ನಗರದ ಆಶಾಪುರ ರಸ್ತೆಯಲ್ಲಿರುವ ಜಮೀನೊಂದರಲ್ಲಿ ಬೆಳೆದು ನಿಂತ ಹತ್ತಿಯನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈರಣ್ಣ ಹೊಸೂರು ಎಂಬ ರೈತನ ಜಮೀನಿನಲ್ಲಿ ಬೆಳೆಯುತ್ತಿದ್ದ ಹತ್ತಿಯನ್ನು ಬೆಳಗಿನ ಜಾವ ಸುಮಾರು ಐದು ಕ್ವಿಂಟಾಲ್ ಪ್ರಮಾಣದಲ್ಲಿ ಕದ್ದಿರುವುದಾಗಿ ಆರೋಪಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಇದೇ ಹೊಲದಲ್ಲಿದ್ದ ಸೋಲಾರ್ ಬ್ಯಾಟರಿಯೂ ಕಳ್ಳತನವಾಗಿತ್ತು. ಇಂದು ಬೆಳಗಿನ ಜಾವ ಜಮೀನಿಗೆ ತೆರಳಿದಾಗ ಕೆಲ ಮಹಿಳೆಯರು ಹತ್ತಿ ಕಳವು ಮಾಡುತ್ತಿರುವುದನ್ನು ರೈತರು ಪತ್ತೆಹಚ್ಚಿದ್ದು, ತಕ್ಷಣವೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣದ ಕುರಿತು ವಿಚಾರಣೆ ಆರಂಭಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಆರೋಪ
ತದ್ವರೆಗೆ ನಷ್ಟದ ಹೊರೆ ಹೊತ್ತಿರುವ ರೈತರಿಗೆ ಹತ್ತಿ ಕಳ್ಳತನ ಮತ್ತೊಂದು ಧಕ್ಕೆಯಾಗಿದೆ. ಬೆಳೆ ಬೆಳೆಸುವಲ್ಲಿ ಎದುರಾಗುತ್ತಿರುವ ಸಂಕಷ್ಟದ ಮಧ್ಯೆ ಈ ರೀತಿಯ ಕಳವುಗಳು ರೈತರಲ್ಲಿ ಆತಂಕ ಉಂಟುಮಾಡಿವೆ.





