ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಹಾಡಿಗೆ ಕುಣಿಯುತ್ತಾ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಘಟನೆ ನಗರದ ತೀನ್ ಖಂದಿಲ್ ವೃತ್ತದ ಬಳಿ ಇಂದು ಬೆಳಗಿನ ಜಾವ 5 ಗಂಟೆಗೆ ನಡೆದಿದೆ.
ಮೃತ ಯುವಕನನ್ನು ಮಂಗಳವಾರಪೇಟೆಯ ಬಡಾವಣೆಯ ಅಭಿಷೇಕ (24) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಗಣೇಶ ಮೂರ್ತಿಗಳ ಮೆರವಣಿಗೆ ನಡೆದಿದ್ದು ಡಿ.ಜೆ ಸಮೇತ ಮೆರವಣಿಗೆ ತೀನ್ ಖಂದಿಲ್ ವೃತ್ತದ ಮಾರ್ಗವಾಗಿ ಖಾಸ್ ಭಾವಿಗೆ ತೆರಳುವ ವೇಳೆ ಡಿ.ಜೆ ಹಾಡಿಗೆ ನೃತ್ಯ ಮಾಡುತ್ತಾ ಕುಸಿದು ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗಣೇಶ ವಿಸರ್ಜನೆ ವೇಳೆ ಗುಂಪುಗಳ ನಡುವೆ ಗಲಾಟೆ
ಅಭಿಷೇಕಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಸ್ಥಳೀಯ ಫಾರ್ಚುನ್ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿಂದ ಹೃದಯ ಸಂಬಂಧಿತ ವಿ.ಜಿ. ಕುಲಕರ್ಣಿ ಆಸ್ಪತ್ರೆ ಹಾಗೂ ನವೋದಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ವೈದ್ಯರು ಪರೀಕ್ಷಿಸಿದ ಬಳಿಕ ಹೃದಯಾಘಾತದಿಂದ ಅಭಿಷೇಕ್ ಮೃತಪಟ್ಟಿದ್ದಾನೆ ಎಂದು ಧೃಡಪಡಿಸಿದ್ದಾರೆ. ಯುವಕನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತು.





