಸನಾಂಬ ದೇವಾಲಯದಲ್ಲಿ ಕೆಂಡದ ಮೇಲೆ ನಡೆಯುವ ವಿಧಿ ಕುರಿತಾಗಿ ರಾಷ್ಟ್ರೀಯ ವಿಚಾರವಾದಿಗಳ ಸಂಘದ ರಾಜ್ಯಾಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಅವರು ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಈ ವಿಧಿಯು “ತಾಳ್ಮೆಯ ಪರೀಕ್ಷೆಯೂ ಅಲ್ಲ, ನಂಬಿಕೆಯ ಪರೀಕ್ಷೆಯೂ ಅಲ್ಲ. ಸಂಪೂರ್ಣವಾಗಿ ವಿಜ್ಞಾನಾಧಾರಿತ ಪ್ರಕ್ರಿಯೆ” ಎಂದು ಹೇಳಿದ್ದಾರೆ.

ಹಾಸನಾಂಬ ದೇವಾಲಯದಲ್ಲಿ ಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಲತಾ ಕುಮಾರಿ ಅವರೂ ಕೆಂಡ ಹಾಯ್ದಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ ಲತಾ ಅವರು, “ಜನರು ಕೆಂಡ ಹಾಯುವುದು ನೋಡಿ ನಾನೂ ಹಾಯಬೇಕು ಎಂದುಕೊಂಡೆ. ಮೊದಲು ಭಯ ಇತ್ತು. ಆದರೆ ದೇವರ ಮೇಲಿನ ಭಕ್ತಿಯಿಂದ ಕೈ ಮುಗಿದು ಹೋದೆ. ಏನೂ ಆಗಲಿಲ್ಲ” ಎಂದು ಹೇಳಿಕೊಂಡಿದ್ದರು.

ಇದನ್ನು ಓದಿದ್ದೀರಾ? ಹಾಸನ | ಹಾಸನಾಂಬ ದೇವಾಲಯ; 9 ದಿನದಲ್ಲಿ 5.5 ಕೋಟಿ ರೂ. ಸಂಗ್ರಹ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಾಸನ ಜಿಲ್ಲಾಧಿಕಾರಿಯ ಈ ಹೇಳಿಕೆ ಕುರಿತಾಗಿ ಬಹಿರಂಗ ಪತ್ರ ಬರೆದಿರುವ ಪ್ರೊಫೆಸರ್ ನರೇಂದ್ರ ನಾಯಕ್, “ಪತ್ರಿಕಾ ವರದಿಗಳಲ್ಲಿ ನೀವು ದೇವಾಲಯದ ಹಬ್ಬದಲ್ಲಿ ‘ಕೆಂಡದ ಮೇಲೆ ನಡೆಯುವ ವಿಧಿ’ ನೆರವೇರಿಸಿದ್ದೀರಿ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದನ್ನು ‘ನಂಬಿಕೆ ಮತ್ತು ತಾಳ್ಮೆಯ ಪರೀಕ್ಷೆ’ ಎಂದು ನೀವು ವರ್ಣಿಸಿದ್ದೀರಿ ಎಂದು ವರದಿಯಾಗಿದೆ. ಆದರೆ ಕೆಂಡ ಹಾಯುವ ಕೆಲಸ ‘ತಾಳ್ಮೆಯ ಪರೀಕ್ಷೆಯೂ ಅಲ್ಲ, ನಂಬಿಕೆಯ ಪರೀಕ್ಷೆಯೂ ಅಲ್ಲ’. ಅದು ಸಂಪೂರ್ಣವಾಗಿ ವಿಜ್ಞಾನಾಧಾರಿತ ಪ್ರಕ್ರಿಯೆ. ಈ ಘಟನೆ ‘Leidenfrost Effect’ ಎನ್ನುವ ಪ್ರಕೃತಿಶಾಸ್ತ್ರೀಯ ಪರಿಣಾಮದಿಂದ ಸಂಭವಿಸುತ್ತದೆ. ಇದರ ವಿವರವನ್ನು ‘Leidenfrost effect – Wikipedia’ ಪುಟದಲ್ಲಿ ನೋಡಿ ತಿಳಿಯಬಹುದು” ಎಂದು ಹೇಳಿದ್ದಾರೆ.

“ನಾವು ಅದನ್ನು ವರ್ಷಗಳ ಹಿಂದೆ ‘ಪವಾಡಗಳ ರಹಸ್ಯ ಬಯಲು- ಹಿಂದಿರುವ ವಿಜ್ಞಾನ’ ಎಂಬ ಕಾರ್ಯಕ್ರಮಗಳಲ್ಲಿ ಬಯಲು ಮಾಡಿ ಪ್ರದರ್ಶಿಸಿದ್ದೇವೆ. ಜನರು ಅದು ದೈವಿಕ ಶಕ್ತಿಯಿಂದ ಆಗುವುದಿಲ್ಲವೆಂಬುದನ್ನು ಅರ್ಥಮಾಡಿಕೊಂಡ ನಂತರ ಆ ಪ್ರದರ್ಶನಗಳನ್ನು ನಿಲ್ಲಿಸಿದ್ದೇವೆ. ಆ ಸಮಯದ ಒಂದು ವೀಡಿಯೋ ಯೂಟ್ಯೂಬ್‌ನಲ್ಲಿ ಇದೆ” ಎಂದಿರುವ ನರೇಂದ್ರ ನಾಯಕ್ ಅವರು ಲಿಂಕ್ ಅನ್ನೂ ಉಲ್ಲೇಖಿಸಿದ್ದಾರೆ. (https://www.youtube.com/watch?v=EYZbTjBsVyU)

“ಅದರಲ್ಲೂ, ಎಲ್ಲ ವರ್ಗದ ಜನರೂ ಯಾವುದೇ ಅತೀಂದ್ರಿಯ ಶಕ್ತಿಯ ಅವಲಂಬನೆಯಿಲ್ಲದೆ ಅಗ್ನಿಯ ಮೇಲೆ ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ನೀವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಇದು ‘ಕರ್ನಾಟಕ ಮಾನವ ವಿರೋಧಿ ಮತ್ತು ಅಮಾನವೀಯ ಕಪಟಾಚರಣೆಗಳು ಹಾಗೂ ಕಪ್ಪುಮ್ಯಾಜಿಕ್(ಮಾಟ,ಮಂತ್ರ) ನಿಷೇಧ ಮತ್ತು ನಿರ್ಮೂಲನೆ ಕಾಯ್ದೆ, 2017’ ಅಡಿಯಲ್ಲಿ ಅಪರಾಧ ಕಾರ್ಯವಾಗಿದೆ” ಎಂದು ತಿಳಿಸಿದ್ದಾರೆ.

“ಈ ಕಾಯ್ದೆಯ ಕಾಲಂ 10 ಪ್ರಕಾರ: ಜನರನ್ನು ಬಲವಂತವಾಗಿ ಕೆಂಡದ ಮೇಲೆ ನಡೆಯುವಂತೆ ಮಾಡುವ ಕಾರ್ಯವನ್ನು ನಿಷೇಧಿಸಲಾಗಿದೆ. ನಿಮಗೆ ಈ ಕಾಯ್ದೆಯ ಉಳಿದ ವಿಧಿಗಳ (1 ರಿಂದ 9) ಬಗ್ಗೆ ಸಹ ಸೂಕ್ತ ಅರಿವಿರಲಿದೆ ಎಂದು ನಾನು ನಂಬಿದ್ದೇನೆ. ಹಾಗೆಯೇ ಭಾರತ ಸಂವಿಧಾನದ ವಿಧಿ 51ಎ(ಎಚ್) ಪ್ರಕಾರ, ಪ್ರತಿಯೊಬ್ಬ ನಾಗರಿಕನ ಕರ್ತವ್ಯಗಳಲ್ಲಿ ಒಂದಾದದ್ದು ವೈಜ್ಞಾನಿಕ ಮನೋಭಾವ, ವಿಚಾರಶೀಲತೆ ಮತ್ತು ಮಾನವೀಯತೆಯ ಅಭಿವೃದ್ಧಿ ಬೆಳೆಸಿಕೊಳ್ಳುವುದು. ಹಾಗಾಗಿ ಕೆಂಡದ ಮೇಲೆ ನಡೆದು ಅದನ್ನು ದೈವಿಕ ಶಕ್ತಿ ಅಥವಾ ಅತೀಂದ್ರಿಯ ಕಾರಣಗಳಿಗೆ ಸಂಬಂಧಿಸಿದಂತೆ ತೋರಿಸುವುದು ಅವೈಜ್ಞಾನಿಕ” ಎಂದು ಸ್ಪಷ್ಟಪಡಿಸಿದ್ದಾರೆ.

“ನಾನು ಹಾಸನದಲ್ಲಿ ‘ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯಕ್ರಮ’ ಆಯೋಜಿಸಲು ಉದ್ದೇಶಿಸಿದ್ದೇನೆ. ಆ ಕಾರ್ಯಕ್ರಮದಲ್ಲಿ ಯಾವುದೇ ಧಾರ್ಮಿಕ ವಿಧಿ ಅಥವಾ ದೇವತಾ ನಂಬಿಕೆಯಿಲ್ಲದೆ ಕೆಂಡದ ಮೇಲೆ ನಡೆಯುವ ಪ್ರಾತ್ಯಕ್ಷಿಕೆ ಕೂಡ ಇರಲಿದೆ. ಈ ಕಾರ್ಯಕ್ರಮವನ್ನು ‘ವೈಜ್ಞಾನಿಕ ಮನೋಭಾವದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಸಂಘಟನೆಗಳು’ ಸಹಯೋಗದಲ್ಲಿ ಆಯೋಜಿಸಲಾಗುವುದು. ಇದು ಸಂಪೂರ್ಣವಾಗಿ ಧರ್ಮರಹಿತ ಹಾಗೂ ವೈಜ್ಞಾನಿಕ ಮನೋಭಾವದ ಪ್ರಚಾರಕ್ಕಾಗಿ ಮಾತ್ರ ಉದ್ದೇಶಿತವಾಗಿರುತ್ತದೆ. ಈ ಪ್ರಯತ್ನಕ್ಕೆ ಅಗತ್ಯವಿರುವ ವ್ಯವಸ್ಥೆಗಳನ್ನು ಕಲ್ಪಿಸಿ” ಎಂದು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...