ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಅಂಗವಾಗಿ ಮೇ 25 ಹಾಗೂ 26 ರಂದು ಎರಡು ದಿನಗಳ ಕಾಲ ಕಾವ್ಯ, ಕಥಾ ಮತ್ತು ಕಮ್ಮಟ ಆಯೋಜಿಸಲಾಗಿದೆ ಶಹಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ತಿಳಿಸಿದ್ದಾರೆ.
“ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಹೊರವಲಯದ ಸಾಯಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎರಡು ದಿನದ ಕಮ್ಮಟದಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ಡಾ.ಅರುಣ ಜೋಳದಕೂಡ್ಲಿಗಿ, ಡಾ.ವಿಕ್ರಮ ವಿಸಾಜಿ, ಮಹಿಪಾಲರೆಡ್ಡಿ ಮನ್ನೂರ್, ಪ್ರೊ.ಕೃಷ್ಣ ನಾಯಕ ಹಾಗೂ ಡಾ. ಕಾವ್ಯಶ್ರೀ ಮಹಾಗಾಂವಕಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಲಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಯುವಕವಿಗಳು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸ್ತಕರು ಕಮ್ಮಟದ ಸದುಪಯೋಗ ಪಡಿದುಕೊಳ್ಳಬೇಕು ಹಾಗೂ ಕಮ್ಮಟ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಶಿಬಿರಾರ್ಥಿಗಳು ಶಿಬಿರದ ನಿಯಮಗಳಿಗೆ ಬದ್ಧರಾಗಿ ಭಾಗವಹಿಸುವಂತೆ ಕೋರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು
ಶಿಬಿರದ ಕುರಿತು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಶಿಬಿರಾಧಿಕಾರಿಗಳಾದ ರಾಘವೇಂದ್ರ ಹಾರಣಗೇರಾ, ಗೌರವ ಕಾರ್ಯದರ್ಶಿಗಳು 9740722431, ಸುರೇಶ ಕೆ, ಅರುಣಿ ಗೌರವ ಕಾರ್ಯದರ್ಶಿಗಳು 9901559873, ಸಂಯೋಜನಾಧಿಕಾರಿಗಳಾದ ಶಂಕರ್ ಹುಲಕಲ್ 9743735650, ನಿಂಗಣ್ಣ ನಾಟೆಕಾರ್ 9663327770 ಹಾಗೂ ಕಸಾಪ ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ 9902570037 ಅವರನ್ನು ಸಂಪರ್ಕಿಸಲು ಕೋರಿದ್ದಾರೆ.





