ಗ್ಯಾರಂಟಿ ಯೋಜನೆಗಳ ಕುರಿತು ಕೆಲವರು ಕೀಳಾಗಿ ಮಾತನಾಡುತ್ತಿರುವುದು, ಅವರಿಗೆ ಈ ಯೋಜನೆಗಳ ನಿಜವಾದ ಉದ್ದೇಶ ಮತ್ತು ಪ್ರಯೋಜನಗಳ ಬಗ್ಗೆ ಅರಿವಿಲ್ಲದ ಕಾರಣ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.
ಮಸ್ಕಿ ತಾಲ್ಲೂಕಿನ ಮುಟ್ಟೂರು ಗ್ರಾಮದಲ್ಲಿ ನಡೆದ “ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯಿತಿಗಳ ಕಡೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಬಡವರ ಬದುಕು, ಹಸಿವಿನ ತೀವ್ರತೆ ಏನು ಎನ್ನುವುದೇ ಗೊತ್ತಿಲ್ಲದವರಿಗೆ ಗ್ಯಾರಂಟಿ ಯೋಜನೆಗಳ ಅಗತ್ಯತೆ ಅರ್ಥವಾಗುವುದಿಲ್ಲ. ನಮ್ಮ ಪಕ್ಷ ಸದಾ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಬಡವರು ಆರ್ಥಿಕವಾಗಿ ಸದೃಢರಾಗಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದೆ,” ಎಂದು ಅವರು ಹೇಳಿದರು.
“ಗ್ಯಾರಂಟಿ ಯೋಜನೆಗಳ ಜೊತೆಗೆ ಇಂದಿರಾ ಕಿಟ್ ಯೋಜನೆಯನ್ನೂ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಇದು ಬಡ ಕುಟುಂಬಗಳಿಗೆ ನೇರ ಸಹಾಯವನ್ನು ನೀಡುವ ಯೋಜನೆಯಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಂದೇ ದಿನ 25 ಜನರ ಮೇಲೆ ಬೀದಿ ನಾಯಿಗಳ ದಾಳಿ — ಆಸ್ಪತ್ರೆಗೆ ದಾಖಲು
ಈ ವೇಳೆ ಶಾಸಕ ಬಸನಗೌಡ ತುರುವಿಹಾಳ, ಮೆಹಬೂಬ್ ಮುದ್ದಾಪುರ, ನಾಗರತ್ನ, ತಹಶೀಲ್ದಾರ್ ಮಂಜುನಾಥ ಭೋಗಾವತಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಇನ್ನಿತರರು ಹಾಜರಿದ್ದರು.





