ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿಯೊಂದು ಮಗುವಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಸೌಕರ್ಯಗಳು ಒದಗಿಸಿ ಕೊಡಬೇಕು ಎಂದು ಎನ್ಸಿಎಲ್ಪಿ ಸಂಸ್ಥೆಯ ನಿರ್ದೇಶಕ ರಿಯಾಜ್ ಪಟೇಲ್ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊತಪೇಟ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಎನ್ಸಿಎಲ್ಪಿ ಸಂಸ್ಥೆಯ ವವಸ್ಥಾಪಕ ಅನಿಲ್ ತೇಜಪ್ಪ ಬಲ್ಲೂರುಕರ್ ಮಾತನಾಡಿ, “ಮಕ್ಕಳು ಸಂಪೂರ್ಣ ಬೆಳವಣಿಗೆಗಾಗಿ ವರ್ಲ್ಡ್ ವಿಷನ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಉತ್ತಮ ಶಿಕ್ಷಣ ನೀಡುವ ಸಲುವಾಗಿ ಆರ್ಇಸಿ ಸೆಂಟರ್ಗಳು ಕಾರ್ಯ ನಿರ್ವಹಿಸುತ್ತಿವೆ” ಎಂದರು.
ರೇಣುಕಾ ಪಾಟೀಲ್ ಬಿಆರ್ಸಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಎಲ್ಲ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡಿಯಬೇಕು. ಹೆಣ್ಣು ಮಕ್ಕಳು ವಿವಿಧ ಹುದ್ದೆಗಳಲ್ಲಿ ಇದ್ದಾರೆ. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಬಾವಿಮನಿ ಪೊಲೀಸ್, ನಂದ ಸೂರಿ, ರಾಮಣ್ಣ ದೊರೆ, ಶಕೀಲಾ ಬಾನು, ಸಾಬೇರಾ ಬೇಗಂ, ಮಾಶಾಕ್ ಸಿ ಆರ್ ಪಿ, ಶರಣಪ್ಪ, ರಾಜೇಶ್ವರಿ, ಸುಂದರ್ ಎಂ, ಸುಪ್ರೀಂ ಜಾಯ್, ರೋಮಾ ಆರ್ , ಸಿದ್ದಮ್ಮ, ಮೋಹನ್ ಕುಮಾರ್ ಹೊಸಮನಿ, ಅಶೋಕ್ ಸೇರಿದಂತೆ ಹಲವರು ಇದ್ದರು.




