ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವ ರಾಕೇಶ ಕಿಶೋರ್ ಎಂಬ ವಕೀಲನನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ದೇವದುರ್ಗ ಘಟಕ ವತಿಯಿಂದ ತಹಶೀಲ್ದಾರ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
ನ್ಯಾಯಮೂರ್ತಿ ಗವಾಯಿ ದಲಿತ ಸಮುದಾಯದವರು ಎಂಬ ಕಾರಣಕ್ಕೆ ಮನುವಾದಿಗಳಿಗೆ ಅದು ನುಂಗಲಾರದ ಸಂಗತಿಯಾಗಿದೆ. ಸಾಮಾನ್ಯವಾಗಿ ಎಲ್ಲರೂ ನ್ಯಾಯಾಲಯದ ಒಳಗೆ ಹೋಗುವಾಗ ಗೌರವ ಸೂಚಕವಾಗಿ ಕೈಮುಗಿದು ಹೋಗುತ್ತಾರೆ. ಆದರೆ ಅಂತಹ ಪವಿತ್ರ ಸ್ಥಳಕ್ಕೆ ಅವಮಾನ ಮಾಡಿದ ಕಿಶೋರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದೆ ಇರುವುದು ಅನುಮಾನಾಸ್ಪದವಾಗಿದೆ ಎಂದು ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಿಜೆಐ ಗವಾಯಿ ಅವರ ಮೇಲೆ ರಾಕೇಶ ಕಿಶೋರ್ ಎಂಬ ನಾಲಾಯಕ ವಕೀಲ್ ಶೂ ಎಸೆಯುವುದು ಅತ್ಯಂತ ಹೇಯ ಮತ್ತು ರಾಷ್ಟ್ರವಿರೋಧಿ ಕೃತ್ಯವಾಗಿದೆ. ಇದರಿಂದ ಸಿಜೆಐ ಅವರಿಗೆ ಅಷ್ಟೇ ಅಲ್ಲದೆ ಇಡೀ ದೇಶದ ನಾಗರಿಕರಿಗೆ ಆಗಿರುವ ಅಪಮಾನ. ಕೃತ್ಯ ಎಸಗಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ರಾಷ್ಟ್ರವಿರೋಧ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕುʼ ಎಂದು ಆಗ್ರಹಿಸಿದರು.
ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಅಂಬೇಡ್ಕರ ರವರು ಬರೆದ ಸಂವಿಧಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದು ಮರೆತಿದ್ದಾರೆನೋ ಅಂತಹ ಆನಿಸುತ್ತಿದೆ. ಯಾಕೆಂದರೆ ಇಂತಹ ಘಟನೆ ನಡೆದಾಗ ಸಂಬಂಧಪಟ್ಟಂತಹ ಮೋದಿಜಿಯವರು ಕೇಂದ್ರದ ಗೃಹ ಮಂತ್ರಿಯಾದ ಅಮಿತ್ ಶಾ ಅವರು ನಿರ್ಧಾಕ್ಷಿಣ್ಯ ಆತನ ಮೇಲೆ ಕ್ರಮ ವಹಿಸಿ ದೇಶದಿಂದ ಗಡಿ ಪಾರು ಮಾಡಬೇಕಾಗಿತ್ತು. ಆದರೆ ಶೂ ಎಸೆದಿರುವ ವಕೀಲ ಆರ್ ಎಸ್ ಎಸ್ ಸನಾತವಾಗಿರುವುದರಿಂದ ಯಾವುದೇ ಕ್ರಮ ಜರುಗಿಸದೇ ಬೇಜವಬ್ದಾರಿತನ ಸಹಿಸುವುದಿಲ್ಲ. ಕೂಡಲೇ ದೇಶದಿಂದ ಗಡಿಪಾರು ಮಾಡಬೇಕು ಇಲ್ಲದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | RSS ಪಥಸಂಚಲನದಲ್ಲಿ ಪಿಡಿಒ ಭಾಗಿ; ಕ್ರಮಕ್ಕೆ ಒತ್ತಾಯ
ಈ ವೇಳೆ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರಿ, ನಿಂಗಪ್ಪ ಗೌಡುರು, ಭೀಮರಾಯ ಭಂಡಾರಿ,ಮೌನೇಶ ಜಾಲಹಳ್ಳಿ, ಅಬ್ರಾಹಂ ಕಮಲದಿನ್ನಿ, ಬಸವರಾಜ ಜಯಂ ಇನ್ನಿತರರು ಹಾಜರಿದ್ದರು.





