ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣವು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ನಾಳೆ ಮುದಗಲ್ ಬಂದ್ ಗೆ ಕರೆ ನೀಡಲಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಪದಾಧಿಕಾರಿ ಶರಣಪ್ಪ ಕಟ್ಟಿಮನಿ ಹೇಳಿದರು.
ಮುದಗಲ್ ನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ 2023 ರ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ರಾಜ್ಯ ಮಟ್ಟದ ನಾಯಕರುಗಳು ಅಧಿಕಾರಕ್ಕಾಗಿ ಮುದಗಲ್ ತಾಲೂಕು ಕೇಂದ್ರದ ಘೋಷಣೆ, ಕೋಟೆ ಉತ್ಸವ, ಸಮರ್ಪಕ ಕುಡಿಯುವ ನೀರಿನ ಯೋಜನೆ ಅನುಷ್ಠಾನಗಳ ಬಗ್ಗೆ ಸುಳ್ಳು ಭರವಸೆಗಳ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದರೂ ಕೂಡ ಪಟ್ಟಣದ ಜನತೆಯ ಕನಸಿನ ಕೂಸಿನ ಯೋಜನೆಗಳ ಜೊತೆ ಚೆಲ್ಲಾಟ ವಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮುದಗಲ್ ಬಂದ್ ಗೆ ಪ್ರಗತಿಪರ, ಕನ್ನಡಪರ, ರೈತಪರ, ದಲಿತಪರ ಸೇರಿದಂತೆ 19 ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಲಿದ್ದು ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲಿಸಿದ್ದು ಶಾಂತಿಯುತವಾಗಿ ಬಂದ್ ಗೆ ನಡೆಸಲಾಗುವುದು ಎಂದರು.
ಪಕ್ಷಾತೀತವಾಗಿ 18 ರಂಧು ನಡೆಯುವ ಈ ಹೋರಾಟಕ್ಕೆ ಹಾಲಿ ಶಾಸಕ ಮಾನಪ್ಪ ವಜ್ಜಲ್, ಮಾಜಿ ಶಾಸಕ ಡಿ.ಎಸ್. ಹುಲಗೇರಿ ಸೇರಿದಂತೆ ಪಟ್ಟಣದ ಹಿರಿಯರನ್ನು ಕೂಡ ಬೆಂಬಲಿಸುವಂತೆ ಅಹ್ವಾನಿಸಲಾಗಿದ್ದು ಕೆಲ ಮಠಾಧೀಶರು ಆಗಮಿಸಿಲಿದ್ದಾರೆ. ಕರವೇ ಘಟಕಾಧ್ಯಕ್ಷ ಎಸ್.ಎ.ನಯೀಮ್ ಮಾತನಾಡಿ, ನಮ್ಮ ಹಕ್ಕು ಪಡೆಯಲು ಪಟ್ಟಣದ ಜನತೆಯ ಹಾಗೂ ಸಂಘಟನೆಗಳ ಒಡಗೂಡಿ ಸತತವಾಗಿ ಶಾಂತಿಯುತವಾಗಿ ಪ್ರತಿಭಟಿಸಲಾಗಿದ್ದು ನಮ್ಮ ಬೇಡಿಕೆಗಳು ಸಕಾರಾತ್ಮಕವಾಗಿ ಈಡೇರದೇ ಹೋದಲ್ಲಿ ಮುಂದೆ ಕಾಂತ್ರಿಕಾರಿ ಹೋರಾಟಕ್ಕೆ ಅಣಿಯಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಕಳ್ಳತನ ಪ್ರಕರಣ; ಇಬ್ಬರ ಬಂಧನ, 3 ತೊಲೆ ಚಿನ್ನ, 15 ತೊಲೆ ಬೆಳ್ಳಿ ಜಪ್ತಿ
ಮುಖಂಡರಾದ ಮಂಜೂರ್ ಮಿಯಾ ಮುಜಾವರ್, ರಘುವೀರ ಮೇಗಳಮನಿ, ರಹೀಂ ಶಾ ಮಕಾಂದಾರ, ಮಂಜುನಾಥ ಬನ್ನಿಗೋಳಕರ, ಬಸವರಾಜ ಬಂಕದಮನಿ, ಸಂಜಯ್ ಚೆಲುವಾದಿ, ಹನುಮಂತ ಬಡಿಗೇರ್, ರಮೇಶ ಕಂದಗಲ್, ಸಾಬು ಹುಸೇನ್, ಮಹಾಂತೇಶ ಚಟ್ಟೇರ್, ಹಾಗೂ ಇತರರಿದ್ದರು.




