ಗದಗ ನೆಲದ ಕವಿಗಳು ಅದ್ಭುತ ಸಾಹಿತ್ಯವನ್ನು ಈ ಜಗತ್ತಿಗೆ ಕೊಟ್ಟಿದ್ದಾರೆ: ಉಪನ್ಯಾಸಕ ಎಫ್ ಏನ್ ಹುಡೇದ್

Date:

“ಗದಗ ನೆಲದ ಕವಿಗಳು ಅದ್ಭುತ ಸಾಹಿತ್ಯವನ್ನು ಈ ಜಗತ್ತಿಗೆ ಕೊಟ್ಟಿದ್ದಾರೆ’ ಎನ್ನುವುದು 10ನೇ ಸಾಹಿತ್ಯ ಸಮ್ಮೇಳನದ ಗರಿಮೆಯಾಗಿದೆ. ಇಬ್ಬರು ಕವಿಗಳು ಜನಕಲ್ಯಾಣ ಎನ್ನುವ ಒಂದೇ ಉದ್ದೇಶವನ್ನು ಹೊಂದಿದ್ದರು” ಎಂದು ಉಪನ್ಯಾಸಕ ಎಫ್. ಏನ್ ಹುಡೇದ್ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮೊದಲ ದಿನದ ಗದಗ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ‘ಹಳೇ ಹೊನ್ನು’ ಎಂಬ ಮೊದಲನೇ ಗೋಷ್ಠಿಯಲ್ಲಿ ಕುಮಾರವ್ಯಾಸ- ಚಾಮರಸರ ಕುರಿತು ಉಪನ್ಯಾಸ ನೀಡಿದರು.

“ಇಬ್ಬರು ಕವಿಗಳು ಜನಕಲ್ಯಾಣ ಎನ್ನುವ ಒಂದೇ ಉದ್ದೇಶವನ್ನು ಹೊಂದಿದ್ದರು. ಕುಮಾರವ್ಯಾಸ ಭಾರತ ಬರೆಯಬೇಕಾದರೆ ‘ವೀರನಾರಾಯಣನೇ ಕವಿ; ನಾನು ಲಿಪಿಕಾರ’ ಎಂದು ತನ್ನ ಕೃತಿ ‘ಗದುಗಿನ ಕುಮಾರವ್ಯಾಸ ಭಾರತ’daಹೇಳಿದ್ದಾನೆ. ಕವಿ ಚಾಮರಸ ‘ಆಸೆಗೆ ಸತ್ತದ್ದು ಕೋಟಿ, ಆಮಿಷಕ್ಕೆ ಸತ್ತದ್ದು ಕೋಟಿ; ನಿಮಗಾಗಿ ಸತ್ತವರು ಒಬ್ಬರನ್ನು ಕಾಣೇ ಗುಹೇಶ್ವರ’ ಎಂದು ಹೇಳಿದ್ದಾರೆ. ಆದ್ದರಿಂದ ಹೇಳುವ ವಿಧಾನ ವಿಭಿನ್ನವಾದರೂ ಉದ್ದೇಶ ಒಂದೇ ಆಗಿದೆ. ಕುಮಾರವ್ಯಾಸ ಭಾರತದಲ್ಲಿ ಧರ್ಮಾಧರ್ಮಗಳ ಸಂಘರ್ಷವನ್ನೇ ಕಾಣುತ್ತೇವೆ. ಕುಮಾರವ್ಯಾಸರು ಕೃಷ್ಣನನ್ನು ಮುಂದಿಟ್ಟುಕೊಂಡು ಧರ್ಮ ಕಾರಣಕ್ಕಾಗಿ ಲೋಕಕಲ್ಯಾಣವನ್ನು ಬಯಸುತ್ತಾರೆ’ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಯಸೇನ-ದುರ್ಗಸಿಂಹರ ಕುರಿತು ಉಪನ್ಯಾಸ ನೀಡಿದ ಪ್ರಾಚಾರ್ಯ ಎಂ.ಸಿ.ಕಟ್ಟಿಮನಿ, “ರೋಣದ ದುರ್ಗಸಿಂಹ, ಮುಧೋಳದ ರನ್ನ, ಅಣ್ಣಿಗೇರಿಯ ಪಂಪ,  ಲಕ್ಕುಂಡಿಯ ಅತ್ತಿಮಬ್ಬೆ,  ಕುಮಾರವ್ಯಾಸ, ನಾರಾಯಣಪುರದ ಚಾಮರಸ, ಮುಳಗುಂದದ ನಯಸೇನ,  ಹೀಗೆ 10ನೇ ಶತಮಾನದಿಂದ ಈಗಿನವರೆಗೂ ಕಾಣಬಹುದು” ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗಜೇಂದ್ರಗಡದ ಎಫ್.ಎಸ್.ಕರಿದುರನವರ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ, ಕೋಟುಮಚಗಿಯ ವಿದ್ಯಾಧರ ದೊಡ್ಡಮನಿ, ಆರ್.ಕೆ.ಬಾಗವಾನ, ರಮಾಕಾಂತ ಕಮತಗಿ, ವಿ.ವಿ.ಅಣ್ಣಿಗೇರಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...