ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಅವರು ಹಟ್ಟಿ ಪಟ್ಟಣಕ್ಕೆ ಭೇಟಿ ನೀಡದೆ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅಂಟಿಸಿರುವ ಬ್ಯಾನರ್ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಟ್ಟಿ ಪಟ್ಟಣದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿರುವ ಬ್ಯಾನರ್ಗಳಲ್ಲಿ ‘ಶಾಸಕರು ಕಾಣೆಯಾಗಿದ್ದಾರೆ, ಹುಡುಕಿ ಕೊಡಿ’, ‘ಹಟ್ಟಿ ಪಟ್ಟಣಕ್ಕೆ ಶಾಸಕರ ಕೊಡುಗೆ ಶೂನ್ಯ’ ಎಂಬ ಬರಹಗಳು ಕಾಣಿಸುತ್ತಿವೆ. ಇದರಿಂದ ಸ್ಥಳೀಯ ನಾಗರಿಕರ ಅಸಮಾಧಾನ ಹಾಗೂ ಆಕ್ರೋಶ ಬಹಿರಂಗವಾಗಿದೆ.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ಸಾರಿಗೆ ಬಸ್ ಒಳಗೆ ಸಿಲುಕಿ ಬಾಲಕಿ ಸಾವು
ಪಟ್ಟಣದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ, ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಹೆಚ್ಚಾಗಿವೆ, ಆದರೆ ಶಾಸಕರು ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ ಪ್ರತಿಭಟನಾಕಾರರು ದೂರಿದರು.





