ಜಿಲ್ಲಾ ಉತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಲಾತಂಡಗಳ ಪ್ರದರ್ಶನ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಚಾಲನೆ ನೀಡಿದರು.
ಕರ್ನಾಟಕ ಸಂಘದಿಂದ ಬಂಗಾರ ಬಜಾರ್, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿನ ಉತ್ದವದ ಮುಖ್ಯ ವೇದಿಕೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ದೇವದುರ್ಗ ತಾಲೂಕಿನ ಬಂಡೆಗುಡ್ಡ ತಮ್ಮಣ್ಣ ರಾಥೋಡ್, ಅರಕೇರಾ ತಾಲೂಕು ಬಂಡೆಗುಡ್ಡ, ಲಮಾಣಿ ನೃತ್ಯ, ಸಿಂಧನೂರು ತಾಲೂಕು ಯಾಪಲಪರ್ವಿ, ಹಗಲು ವೇಷ, ದೊಡ್ಡ ಹಲಗಿ ಹುಬ್ಬಳ್ಳಿ, ರಾಮನಗರ ಯಕ್ಷಗಾನ, ಗೊಂಬೆ ಕುಣಿತ ಮಸ್ಕಿ, ಬಳ್ಳಾರಿ ಕಂಪ್ಲಿಯ ಕಹಳೆ ವಾದ್ಯ, ಚಿತ್ರದುರ್ಗದ ಕೋಳಿ ಕುಣಿತ, ವೀರಗಾಸೆ ಸಿಂಧನೂರು, ಸಿರವಾರ ಹಗಲು ವೇಷ ಕಲಾತಂಡ, ಮಹಾರಾಷ್ಟ್ರದ ಸೋಲಾಪುರದ ನಾಸಿಕ್ ಡೋಳ್ ಡ್ಯಾನ್ಸ್, ವಿಜಯನಗರ ಹಂಪಿ ನಂದಿಬೇವೂರು ಜಾನಪದ ಕಲಾತಂಡ ಸಿ.ವೀರೇಶ ಕಲಾತಂಡ, ಸಿಂಧನೂರು ವೀರಗಾಸೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಶ ರಾಮ ಡೋಳ, ಹನುಮಂತರಾಯ ಚಿತ್ರದುರ್ಗದ ಚಳ್ಳಕೆರೆ ಗೊರವರ ಕುಣಿತ, ನಂದಿಕೋಲು ಕುಣಿತ, ಚಾಂಜ್ ಮೇಳ, ಹಗಲು ವೇಷ, ಗೊರವ ಕುಣಿತ, ತಮಟೆ ವಾದನ, ಲಂಬಾಣಿ ನೃತ್ಯ, ಭದ್ರಕಾಳಿ ಕುಣಿತ, ಕರಡಿ ಮಜಲು ಸೇರಿದಂತೆ ಜಿಲ್ಲೆಯ ಹಾಗೂ ರಾಜ್ಯ ಹಾಗೂ ರಾಜ್ಯದ ವಿವಿಧೆಡೆಯ 20ಕ್ಕೂ ಅಧಿಕ ತಂಡಗಳ ಪ್ರದರ್ಶನ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೆ ಸಚಿವರಿಗೆ ಘೇರಾವ್, ಕಪ್ಪುಬಾವುಟ ಪ್ರದರ್ಶನ; ಮಾದಿಗ ಮೀಸಲಾತಿ ಎಚ್ಚರಿಕೆ
ಮೆರವಣಿಗೆಯುದ್ದಕ್ಕೂ ಪೊಲೀಸ್ ಇಲಾಖೆಯ ವತಿಯಿಂದ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿತ್ತು





