ರಾಯಚೂರು ನಗರದ ಬಂದೆನವಾಜ ಕಾಲೋನಿ ಪ್ರದೇಶದ ನಿವಾಸಿಗಳಿಗೆ ಮೃತದೇಹವನ್ನು ಖಬರಸ್ಥಾನಕ್ಕೆ ಸಾಗಿಸಲು ಸುಗಮತೆ ಒದಗಿಸುವ ಸಲುವಾಗಿ ಜನಾಜಾ ವ್ಯಾನ್ ವಾಹನ ಹಾಗೂ ಎರಡು ರೆಫ್ರಿಜರೇಟರ್ಗಳನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ. ವಸಂತ ಕುಮಾರ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ 20 ಲಕ್ಷ ರೂ. ಮಂಜೂರಾತಿಯಲ್ಲಿ ಒದಗಿಸಿದ್ದಾರೆ.
ಬುಧವಾರ ಬಂದೇನವಾಜ ಕಾಲೋನಿ ಮಸ್ಜೀದ–ಎ–ಬಂದೇನವಾಜ ಹತ್ತಿರ ಸಮಾಜದ ಮುಖಂಡರ ಸಮ್ಮುಖದಲ್ಲಿ ಜನಾಜಾ ವಾಹನ ಮತ್ತು ರೆಫ್ರಿಜರೇಟರ್ಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ ವಸಂತ ಕುಮಾರ ಅವರು, ಈ ಪ್ರದೇಶದಿಂದ ಖಬರಸ್ಥಾನವು ಸುಮಾರು ಮೂರು ಕಿ.ಮೀ ದೂರವಿದ್ದು, ಶವ ಸಂಸ್ಕಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಸ್ಥಳೀಯ ಮುಖಂಡರು ಜನಾಜಾ ವಾಹನ ಮತ್ತು ರೆಫ್ರಿಜರೇಟರ್ಗಳ ಅಗತ್ಯವನ್ನು ಮನವಿ ಮಾಡಿದ ಹಿನ್ನೆಲೆಯಲ್ಲಿ, ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಈ ವಸ್ತುಗಳನ್ನು ಪ್ರದೇಶಾಭಿವೃದ್ಧಿ ಅನುದಾನದಿಂದ ಒದಗಿಸಲಾಗಿದೆ.
ನಗರದ ಎಲ್ಲಾ ವಾರ್ಡ್ಗಳಲ್ಲಿಯೂ ಇಂತಹ ವ್ಯವಸ್ಥೆಯನ್ನು ಹಂತ ಹಂತವಾಗಿ ಕಲ್ಪಿಸುವದಕ್ಕಾಗಿ ಕ್ರಮ ಕೈಗೊಳ್ಳಲಾಗುವುದೆಂದೂ ಅವರು ಹೇಳಿದರು. ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಬ್ರಿಡ್ಜ್ ಕಾಮಗಾರಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು
ಕಾರ್ಯಕ್ರಮದಲ್ಲಿ ಮುಖಂಡರಾದ ಎಂ. ಕೆ. ಬಾಬರ್, ಅಬ್ದುಲ್ ಕರೀಂ, ಡಾ. ರಝಾಕ್ ಉಸ್ತಾದ್, ಮೊಹಮ್ಮದ್ ಉಸ್ಮಾನ್, ಸಯ್ಯದ್ ಸುಲ್ತಾನ್, ಖಾಜಾ ಮೊಯಿನುದ್ದೀನ್ ಮೋದಿ, ಮಸ್ಜೀದ ಅಧ್ಯಕ್ಷ ಮೊಹಮ್ಮದ್ ಅಹ್ಮದ್ ಹುಸೇನ್, ರಹೀಮ್ ಖುರೇಶಿ, ಮೌಲಾನಾ ಅಹ್ಮದ್ ರಝಾ, ಮೌಲಾನಾ ಜಾಫರ್ ಖಾನ್, ಅಬ್ದುಲ್ ಹಮೀದ್, ಮೊಹಮ್ಮದ್ ಮೊಯೀನ್, ಮೊಹಮ್ಮದ್ ಅಸ್ಲಂ, ಕಾರ್ಯದರ್ಶಿ ಖಾಜಾ ಹುಸೇನ್, ಅಲ್ಲಾಬಕ್ಷ, ಅಸ್ಲಂ, ಮೊಹಮ್ಮದ್ ಕಲೀಂ, ಮೊಹಮ್ಮದ್ ಶಫೀ ಸೇರಿದಂತೆ ಅನೇಕರು ಹಾಜರಿದ್ದರು.





