ರಾಯಚೂರು | ಅರಕೇರಾ ತಾಲ್ಲೂಕಿಗೆ ಎನ್ ಗಣೇಕಲ್ ಗ್ರಾಮ ಸೇರ್ಪಡೆ ಹಿಂಪಡೆಯಬೇಕು; ಗ್ರಾಮಸ್ಥರ ಒತ್ತಾಯ

Date:

ದೇವದುರ್ಗ ತಾಲ್ಲೂಕು ಗಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಎನ್. ಗಣೇಕಲ್ ಗ್ರಾಮವನ್ನು ಅರಕೇರಾ ತಾಲೂಕಿಗೆ ಸೇರ್ಪಡೆ ಮಾಡಿರುವುದು ನಿಯಮಬಾಹಿರ ಕ್ರಮವಾಗಿದೆ ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಎನ್.ಗಣೇಕಲ್ ಗ್ರಾಮಸ್ಥರು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ದೇವದುರ್ಗ ತಾಲ್ಲೂಕಿನಿಂದ ನೂತನವಾಗಿ ಆಗಿರುವ ಅರಕೇರಾ ತಾಲ್ಲೂಕಿಗೆ ಎನ್ ಗಣೇಕಲ್ ಸೇರ್ಪಡೆ ಮಾಡಿರುವುದರಿಂದ ಸುಮಾರು 60 ಕಿಲೋ ಮೀಟರ್ ಹೋಗುವ ಪರಿಸ್ಥಿತಿ ನಿರ್ಮಾಣ ಉಂಟಾಗಿದೆ ಇದರಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ನೂತನ ತಾಲೂಕ ಕೇಂದ್ರಕ್ಕೆ ಹೋಗಬೇಕಾದರೆ ಎನ್ ಗಣೇಕಲ್ ಗ್ರಾಮದಿಂದ ಗಬ್ಬೂರಿಗೆ 9 ಕಿ.ಮೀ ಅಲ್ಲಿಂದ ದೇವದುರ್ಗಕ್ಕೆ 30 ಕಿಮೀ ಮತ್ತು ದೇವದುರ್ಗದಿಂದ ಅರಕೇರಾ ತಾಲ್ಲೂಕಿಗೆ 28 ಕಿಮೀ ಒಟ್ಟು 60 ರಿಂದ 70 ಕಿಮೀ ಸುತ್ತುವರೆದು ಪ್ರಯಾಣ ಮಾಡಬೇಕಾಗಿದೆ. ಕೊಂಕಣ ಸುತ್ತಿ ಮೈಲಾರಕ್ಕೆ ಎಂಬಂತಾಗಿದೆ ಜನ ನಿತ್ಯ ಅಲೆದಾಡಲು ರೋಷಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವದುರ್ಗ ತಾಲ್ಲೂಕಿಗೆ ಎನ್ ಗಣೇಕಲ್ ಗ್ರಾಮವು 40 ಕಿಮೀದಲ್ಲಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ನೂತನ ತಾಲೂಕು ರಚನೆ ಇದು ಅವೈಜ್ಞಾನಿಕವಾಗಿದ್ದು ಜನ ವಿರೋಧಿ ನೀತಿಯಾಗಿದ್ದು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಒತ್ತಾಯಿಸಿದರು.

ಎನ್.ಗಣೇಕಲ್ ಗ್ರಾಮವನ್ನು ಅರಕೇರ ತಾಲ್ಲೂಕಿನಿಂದ ಕೈ ಬಿಡದಿದ್ದರೆ ಮುಂಬರುವ ಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ತಿಳಿಸಿದರು. ದೇವದುರ್ಗ ತಾಲೂಕು ಕೇಂದ್ರದಲ್ಲಿ ಎನ್.ಗಣೇಕಲ್ ಗ್ರಾಮವನ್ನು ಉಳಿಸಿ ಮುಂದುವರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಂದ ಉಗ್ರವಾದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ವಿಷಪೂರಿತ ನೀರು ಸೇವನೆ; 50ಕ್ಕೂ ಹೆಚ್ಚು ಕುರಿಗಳು ಸಾವು

ಈ ವೇಳೆ ತಿರುಮಲ ಆಚಾರಿ ಜೋಶಿ ಗಣೇಕಲ್, ಗಂಗಪ್ಪ ಬೋವಿ, ಅಂಬರೀಶ ತೆಗ್ಯಾಳ್, ತಿಮ್ಮಣ್ಣ ನಾಯಕ, ಅಂಬರೀಶಗೌಡ ಗಣೇಕಲ್, ಶರಣಪ್ಪ ಬೋವಿ, ತಿಮ್ಮಣ್ಣ ಬೋವಿ, ವಿರುಪಾಕ್ಷಿ ಗಣೇಕಲ್, ಹನುಮಂತ ಗುಡೆಕಾಯಿ, ಶರಣಪ್ಪ ವೆಂಕಟಾಪುರ, ರವಿ ಬಡಿಗೇರ್, ವೆಂಕಟೇಶ್ ಅವಳಿ, ನರಸಪ್ಪ ಗಣೇಕಲ್, ತುಕಾರಾಂ ಗಣೇಕಲ್, ಬಸಲಿಂಗ ಗಣೇಕಲ್, ಅಂಬರೀಶ್ ಗಣೇಕಲ್ ಸೇರಿದಂತೆ ಅನೇಕರು ಇದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...