ಎಸ್ ಸಿ,ಎಸ್ ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲು ವಿಫಲವಾದ ರಾಜ್ಯ ಸರ್ಕಾರದ ಕಾರ್ಯವೈಖರಿ ಖಂಡಿಸಿ ಕರ್ನಾಟಕ ರಾಜ್ಯ ಮಾದಿಗ ಪದವಿಧರ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಬಾಬು ಜಗಜೀವನ್ ರಾಮ್ ವೃತ್ತದಿಂದ ಬೈಕ್ ರ್ಯಾಲಿ ನಡೆಸಿ ಬಳಿಕ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸಿಎಂ, ಡಿಸಿಎಂ, ಸಚಿವ ಮಹಾದೇವಪ್ಪ, ಶಿವರಾಜ ತಂಗಡಗಿ, ಪರಮೇಶ್ವರ, ಸೇರಿದಂತೆ ಇತರೆ ಸಚಿವರ ಭಾವಚಿತ್ರ ಧಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪ.ಜಾತಿ, ಪ.ಪಂಗಡ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾಗಿ ಮಿಸಲಾತಿ ಪ್ರಮಾಣ ಹೆಚ್ಚಿಸಿ ಹಲವಾರು ವರ್ಷಗಳಿಂದ ಅನುಷ್ಟಾನ ಗೊಳಿಸುತ್ತಿರುವಾಗ ಜನಸಂಖ್ಯೆಗೆ ಅನುಗುಣವಾಗಿ ಸಿಗಬೆಕಾದ ಸಾಮಾಜಿಕ ನ್ಯಾಯದ ಪಾಲನ್ನು ನೀಡದೆ ಮೋಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಒಳ ಮೀಸಲಾತಿಯಲ್ಲಿ ಅನ್ಯಾಯ ಮಾಡುತ್ತಿರುವ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
ಪ.ಜಾತಿಗೆ 15-17 ಮತ್ತು ಪ.ಪಂಗಡಕ್ಕೆ 3 -7 ಮಿಸಲು ಪ್ರಮಾಣ ಹೆಚ್ಚಳದಂತೆ ಉದ್ಯೋಗಗಳನ್ನು ನೀಡದೆ ಪರಿಶಿಷ್ಟ ಜಾತಿಗೆ ಶೇ.2 ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 4 ರಷ್ಟು ಮೀಸಲಾತಿ ನೀಡಿ ವಂಚಿಸಿದೆ. ಹೆಚ್ಚಿನ ಹುದ್ದೆಗಳನ್ನು ತಪ್ಪಿಸಿ 56432 ಹುದ್ದೆಗಳ ಭರ್ತಿಗೆ ಮುಂದಾದ ದಲಿತ ವಿರೋಧಿ ನೀತಿ ಹಿಂಪಡೆದು ಮತ್ತು 35 ವರ್ಷಗಳ ಸಾಮಾಜಿಕ ನ್ಯಾಯದ ಬೇಡಿಕೆ ಈಡೇರಿಸಿ ನೀಡಲಾದ ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರ ನಡೆಸಿರುವ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಮಾದಿಗ ಸಂಭಂದಿತ ಜಾತಿಗೆ ಪ.ಜಾತಿ ಪ್ರ ವರ್ಗ-ಎ ರಂತೆ ಸಿಗಬೇಕಾದ ಸುಮಾರು 3387ಕ್ಕು ಹೆಚ್ಚಿನ ಹುದ್ದೆಗಳನ್ನು ತಪ್ಪಿಸಲು ಕೈಗೊಂಡ ಸರ್ಕಾರದ ನಿರ್ಧಾರ ಹಿಂಪಡೆದುಕೊಳ್ಳಬೇಕು ಎಂದು ಅಗ್ರಹಿಸಿದರು.
ಶೇ.56 ರಷ್ಟು ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ನ್ಯಾಯ ನೀಡಲು ಆಗದಿದ್ದಲ್ಲಿ ಪಜಾ 17 ರಷ್ಟು ಅಥವಾ 15 ರಷ್ಟು ಮೀಸಲಾತಿಯಲ್ಲಿ ಒಳ ಮಿಸಲಾತಿ ಕಲ್ಪಿಸಿ ಆದೇಶಸಿಸಬೇಕು, ಒಳ ಮೀಸಲಾತಿ ಇಲ್ಲದೆ ನೇಮಕಾತಿ ಮಾಡಲು ತರಾತುರಿಯಲ್ಲಿ ಹೊರಡಿಸಿರುವ ಸರ್ಕಾರದ ಆದೇಶ ಹಿಂಪಡೆಯಲು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದ್ವಿತೀಯ ಪಿಯು ಪರೀಕ್ಷೆ : ಮೊದಲ ದಿನ 16,434 ವಿದ್ಯಾರ್ಥಿಗಳು ಹಾಜರು, 1,067 ಗೈರು
ಪ್ರತಿಭಟನೆಯಲ್ಲಿ ಮಾದಿಗ ಸಮಾಜದ ಮುಖಂಡರುಗಳಾದ ಎಂ.ವಿರೂಪಾಕ್ಷಿ, ರವಿಂದ್ರ ಜಲ್ದಾರ್, ಎಸ್.ಮಾರೆಪ್ಪ ವಕೀಲ, ರಾಜು, ಹೇಮರಾಜ ಅಸ್ಕಿಹಾಳ, ಹನುಮಂತಪ್ಪ ಮನ್ನಾಪೂರ, ರಾಘವೇಂದ್ರ ಬೋರಡ್ಡಿ, ನರಸಿಂಹಲು, ಮಾದಿಗ ಪದವಿದರ ವೇದಿಕೆ ಅಧ್ಯಕ್ಷ ಶರಣು ತುಗ್ಗಲದಿನ್ನಿ, ರಾಜು ಮನ್ಸಲಾಪೂರ, ಮಲ್ಲಿಕಾರ್ಜುನ ಶಾಖವಾದಿ, ಗೊವಿಂದ ಬಾಪೂರ, ಸುರೇಶ ಬೋರಡ್ಡಿ, ನರಸಿಂಹ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.





