ಕಾವೇರಿ ಆರತಿಗಲ್ಲ – ನದಿ ಸಂರಕ್ಷಣೆಗೆ ಆದ್ಯತೆ ಕೊಡಿ!

Date:

ಕಾವೇರಿ ನದಿಗೆ ಪೂಜೆ ಮಾಡುವ ಬದಲಾಗಿ, ನದಿಗೆ ತಂದು ಸುರಿಯುತ್ತಿರುವ ತ್ಯಾಜ್ಯವನ್ನು ತಡೆದು ಶುದ್ಧವಾಗಿ ಇಟ್ಟುಕೊಂಡರೆ ಅದೇ ಶ್ರೇಷ್ಠವಾದ ಕೆಲಸ. ಅದನ್ನು ಮಾಡುವುದು ಬಿಟ್ಟು ಪೂಜೆ ಮಾಡುತ್ತೇವೆಂದು ಹೇಳುವುದು ಕೇವಲ ತೋರಿಕೆಯ ಕೆಲಸವಷ್ಟೇ. ಸಾರ್ವಜನಿಕರ ತೆರಿಗೆಯ ಹಣವನ್ನು ಇಂತಹ ಅನಗತ್ಯ ಉದ್ದೇಶಕ್ಕೆ ಬಳಸುವುದು ಜನರಿಗೆ ಮಾಡುವ ವಂಚನೆ ಎಂದು ಮಂಡ್ಯದ ಸಾಮಾಜಿಕ ಹೋರಾಟಗಾರ ಎಂ.ವಿ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಲು ಹೊರಟಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕಾವೇರಿ ಆರತಿ ಎಂಬುದು ಅನಗತ್ಯವೆಂದು ಮಂಡ್ಯದ ರೈತರು, ಚಿಂತಕರು, ಹೋರಾಟಗಾರರು ಹೇಳುತ್ತಿದ್ದಾರೆ. ಕಾವೇರಿ ಆರತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಎಂ.ವಿ ಕೃಷ್ಣ, “ಗಂಗಾ ಆರತಿಯಿಂದಾಗಿ ಗಂಗಾ ನದಿ ಇನ್ನಷ್ಟು ಮಲಿವಾಗುತ್ತಿದೆ. ಈ ಕಾರ್ಯಕ್ರಮದಿಂದ ವ್ಯರ್ಥವಾಗಿ ಹಣ ಪೋಲಾಗಿದೆ. ಅದನ್ನೇ ರಾಜ್ಯ ಸರ್ಕಾರವು ಮಾಡಲು ಹೊರಟಿದೆ. ಅದರ ಬದಲಾಗಿದೆ, ಕಾವೇರಿ ನದಿಯುದ್ಧಕ್ಕೂ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ನದಿ ದಂಡೆಯಲ್ಲಿ ಕಸ, ಪ್ಲಾಸ್ಟಿಕ್ಅನ್ನು ಸುರಿಯಲಾಗುತ್ತಿತ್ತು. ಅದನ್ನು ತೆರವುಗೊಳಿಸಿ, ನದಿಯನ್ನು ಸಂರಕ್ಷಿಸುವ ಕೆಲಸವಾಗಬೇಕು” ಎಂದಿದ್ದಾರೆ.

ಕೆಂಬೂತಗೆರೆ ಶಿವಲಿಂಗಯ್ಯ ಮಾತನಾಡಿ, “ಕರ್ನಾಟಕ ಸರ್ಕಾರ ಕಾವೇರಿ ಆರತಿ ಕಾರ್ಯಕ್ರಮ ಮಾಡುತ್ತಿದೆ. ಮೋದಿ ನೇತೃತ್ವದ ಸರ್ಕಾರ ಗಂಗಾ ಆರತಿ ಮಾಡಿದ್ದನ್ನು ಒಂದು ನೆಪವಾಗಿ ಇಟ್ಟುಕೊಂಡು ಇವರು ಕೂಡ ಮಂಗಳಾರತಿ ಮಾಡಲು ಹೊರಟಿದ್ದಾರೆ. ಮೋದಿ ಜನಗಳ ಭಾವನೆಯನ್ನು ಬಂಡವಾಳ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಅವರು ಜನರ ಹಿತಾಸಕ್ತಿಗಿಂತ ಭಾವನೆಗಳನ್ನು ಕೆರಳಿಸಿ ಲಾಭ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡ ಅದೇ ದಾರಿಯಲ್ಲಿ ಹೊರಟಿರುವುದು ವಿಪರ್ಯಾಸ. ಜನರ ಸಮಸ್ಯೆಗಳಾದ ಅನ್ನ, ವಸತಿ ಇತ್ಯಾದಿ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇವತ್ತು ಮೌಢ್ಯವನ್ನು ಬಿತ್ತಲು ಹೊರಟಿರುವುದು ನಾಚಿಕೆಗೇಡು” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗುಳಘಟ್ಟ ಉಜಿನಿಗೌಡ ಮಾತನಾಡಿ, “ಮಂಡ್ಯ ಅಂದರೆ ಹಸಿರು ಕ್ರಾಂತಿ, ಸಕ್ಕರೆ ನಾಡು ಅಂತ ಮಾಧ್ಯಮಗಳು ವೈಭವಿಕರಿಸುತ್ತಿದ್ದವು. ಇವತ್ತು ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳು ಸಮಸ್ಯೆಯಲ್ಲಿವೆ. ಕಾಲಕಾಲಕ್ಕೆ ಮಳೆ. ಬೆಳೆ ಆಗುತ್ತಿಲ್ಲ. ಕಾಂಗ್ರೆಸ್ಸಿನವರು ಜನರಲ್ಲಿ ವೈಚಾರಿಕತೆ ಮೂಡಿಸುವ ಬದಲು ಮೌಢ್ಯ ಬಿತ್ತಲು ಹೊರಟಿದ್ದಾರೆ. ರಾಜಕಾರಣಿಗಳು ಜನರ ಗಮನವನ್ನು ಬೇರೆ ಕಡೆಗೆ ಸೆಳೆದು, ವಿಷಯಾಂತರ ಮಾಡಿ, ವಾಸ್ತವ ಸಮಸ್ಯೆಯಿಂದ ದೂರ ಮಾಡಿ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಆಲೂರಿನ ನಿವೃತ್ತ ಶಿಕ್ಷಕರಾದ ಚನ್ನಪ್ಪ ಮಾತನಾಡಿ, “ಕರ್ನಾಟಕ ಸರ್ಕಾರ ಗಂಗಾರತಿಯನ್ನು ಕಾವೇರಿ ಆರತಿಯಾಗಿ ಪರಿವರ್ತನೆ ಮಾಡ ಹೊರಟಿದೆ. ಚೆಲುವರಾಯಸ್ವಾಮಿ ಮುಂದಾಳತ್ವದ ತಂಡ ಉತ್ತರ ಭಾರತದಲ್ಲಿ ಅಧ್ಯಯನ ಮಾಡಿ ಬಂದು ಅನುಕರಣೆ ಮಾಡಲು ಹೊರಟಿದೆ. ಇದರಲ್ಲಿ ಪರಿಸರವನ್ನು ನೋಡಬೇಕಾಗುತ್ತದೆ. ನಾನು ಮೂರು ಸಲ ಗಂಗಾ ಆರತಿಯಲ್ಲಿ ಭಾಗವಹಿಸಿದ್ದೇನೆ. ಒಂದು ಮಣ್ಣಿನ ತಟ್ಟೆಯಲ್ಲಿ ದೀಪವನ್ನು ಇಟ್ಟು ನದಿಯಲ್ಲಿ ತೇಲಿ ಬಿಡುವುದೇ ಗಂಗಾ ಆರತಿ. ಲಕ್ಷಾಂತರ ಜನ ಹೀಗೆ ದೀಪಗಳನ್ನು ತೇಲಿ ಬಿಟ್ಟರೆ ನದಿಯ ಪಾವಿತ್ರ್ಯತೆ ಹಾಳಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ

ಬೊಪ್ಪಸಮುದ್ರದ ಪೃಥ್ವಿರಾಜ್ ಮಾತನಾಡಿ, “ಕಳೆದ ವರ್ಷ ಬೀಕರ ಬರಗಾಲ ಎದುರಾಗಿತ್ತು. ಉತ್ತಮ ಬೆಳೆ ಇಲ್ಲದೆ, ರೈತರು ಅಪಾರ ನಷ್ಟ ಅನುಭಿವಿಸಿದ್ದಾರೆ. ಈಗ ಮಳೆ ಚೆನ್ನಾಗಿ ಆಗಿದ್ದು ಅಣೆಕಟ್ಟುಗಳು ತುಂಬಿವೆ. ಆದರೆ, ಕೊನೆ ಭಾಗದ ರೈತರ ಜಮೀನುಗಳಿಗೆ ಇನ್ನೂ ಸರಿಯಾಗಿ ನೀರು ತಲುಪಿಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಇಂತಹ ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರದ ರೀತಿ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ಗಂಗಾ ಆರತಿ ಎಂಬ ಕಾರ್ಯಕ್ರಮದ ಮೂಲಕ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುವುದಲ್ಲದೆ, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾವೇರಿ ಆರತಿ ಮಾಡಲು ಹೊರಟಿರುವುದು ರಾಜ್ಯದ ಜನರಿಗೆ ಮಾಡುವ ಅನ್ಯಾಯ. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ನ್ಯಾಯ, ಬಡವರ ಪರವಾಗಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರಲ್ಲಿ ಮೌಢ್ಯ ಬಿತ್ತಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ” ಎಂದಿದ್ದಾರೆ.

ಈಗಾಗಲೇ ಕಾವೇರಿ ನದಿಯ ನೀರು ‘ಸಿ’ ಗುಣಮಟ್ಟ ತಲುಪಿದೆ. ಅಂದರೆ, ಈಗ ಕೈಗಾರಿಕೆಗಳ ಬಳಕೆಗಷ್ಟೆ ಯೋಗ್ಯವಾಗಿದೆ.
ನದಿ ಹರಿಯುವ ಊರು, ಪಟ್ಟಣಗಳ ಗಲೀಜು ನೇರವಾಗಿ ನದಿಗೆ ಸೇರುತ್ತಿವೆ. ಕಾರ್ಖಾನೆಗಳ ತ್ಯಾಜ್ಯವೂ ನದಿಯನ್ನು ಸೇರುತ್ತಿದೆ. ಇದೆಲ್ಲವನ್ನೂ ತಡೆದು, ನದಿಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕಿರುವ ಸರ್ಕಾರ, ಆರತಿ ಹೆಸರಿನಲ್ಲಿ ಅನಗತ್ಯ ಹಣ ವ್ಯರ್ಥ ಮಾಡಲು ಮುಂದಾಗಿರುವುದು ಸರಿಯಲ್ಲ. ಸರ್ಕಾರವು ತನ್ನ ನಿರ್ಧಾರವನ್ನು ಬದಲಿಸಬೇಕು. ನದಿ ರಕ್ಷಣೆಗೆ ಆಧ್ಯತೆ ಕೊಡಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...