ಸಮತಾ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಂಯುಕ್ತಾಶ್ರಯದಲ್ಲಿ ಇದೇ ಮಾರ್ಚ್.1ರಂದು ಮೈಸೂರಿನ ಶ್ರೀರಂಗ ಸಭಾಂಗಣ, ರಂಗಾಯಣದಲ್ಲಿ ‘ಪ್ರತಿಭಾ ನಂದಕುಮಾರ್ ಕೃತಿಗಳ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ‘ಪ್ರತಿಭಾ ಕಾವ್ಯದಲ್ಲಿ ದೇಹ ಮೀಮಾಂಸೆ’ ವಿಷಯವಾಗಿ ಲೇಖಕಿ ಮತ್ತು ವಿಮರ್ಶಕರಾದ ಡಾ. ಗೀತಾ ವಸಂತ ವಿಚಾರ ಮಂಡನೆ ಮಾಡಲಿದ್ದಾರೆ. ಹಾಗೆ, ‘ಕಾವ್ಯಾಭಿವ್ಯಕ್ತಿಯ ಅನನ್ಯತೆ’ ವಿಷಯವಾಗಿ ಮಾನಸ ಗಂಗೋತ್ರಿ, ಕುವೆಂಪು ಅಧ್ಯಯನ ಸಂಸ್ಥೆಯ ಉಪನ್ಯಾಸಕರಾದ ಡಾ. ಶೈಲಾ ಎಚ್. ಎಲ್ ವಿಚಾರ ಮಂಡನೆ ಮಾಡಲಿದ್ದಾರೆ.
ಸಂವಾದ ಕಾರ್ಯಕ್ರಮದಲ್ಲಿ ಲೇಖಕಿ ಸುಚಿತ್ರ ಹೆಗಡೆ, ಆಕಾಶವಾಣಿ ಉದ್ಘೋಶಕಿ ಡಾ. ಶಬಾನ, ಲೇಖಕಿ ಮಧುರಾಣಿ, ಜೆಎಸ್ಎಸ್ ಮಹಿಳಾ ಕಾಲೇಜು ಸಹ ಪ್ರಾಧ್ಯಾಪಕಿ ಜೆ. ಪುಷ್ಪಲತಾ ಹಾಗೂ ಲೇಖಕಿ ಮೀನಾ ಮೈಸೂರು ಪಾಲ್ಗೊಳ್ಳಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕನ್ನಡದ ಕವಿಗಳು ರಾಜರು, ಮಾರ್ಗಕಾರರು, ಕಲಿಗಳೂ ಹೌದು: ರಂಗಕರ್ಮಿ ಡಾ ಸುಜಾತ ಅಕ್ಕಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಉಪ ಕುಲಪತಿ ಹಾಗೂ ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಸಬಿಹಾ ಭೂಮಿಗೌಡ ವಹಿಸಲಿದ್ದಾರೆ. ಕರ್ನಾಟಕ ಲೇಖಕಕಿಯರ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಉಷಾ ನರಸಿಂಹನ್ ಸ್ವಾಗತ ಹಾಗೂ ಪ್ರಸ್ತಾವನೆ ನಡೆಸಿಕೊಡಲಿದ್ದು, ಕೃತಿಗಳ ಬಿಡುಗಡೆಯನ್ನು ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷರಾದ ಡಾ. ಆರ್. ಸುನಂದಮ್ಮ ನಡೆಸಿಕೊಡಲಿದ್ದಾರೆ.





