ಭಾರತೀಯ ರೈಲ್ವೆ ಇಲಾಖೆಯಿಂದ ಡಿಸೆಂಬರ್ 26 ರಿಂದ ರೈಲ್ವೆ ಟಿಕೆಟ್ ದರ ಏರಿಕೆ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ರಾಯಚೂರು ರೈಲ್ವೆ ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸಿ ಸ್ಟೇಷನ್ ಮಾಸ್ಟರ್ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರೈಲ್ವೆಇಲಾಖೆಯಿಂದ ಡಿಸೆಂಬರ್26ರಿಂದ ಟಿಕೆಟ್ ದರ ಸಾಮಾನ್ಯ ಕ್ಲಾಸ್ ಗೆ 215 ಕಿ.ಮೀ ಮೀರಿದರೆ ಪ್ರತಿ ಕಿ.ಮೀಬ1 ಪೈಸೆ, ನಾನ್ ಎಸಿ ಮೇಲ್ ಎಕ್ಸ್ ಪ್ರೆಸ್ ಮತ್ತು ಎಲ್ಲಾ ಎಸಿ ಕ್ಲಾಸ್ ಗಳಲ್ಲಿ ಪ್ರತಿ ಕಿ.ಮೀ ಗೆ 2 ಪೈಸೆ ಹೆಚ್ಚಿಸಲಾಗಿದೆ. ಇದು ವರ್ಷದ ಎರಡನೇ ಬಾರಿಗೆ ದರ ಏರಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಮೇಲೆ ವಿಶೇಷ ವಾಗಿ ಬಡ,ಮಧ್ಯಮ ವರ್ಗದ ಜನರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ದೂರಿದರು.
ದಿನಬಳಕೆ ವಸ್ತುಗಳ ಬಳಕೆಯ ದರ ಹೆಚ್ಚಾಗಿದ್ದು ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದ್ದು ಮಕ್ಕಳ ಪಾಲನೆ,ಪೋಷಣೆ, ಶೈಕ್ಷಣಿಕ ವೆಚ್ಚ ದುಬಾರಿಯಾದ ಹಿನ್ನೆಲೆಯಲ್ಲಿ ಜನರು ಬೇಸತ್ತು ಈಗ ರೈಲ್ವೆ ಟಿಕೆಟ್ ದರ ಮಾಡಿದ್ದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೂಡಲೇ ದರ ಏರಿಕೆ ನಿರ್ಧಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಬೈಕ್ ಡಿಕ್ಕಿ; ಪಾದಚಾರಿ ಗಂಭೀರ ಗಾಯ
ಪ್ರತಿಭಟನೆಯಲ್ಲಿ ಯುವ ಘಟಕದ ಅಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ, ಮಹಮ್ಮದ್ ಶಹಬಾಜ್, ಮಹಮ್ಮದ್ ಫೈಜಲ್ ಖಾನ್, ರಘು ಮಡಿವಾಳ, ಎಂಡಿಜಾವೆದ್ ,ಉಪಾಧ್ಯಕ್ಷರಾದ ಬಿ.ಮಧುಕುಮಾರ, ರಶೀದ್, ದುಗನೂರು ಸುರೇಶ್ ಮತ್ತಿತರರು ಇದ್ದರು





