ಹುಬ್ಬಳ್ಳಿಯಲ್ಲಿ ಪ್ರೇಮದ ಹೆಸರಿನಲ್ಲಿ ಯುವತಿ ಅಂಜಲಿ ಆಂಬೀಗೇರ ಅವರನ್ನು ಕೊಲೆ ಮಾಡಿರುವ ಅರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಜಿಲ್ಲಾ ಗಂಗಾಮಸ್ಥ ಸಮಾಜ ಅಧ್ಯಕ್ಷ ಕೆ ಶಾಂತಪ್ಪ ಒತ್ತಾಯಿಸಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. “ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ಕೊಲೆ ಮಾಡುವ ಹಂತಕ್ಕೆ ಯುವಕರು ಮುಂದಾಗುತ್ತಿರುವುದು ಕಳವಳಕಾರಿ. ಕಠಿಣ ಶಿಕ್ಷೆ ಇಲ್ಲದೇ ಇರುವುದರಿಂದ ಭಯವೇ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ಯುವತಿಯರ ಕೊಲೆ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿರುವುದು ಅಂತಕಕಾರಿಯಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ಇಂತಹ ಘಟನೆಗಳನ್ನು ನಿಯಂತ್ರಿಸಲು ಸಾಧ್ಯ” ಎಂದರು.
“ಬಡ ಕುಟುಂಬದಲ್ಲಿ ಜನಿಸಿದ್ದ ಅಂಜಲಿ ಅಂಬಿಗೇರ ಅವರನ್ನು ಗಿರೀಶ್ ಸಾವಂತ್ ಎಂಬ ಯುವಕ ಕೊಲೆ ಮಾಡಿದ್ದಾನೆ. ಮೃತಳ ಕುಟುಂಬಕ್ಕೆ ಸರ್ಕಾರ ಸರ್ಕಾರಿ ಉದ್ಯೋಗ ನೀಡಬೇಕು. ಜೊತೆಗೆ, ಆರ್ಥಿಕ ನೆರವು ನೀಡಬೇಕು. ತೆಲಂಗಾಣ ಮಾದರಿಯಲ್ಲಿ ಆರೋಪಿಗಳನ್ನು ಗುಂಡಿಕ್ಕುವ ಕಾನೂನು ರೂಪಿಸಬೇಕು” ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಡಗೋಳ ಆಂಜಿನೇಯ್ಯ, ತಿಮ್ಮಪ್ಪ, ಪ್ರಕಾಶ ವಕೀಲ, ಕುರ್ಡಿ ನರಸಪ್ಪ, ರಾಮಚಂದ್ರ ಕಡಗೋಳ ಇನ್ನಿತರರಿದ್ದರು.
ವರದಿ : ಹಫೀಜುಲ್ಲ




