ಜೆಸ್ಕಾಂ ರಾಯಚೂರು ವಿಭಾಗಿಯ ಉಗ್ರಾಣಕ್ಕೆ ಬೆಳಗಿನ ಜಾವ ಐದು ಮಂದಿ ಮಹಿಳೆಯರು ನುಗ್ಗಿ ಕಳುವು ಮಾಡಲು ಯತ್ನಿಸಿದಾಗ ಜೆಸ್ಕಾಂ ಕಾವಲುಗಾರ ಮಹಿಳೆಯರಲ್ಲಿ ಒಬ್ಬರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇನ್ನೂ ನಾಲ್ವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬೆಳಗಿನ ಜಾವ ಮಹಿಳೆಯರು ಜೆಸ್ಕಾಂ ಕಾಂಪೌಂಡ್ ಗೋಡೆ ಜಿಗಿದು ಉಪವಿಭಾಗದ ಉಗ್ರಾಣಕ್ಕೆ ನುಗ್ಗಿದರು. ಈ ಸಮಯದಲ್ಲಿ ಜೆಸ್ಕಾಂ ಕಾವಲುಗಾರ ವೀರೇಶ್ ಮಹಿಳೆಯರನ್ನು ಹಿಡಿಯುವ ಸಂದರ್ಭದಲ್ಲಿ ಓರ್ವ ಮಹಿಳೆ ಸಿಕ್ಕಿಬಿದ್ದಳು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಶಾಲೆಯಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಸಾವು
ಈ ಕುರಿತು ನಗರದ ಸದಾರ್ ಬಜಾರ್ ಠಾಣೆಗೆ ಒಪ್ಪಿಸಲಾಗಿದೆ. ಜೆಸ್ಕಾಂ ಉಗ್ರಾಣದಲ್ಲಿ ಸಂಗ್ರಹ ಇರುವ ವಿದ್ಯುತ್ ಉಪಕರಣಗಳನ್ನು ಕದಿಯಲು ಈ ಮಹಿಳೆಯರು ಬೆಳಗಿನ ಜಾವದಲ್ಲಿ ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.




