ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಪಡಿತರ ಧಾನ್ಯ ವಿತರಣೆ ಮಾಡದೆ ವಂಚನೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿ ಮಾಲೀಕನ ವಜಾಕ್ಕೆ ಆಗ್ರಹಿಸಿ ಜಾಗೃತ ಮಹಿಳಾ ಸಂಘಟನೆಯಿಂದ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
“ಕಳೆದ ಮೂರು ತಿಂಗಳಿನಿಂದ ಸಮರ್ಪಕವಾಗಿ ಪಡಿತರ ಧಾನ್ಯಗಳನ್ನು ವಿತರಣೆ ಮಾಡುತ್ತಿಲ್ಲ. ಕೆಲವರದ್ದು ಹೆಬ್ಬೆಟ್ಟು ಪಡೆದುಕೊಂಡರೂ ಕೂಡಾ ಪಡಿತರ ಧಾನ್ಯ ವಿತರಣೆ ಮಾಡದೆ ವಂಚಿಸಿದ ನ್ಯಾಯಬೆಲೆ ಅಂಗಡಿ ಮಾಲೀಕ ಹುಲುಗಪ್ಪ ಹಿರೇಕಡುಬೂರು ಅವರನ್ನು ವಜಾಗೊಳಿಸಬೇಕು” ಎಂದು ಒತ್ತಾಯಿಸಿದರು.
“ಗೋರೆಬಾಳ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಸಮರ್ಪಕವಾಗಿ ಪಡಿತರ ಧಾನ್ಯಗಳನ್ನು ವಿತರಣೆ ಮಾಡುತ್ತಿಲ್ಲ. ಗ್ರಾಮದ 56 ಪಡಿತರ ಚೀಟಿಗಳನ್ನು ಪಡೆಕೊಂಡಿದ್ದರೂ ಕೂಡಾ ಪಡಿತರ ಧಾನ್ಯ ವಿತರಣೆ ಮಾಡದೆ ಜನರಿಗೆ ಮೋಸ ಮಾಡಿದ್ದಾರೆ. ಹಾಗಾಗಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಸಮರ್ಪಕ ಪಡಿತರ ಧಾನ್ಯ ವಿತರಣೆಗೆ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಾಲಾ, ಬ್ಯಾಗಾರ ಉಪ ಜಾತಿಗಳನ್ನು ನಾಲ್ಕನೇ ಗುಂಪಿಗೆ ಸೇರಿಸುವಂತೆ ಒತ್ತಾಯ
ಈ ಸಂದರ್ಭದಲ್ಲಿ ಅಧ್ಯಕ್ಷೆ ಚಿನ್ನಮ್ಮ, ಹನುಮಂತಿ, ಕರೆಪ್ಪ, ಮೌನೇಶ, ದೇವಮ್ಮ, ಲಚಮಮ್ಮ, ದೇವಪುತ್ರ ಸೇರಿದಂತೆ ಅನೇಕರು ಇದ್ದರು.





