ರಾಯಚೂರು | ರಾತ್ರಿಯಿಡೀ ಸುರಿದ ಮಳೆಯಿಂದ ತೋಯ್ದ ಭತ್ತ; ಜನಜೀವನ ಅಸ್ತವ್ಯಸ್ತ

Date:

ರಾಯಚೂರು ನಗರದ ಎಪಿಎಂಸಿಯಲ್ಲಿ ಮಾರಾಟಕ್ಕೆ ತಂದ ಭತ್ತ ಮಳೆಯ ನೀರಿನಿಂದ ತೋಯ್ದು ಲಕ್ಷಾಂತರ ಮೌಲ್ಯದ ಮಾಲು ಹಾನಿಯಾಗಿದೆ.

ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ರಾತ್ರಿಯಿಡೀ ಸುರಿದ ಮಳೆಯಿಂದ ತಂಪು ವಾತಾವರಣ ಆಹ್ಲಾದ ತಂದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿರುವ ಘಟನೆ ನಡೆದಿದೆ.

“ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ರೈತರ ಭತ್ತ ನೀರುಪಾಲಾಗಿದೆ. ಕೆಲ ವರ್ತಕರು ಖರೀದಿಸಿದ್ದ ಭತ್ತವೂ ನೀರನಲ್ಲಿ ತೆಲುವಂತಾಗಿದೆ. ಸಾಯಿ ಕೃಪಾ ಟ್ರೇಡರ್ಸ್‌ಗೆ ಸೇರಿದ ನಾಲ್ಕು ನೂರು ಚೀಲ ನೀರಿನಲ್ಲಿ ಆವೃತ್ತವಾಗಿದೆ. ಎಪಿಎಂಸಿಯಲ್ಲಿ ರೈತರ ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿ ಪ್ರತಿಬಾರಿಯೂ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ. ರೈತರಿಂದ ಕರ ಸಂಗ್ರಹಿಸುವ ಎಪಿಎಂಸಿ ರೈತರ ಮಾಲಿಗೆ ರಕ್ಷಣೆ ನೀಡುತ್ತಿಲ್ಲ. ಮಳೆಯಿಂದ ಉಂಟಾಗಿರುವ ಹಾನಿಗೆ ಒಳಗಾಗಿರುವ ಸಂತ್ರಸ್ಥ ರೈತರಿಗೆ ಪರಿಹಾರ ಒದಗಿಸಬೇಕು” ಎಂದು ರೈತರು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಾಲೂಕಿನ ಅನೇಕ ಗ್ರಾಮಗಳಲ್ಲಿಯೂ ರೈತರ ಜಮೀನಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ಚಂದ್ರಬಂಡಾ, ಕಡಗಂದೊಡ್ಡಿ, ಸಿಂಗನೋಡಿ, ಸಗಮಕುಂಟಾ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬೆಳೆ ನಷ್ಟವಾಗಿದೆ. ಮಾವು, ಮೋಸಂಬಿ, ಪಪ್ಪಾಯಿ, ದಾಳಿಂಬೆ ಫಸಲು ಗಾಳಿಗೆ ನೆಲಕ್ಕುರುಳಿವೆ.
ರಾತ್ರಿ ನಿದ್ದೆಯಲ್ಲಿದ್ದ ಜನರಿಗೆ ಏಕಾಏಕಿ ಜೋರಾದ ಮಳೆಯಿಂದಾಗಿ ಜಾಗರಣೆ ಮಾಡುವಂತಾಗಿದೆ. ಮಳೆಯಿಂದ ಆಶ್ರಯ ಪಡೆಯಲು ಜನರು ಬೇರೆ ಸ್ಥಳಕ್ಕೆ ತೆರಳುವಂತಾಗಿದೆ.

ಮಳೆಯಿಂದ ಅವಾಂತರ

ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನರು ಪರತಪಿಸುವಂತಾಯಿತು. ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಜನರಿಗೆ ಮೊದಲ ಮಳೆಯೇ ಸಮಸ್ಯೆಯನ್ನು ಸೃಷ್ಟಿಸಲು ಕಾರಣವಾಯಿತು.
ರಾಯಚೂರು ತಾಲೂಕಾದ್ಯಂತ ರಾತ್ರಿಯಿಡೀ ಬಾರಿ ಮಳೆಯಾಗಿದ್ದು, ಯರಗೇರಾ ಹೋಬಳಿಯಲ್ಲಿ 136 ಮಿಲಿ ಮೀಟರ್ ದಾಖಲೆ ಮಳೆಯಾಗಿದೆ ಎಂದು ತಿಳಿದುಬಂದಿದೆ.

ಯರಗೇರಾ ಹೋಬಳಿ ವ್ಯಾಪ್ತಿಯಲ್ಲಿ 136 ಮಿಮೀ ಮಳೆಯಾಗಿ ಮೊದಲ ಮಳೆ ದಾಖಲೆ ನಿರ್ಮಿಸಿದೆ. ಇನ್ನು ಸಿಂಗನೋಡಿ ವ್ಯಾಪ್ತಿಯಲ್ಲಿ 52.5 ಮಿಮೀ ಅತಿ ಕಡಿಮೆ ಮಳೆಯಾಗಿದೆ. ಮಿಟ್ಟಿ ಮಲ್ಕಾಪೂರದಲ್ಲಿ 132 ಮಿಮೀ ಮಳೆಯಾಗಿದೆ. ಕಲಮಲ ಹೋಬಳಿಯಲ್ಲಿ, 115 ಮಿಮೀ ಮಳೆಯಾಗಿದೆ. ಬೀಜನಗೇರಾದಲ್ಲಿ 111ಮೀಮೀ ಮಳೆಯಾಗಿದೆ. ಶಾಖವಾದಿಯಲ್ಲಿ 105.5 ಮಿಮೀ ಮಳೆಯಾಗಿದೆ. ಮರ್ಚೆಟಾಳ ವ್ಯಾಪ್ತಿಯಲ್ಲಿ 102.5 ಮಿಮೀ ಮಳೆಯಾಗಿದೆ. ಪೂರ್ತಿಪ್ಲಿಯಲ್ಲಿ 89ಮಿಮೀ ಮಳೆಯಾಗಿದೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯಗತ್ಯ: ನ್ಯಾ ಎ ಅರುಣ ಕುಮಾರಿ

ಕಾಡ್ಲೂರು ವ್ಯಾಪ್ತಿಯಲ್ಲಿ 87ಮಿಮೀ ಮಳೆಯಾಗಿದೆ. ಯಾಪಲದಿನ್ನಿ ವ್ಯಾಪ್ತಿಯಲ್ಲಿ 87
ಮಿಮೀ ಮಳೆಯಾಗಿದೆ. ಲಿಂಗನಖಾನದೊಡ್ಡಿಯಲ್ಲಿ 84ಮಿಮೀನಷ್ಟು ಮಳೆಯಾಗಿದೆ. ಚಂದ್ರಬಂಡಾ ವ್ಯಾಪ್ತಿಯಲ್ಲಿ 64 ಮಿಮೀ ಮಳೆಯಾಗಿದೆ. ಚಿಕ್ಕಸೂಗುರು ವ್ಯಾಪ್ತಿಯಲ್ಲಿ 63.5 ಮಿಮೀ ಮಳೆಯಾಗಿದೆ.
ಗಾಣದಾಳ ವ್ಯಾಪ್ತಿಯಲ್ಲಿ 63.5 ಮಿಮೀ ಮಳೆಯಾಗಿದೆ. ಇಡಪನೂರಿನಲ್ಲಿ 59 ಮಿಮೀ ಮಳೆಯಾಗಿದೆ. ಸಿಂಗನೋಡಿ ವ್ಯಾಪ್ತಿಯಲ್ಲಿ 52.5 ಮಿಮೀ ಮಳೆ ದಾಖಲಾಗಿದೆ.

ವರದಿ : ಹಫೀಜುಲ್ಲ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...