ರಾಜ್ಯದಲ್ಲಿ ಒಳ ಮೀಸಲಾತಿ ವರ್ಗೀಕರಣದ ಗೊಂದಲ ಇದ್ದ ಕಾರಣ ವಿಶ್ವ ವಿದ್ಯಾಲಯದಲ್ಲಿ ಯಾವುದೇ ರೀತಿಯ ಹುದ್ದೆಗಳ ನೇಮಕಾತಿಯನ್ನು ಅಧಿಕೃತ ಆದೇಶ ಬರುವವರೆಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬಾರದೆಂದು ಮಾದಿಗ ಮೀಸಲಾತಿ ಹೋರಾಟ ತಾಲೂಕ ಸಮಿತಿ ವತಿಯಿಂದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯದ ಕುಲಪತಿಗೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಸಮುದಾಯಗಳಿಗೆ ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಬೇಕೆಂದು 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಸರ್ವೋಚ್ಚ ನ್ಯಾಯಾಲಯವು ಮೀಸಲಾತಿ ಹೆಚ್ಚಳಕ್ಕೆ ಮಹತ್ವದ ತೀರ್ಪನ್ನು ನೀಡಿತ್ತು. ತೀರ್ಪಿನ ಅನ್ವಯ ರಾಜ್ಯ ಸರ್ಕಾರ ಹೆಚ್.ಎನ್. ನಾಗಮೋಹನ್ದಾಸ್ ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸರ್ಕಾರ ತರಾತುರಿಯಲ್ಲಿ ಶೇ17 ರಲ್ಲಿ ಎಡಗೈ ಸಮುದಾಯಕ್ಕೆ ಶೇ 6, ಬಲಗೈ ಸಮುದಾಯಕ್ಕೆ ಶೇ 6, ಕೋಲಂಬಿಸ್ ಸಮುದಾಯಕ್ಕೆ ಶೇ 5 ಕೊರವ, ಕೊರಚ, ಲಂಬಾಣಿ, ಭೋವಿ ಸಮುದಾಯಗಳಿಗೆ ಮೀಸಲಾತಿಯನ್ನು ಹಂಚಲಾಗಿದೆ.
ಆದರೆ ಅಲೆಮಾರಿ ಜನಾಂಗಕ್ಕೆ ಮತ್ತು ಎಕೆ, ಎಡಿ, ಎಎ, ಈ ಜಾತಿಗಳ ಗೊಂದಲ ಮತ್ತು ಬ್ಯಾಕ್ಲಾಗ್ ಉದ್ಯೋಗಗಳಲ್ಲಿ 101 ಜಾತಿಗಳಿಗೆ ಮೋಸ ಮಾಡಿದೆ. ಸರ್ಕಾರದ ಈ ಧೋರಣೆಯ ವಿರುದ್ಧ ಒಳ ಮೀಸಲಾತಿಯ ವರದಿ ಹೈಕೋರ್ಟ್ ಮೆಟ್ಟಿಲೇರಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಗೊಂದಲದಲ್ಲಿದ್ದು ಸರ್ಕಾರ ಅಧಿಕೃತ ಮತ್ತು ಆದೇಶ ಹೊರಡಿಸುವವರೆಗೆ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಭರ್ತಿ ಮಾಡಬಾರದೆಂದು ಹಾಗೂ ರಾಜ್ಯ ಸರ್ಕಾರದಿಂದ ಸಂಪೂರ್ಣ ಒಳ ಮೀಸಲಾತಿ ಅಧಿಕೃತ ಆದೇಶ ಬರುವವರೆಗೂ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಕಾಲಿಕ ಮಳೆಗೆ ಜೋಳ ಬೆಳೆ ಹಾನಿ; ಸಂಕಷ್ಟದಲ್ಲಿ ರೈತರು
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ದುಳ್ಳಯ್ಯ ಗುಂಜಹಳ್ಳಿ,ಭೀಮೇಶ ತುಂಟಾಪೂರು, ಸುರೇಶ ದುಗನೂರ, ನಜಕ್ರಪ್ಪ ಹಂಚಿನಾಳ,ರAಜೀತ್ ದಂಡೋರ, ದಾವೀದ್ ಮರ್ಚೆಟ್ಟಾಳ, ಮಾರುತಿ ಮರ್ಚೆಟ್ಟಾಳ,ಸೇರಿದಂತೆ ಅನೇಕರು ಇದ್ದರು.





