ಚಿಂತಾಮಣಿ:ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಶೌಚಾಲಯವನ್ನು ಸ್ಥಳಾಂತರ ಗೊಳಿಸುವಂತೆ ಪಂಚಾಯಿತಿಯಿಂದ ನೋಟಿಸ್ ನೀಡಿದ್ದರು ನೋಟಿಸ್ ಗೆ ಕ್ಯಾರೆ ಎನ್ನದ ಒತ್ತುವರಿದಾರರು ಅಧಿಕಾರಿಗಳೇ ಖುದ್ದಾಗಿ ತೆರವು ಕಾರ್ಯಾಚರಣೆ ಮಾಡಿದ ಹಿನ್ನೆಲೆಯಲ್ಲಿ ಒತ್ತುವರಿದಾರರು ಚಿಂತಾಮಣಿ ನಗರದ ತಾಲೂಕು ಪಂಚಾಯಿತಿ ಮುಂಭಾಗ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಗ್ಗೆಯಿಂದ ಚಿಂತಾಮಣಿ ತಾಲ್ಲೂಕಿನ ಕುರುಬರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಕಲ್ಲು ಗ್ರಾಮದವರಾದ ನರಸಿಂಹಪ್ಪ ರವರ ಕುಟುಂಬದವರು ತಾಲೂಕು ಪಂಚಾಯಿತಿ ಆವರಣದ ಬಳಿ ಅಂಬೇಡ್ಕರ್ ರವರ ಭಾವಚಿತ್ರವನ್ನು ಇಟ್ಟು ಪ್ರತಿಭಟನೆಗೆ ಮುಂದಾಗಿ ಮಾತನಾಡಿದವರು ಏಕಾಏಕಿ ಅಧಿಕಾರಿಗಳು ನಾವು ಕಟ್ಟಿಕೊಂಡಿರುವ ಮನೆ ಹಾಗೂ ಶೌಚಾಲಯವನ್ನು ತೆರುವುಗೊಳಿಸಿದ್ದಾರೆ ಇದರಿಂದ ನಮಗೆ ಅನ್ಯಾಯವಾಗಿದೆ ಅನ್ಯಾಯ ದೊರಕಿಸಿ ಕೊಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಇನ್ನೂ ಬುಧವಾರದ ಬೆಳಗ್ಗೆ ಅದೇ ತಾಲ್ಲೂಕು ಪಂಚಾಯಿತಿ ಎದುರುಗಡೆ ಸದರಿ ಗ್ರಾಮದ ಶಿವಣ್ಣ ರವರ ನೇತೃತ್ವದಲ್ಲಿ ಹಲವು ಮಂದಿ ಅಧಿಕಾರಿಗಳ ಪರವಾಗಿ ನಿಂತು ಪ್ರತಿಭಟನೆ ಮಾಡಿದ ಅವರುಗಳು ಸಹ ಮಾತನಾಡಿ ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿ ನರಸಿಂಹಪ್ಪ ರವರ ಕುಟುಂಬದವರು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ!ಅಧಿಕಾರಿಗಳು ಕಾನೂನು ಬದ್ಧವಾಗಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಶೌಚಾಲಯವನ್ನು ತೆರವು ಗೊಳಿಸಿರುವುದು ಸರಿಯಾಗಿದೆ!ವಿನಾಕಾರಣ ಅಧಿಕಾರಿಗಳಿಗೆ ಈ ರೀತಿ ಪ್ರತಿಭಟನೆ ಮಾಡಿ ತೊಂದರೆ ನೀಡುವುದು ಸರಿ ಇಲ್ಲ ಎಂದು ದೂರಿದರು.
ಇನ್ನೂ ಇದನ್ನು ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ರವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಮಾತನಾಡಿದಾಗ ನರಸಿಂಹಪ್ಪ ರವರ ಕುಟುಂಬದವರು ರಸ್ತೆಗೆ ಅಡ್ಡಲಾಗಿ ಶೌಚಾಲಯವನ್ನು ನಿರ್ಮಿಸಿದ್ದರು.ಒತ್ತುವರಿದಾರರಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೋಟಿಸ್ ನೀಡಿ ಶೌಚಾಲಯವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಓಡಾಡಲು ರಸ್ತೆ ಅನುಕೂಲ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
ಇದನ್ನು ಓದಿದ್ದೀರಾ..? ಅರಣ್ಯ ಅಧಿಕಾರಿಗಳ ಕಿರುಕುಳ ಇತ್ಯರ್ಥಕ್ಕೆ ರೈತರಿಂದ ಪ್ರತಿಭಟನೆ
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಮುನಿಸ್ವಾಮಿ, ಮಂಜುನಾಥ್,ಗೋವಿಂದಪ್ಪ,ದೇವರಾಜ್,ಆನಂದಮ್ಮ, ನಂದಿನಿ,ಶಿಲ್ಪ,ಪ್ರಭ,ಸೀತಮ್ಮ,ಮಾಲತಿ,ಕವಿತಮ್ಮ,ಇದ್ದರು





