ವಸತಿ ನಿಲಯಗಳಿಗೆ ಆಹಾರ ಸಾಮಗ್ರಿ ಪೂರೈಸುವ ಗುತ್ತಿಗೆ ಸಂಸ್ಥೆಗೆ ಬಾಕಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪೀಠೋಪಕರಣ ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ವಸತಿ ನಿಲಯಗಳಿಗೆ ಆಹಾರ ಸಾಮಾಗ್ರಿ ಪೂರೈಕೆ ಮಾಡಲು ಗುತ್ತಿಗೆ ಪಡೆದ ಪದ್ಮಾವತಿ ಎಂಟರ್ಪ್ರೈಸ್ ಸಂಸ್ಥೆಗೆ ನಿಯಮಾನುಸಾರ ರೂ.32.52 ಲಕ್ಷ ಹಣ ಪಾವತಿ ಮಾಡಬೇಕಿತ್ತು. ಹಣ ಪಾವತಿ ಮಾಡದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಸುದ್ದಿ ಓದಿದ್ದೀರಾ? ಮಾನ್ವಿ | ಚರಂಡಿಯಲ್ಲಿ ಬಿದ್ದು ವೃದ್ಧೆ ಸಾವು
ಜಿಲ್ಲಾ ಸತ್ರ ನ್ಯಾಯಾಲಯದ ಮಧ್ಯಂತರ ಆದೇಶದಂತೆ 16.14 ಲಕ್ಷ ರೂ ಪಾವತಿ ಮಾಡಿದ್ದರು. ಬಾಕಿ ರೂ.16.91 ಲಕ್ಷ ಪಾವತಿ ಮಾಡಲು ವಿಳಂಬ ಮಾಡಿದ ಕಾರಣ ಪುನಃ ನ್ಯಾಯಾಲಯದ ಕಟಕಟೆಯ ಬಾಗಿಲು ತಟ್ಟಿದಾಗ ನ್ಯಾಯಾಲಯ ಬಡ್ಡಿ ಸಮೇತ ಬಾಕಿ ಹಣ ಪಾವತಿಸಲು ಆದೇಶ ಮಾಡಿತ್ತು ನ್ಯಾಯಾಲಯದ ಆದೇಶ ಪಾಲನೆ ಮಾಡದ ಕಾರಣ ಪೀಠೋಪಕರಣ, ಕಚೇರಿಯ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು.





