ಅಕ್ರಮ ಸಂಬಂಧದ ಸಂಶಯದಿಂದ ಕೊಲೆ ಮಾಡಿರುವ ಘಟನೆ ಸಿಂಧನೂರು ತಾಲೂಕಿನ ಬಿ. ವೆಂಕಟೇಶ್ವರ ಕ್ಯಾಂಪ್ನಲ್ಲಿ ನಡೆದ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಟೇಕು ಸುರೇಶ (38) ಇವನು ಮೃತ ಅಮ್ಮಿರಾಜು (39) ಸಂಬಂಧಿಕನಾಗಿದ್ದ ಎನ್ನಲಾಗಿದೆ. ಕೆಲವು ದಿನಗಳಿಂದ ಮೃತ ಅಮ್ಮಿರಾಜು ಆರೋಪಿಯ ಮನೆಗೆ ಆಗಾಗ್ಗೆ ಭೇಟಿ ನೀಡಿ, ಆರೋಪಿಯ ಹೆಂಡತಿಯನ್ನು ಮಾತನಾಡಿಸುತ್ತಿದ್ದನೆಂಬ ವಿಷಯದಿಂದ ಆರೋಪಿಗೆ ಅಸಮಾಧಾನ ಉಂಟಾಗಿತ್ತು. ಈ ವಿಷಯವಾಗಿ ಇಬ್ಬರ ನಡುವೆ ಹಲವು ಬಾರಿ ವಾಗ್ವಾದವೂ ನಡೆದಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿತ ಸುರೇಶ ತನ್ನ ಹೆಂಡತಿಯೊಂದಿಗೆ ಅಮ್ಮಿರಾಜು ಅಕ್ರಮ ಸಂಬಂಧ ಹೊಂದಿದ್ದಾನೆಂಬ ಸಂಶಯ ಬಂದು, ಕೋಪಗೊಂಡ ಸುರೇಶನು ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಮಾರಾಕಾಸ್ತ್ರದಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದಾನೆ. ಗಾಯಗಳ ಪರಿಣಾಮವಾಗಿ ಅಮ್ಮಿರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ಪಿಎಸ್ಐ ಕಾರು ಅಪಘಾತ – ಐವರಿಗೆ ಗಾಯ
ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿ ಸುರೇಶನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.





