ಸಮಾಜದ ನೆರೆಹೊರೆಯವರ ಸಂಬಂಧ ಗಟ್ಟಿಗೊಳಿಸಿ ಮಾದರಿ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನ.21 ರಿಂದ 30ವರೆಗೆ ರಾಷ್ಟ್ರ ಮಟ್ಟದ ಅಭಿಯಾನ ಆಯೋಜಿಸಿದೆ ಎಂದು ಸಂಘಟನೆ ಮುಖಂಡ ಸಲೀಂ ಪಾಷಾ ಹೇಳಿದರು.
ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ʼಸಮಾಜದಲ್ಲಿ ಕಂದಕ ನಿರ್ಮಾಣವಾಗಿ ಸೌಹಾರ್ದತೆ, ಭಾತೃತ್ವ ಮೆರೆಯಾಗುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆದು ಹೋಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ನೆರೆಹೊರೆಯ ಸಂಬಂಧ ಗಟ್ಟಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಜಮಾಅತೆ ಇಸ್ಮಾಮಿ ಹಿಂದ್ ಸಂಘಟನೆಯಿಂದ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ನೆರೆಹೊರೆಯವರ ಸಭೆ, ಪೋಸ್ಟರ್ ಬಿಡುಗಡೆ, ಕರಪತ್ರ ವಿತರಣೆ ಅಭಿಯಾನ ನಡೆಸಲಾಗುತ್ತಿದೆʼ ಎಂದರು.
ನಗರದಲ್ಲಿ ಮನೆ-ಮನೆಗೆ ತೆರಳಿ ತಿಳುವಳಿಕೆ, ಸಭೆಗಳನ್ನು ನಡೆಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ತಿಳುವಳಿಕೆ ನೀಡುವುದು, ಸಂಚಾರಿ ನಿಯಮಗಳನ್ನು ಪರಿಪಾಲಿಸಲು ಮಾಹಿತಿ ಒದಗಿಸಲಾಗುತ್ತಿದೆ. ಎಲ್ಲಾ ಸಮಾಜದ ಜನರು, ಸಂಘಟನೆಗಳು ಬೆಂಬಲಿಸಿ ಭಾಗವಹಿಸುವಂತೆ ಮನವಿ ಅವರು ಮಾಡಿದರು.
ಇದನ್ನೂ ಓದಿ : ರಾಯಚೂರು | ನ.25ರಿಂದ ಬೆಂಗಳೂರಿನಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಧರಣಿ
ಈ ಸಂದರ್ಭದಲ್ಲಿ ಜಮಾಅತೆ ಇಸ್ಮಾಮಿ ಹಿಂದ್ ಅಧ್ಯಕ್ಷ ಅಸಿಮುದ್ದೀನ್ ಅಖ್ತರ್, ಅಬ್ದುಲ್ ಸಮದ್, ಶಹನಾಜ್ ಬೇಗಂ, ರಶೀದ ಖಾನ್ಇದ್ದರು.





