ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಯರಗೇರಾ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲದೇ ಗ್ರಾಮಸ್ಥರು ತೀವ್ರ ಪರದಾಡುತ್ತಿದ್ದಾರೆ. 20ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕಿಸುವ ಯರಗೇರಾ ಗ್ರಾಮಕ್ಕೆ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಯರಗೇರಾ ಹೋಬಳಿ ಸಮಿತಿ ಒತ್ತಾಯಿಸಿದರು.
ಹೋಬಳಿ ಕೇಂದ್ರವಾದ ಯರಗೇರಾ ಗ್ರಾಮದಲ್ಲಿ ಸುಮಾರು ಎರಡು ಮೂರು ದಶಕದಿಂದ ಬಸ್ ನಿಲ್ದಾಣ ಇಲ್ಲದಿರುವುದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಗ್ರಾಮಸ್ಥರು, ಕೂಲಿ ಕಾರ್ಮಿಕರು ರಸ್ತೆ ಮಧ್ಯೆಯೇ ನಿಲ್ಲುವಂತಾಗಿದೆ. ಇದರಿಂದ ಕೆಲವು ಅಪಘಾತಗಳು ಕೂಡ ಸಂಭವಿಸಿವೆ ಎಂದು ಅಗ್ರಹಿಸಿದರು.
ಈ ಹೋಬಳಿಯು ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿಗೆ ಹಾಗೂ ಮಂತ್ರಾಲಯ ದೇವಸ್ಥಾನಕ್ಕೆ ಮತ್ತು ಶ್ರೀಶೈಲಕ್ಕೆ ಹೋಗುವ ಪ್ರವಾಸಿ ತಾಣಗಳಿಗೆ ಭಕ್ತರಿಗೆ ಮುಖ್ಯ ಜಂಕ್ಷನ್ ಇದಾಗಿದೆ. ಹೋಬಳಿಗೆ ವಿವಿಧ ಗ್ರಾಮಗಳಾದ ತಲಮಾರಿ ಮಿರ್ಜಾಪುರ, ಇಡಪನೂರು, ಮಿಡಗಲದಿನ್ನಿ, ಗಧಾರ, ಜಂಬಲದಿನ್ನಿ ,ಕೊತ್ತಾದ್ದೊಡ್ಡಿ, ಕನ್ಯಾದೊಡ್ಡಿ, ಮಲ್ಲಾಪುರು, ಮುರ್ಕಿದೊಡ್ಡಿ, ಉಪ್ರಾಳ, ಗೋಡಿಹಾಳ್ ಅಲ್ಕೋರು ಗ್ರಾಮಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಗ್ರಾಮಸ್ಥರು ಎಂದು ಬೇಸರ ವ್ಯಕ್ತಪಡಿಸಿದರು.
ಯರಗೇರಾ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ NH.167 ಹೈದ್ರಾಬಾದ್ ದಿಂದ ಬೆಂಗಳೂರಿಗೆ ಹೆದ್ದಾರಿ ಸಂಪರ್ಕ ಹೊಂದಿದೆ. ಹೋಬಳಿಯಿಂದ 15 ರಿಂದ 16 ಕಿ.ಮೀ ತೆಲಂಗಾಣ ಮತ್ತು ಆಂಧ್ರಪ್ರದೇಶ ಗಡಿಭಾಗ ಹೊಂದಿರುವುದರಿಂದ ಜನರ ಪ್ರಯಾಣದ ಪ್ರಮಾಣ ಅತಿ ಹೆಚ್ಚು ಆಗಿರುವುದರಿಂದ ನಮಗೆ ಬಸ್ ತುಂಗುದಾಣ ಅತಿ ಅವಶ್ಯಕವಾಗಿದೆ. ಕೂಡಲೇ ಗ್ರಾಮಸ್ಥರ ಅಳಲನ್ನು ಗಂಭೀರವಾಗಿ ಪರಿಗಣಿಸಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಲಿಂಗಸೂಗೂರು | ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಈ ಸಂದರ್ಭದಲ್ಲಿ ಗ್ರಾಮ ಘಟಕ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಹನೀಫ್ ಅಬಕಾರಿ, ಮುಖಂಡರಾದ ಜಗನ್ನಾಥ್ ನಾಯಕ್, ಜಗದೀಶ್ ಹಡಪದ್, ಮೊಯಿಜ್, ಭೀಮೇಶ್ ,ಮೊಹಮ್ಮದ್ ಆರಿಫ್, ಇಕ್ಬಾಲ್ ಆಫ್ರೋಜ್ ,ಗೌಸ್ ,ಜಿಲಾನಿ , ಆಂಜನೇಯ್ಯ ಮಲ್ಲೇಶ್, ವಿರೇಶ ಇದ್ದರು.





