ರಾಯಚೂರು | ಸಮಾನತೆಯ ಶತ್ರು ಸನಾತನವಾದ ನಾಶವಾಗಲೇಬೇಕು: ಟಿಯುಸಿಐ

Date:

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧಮ೯ದ ನಿಮೂ೯ಲನೆಯ ಅಗತ್ಯ’ದ ಇಂಗಿತವನ್ನು ಪ್ರಕಟಿಸಿದ್ದಾರೆ. ಇದು ಭಾರತದ ಬಹು ಜನರ, ಅದರಲ್ಲೂ ಜಾತಿಯ ತುಳಿತ ಹಾಗೂ ಧಮ೯ದ ದಬ್ಬಾಳಿಕೆಗೆ ಗುರಿಯಾದ ದಮನಿತರ ಮನದಾಳದ ಮಾತಾಗಿದೆ. ಸ್ಟಾಲಿನ್ ಅವರ ಹೇಳಿಕೆ ಸಮರ್ಥನೀಯ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ಹೇಳಿದೆ.

ಉದಯನಿಧಿ ಅವರ ಹೇಳಿಕೆಯನ್ನು ಬೆಂಬಲಿಸಿ ಟಿಯುಸಿಐ ಪತ್ರಿಕಾ ಪ್ರಕಟಣೆ ಹೊರಡಿಸಿದೆ. “ಸನಾತನವಾದವು ಜಾತಿ ತಾರತಮ್ಯ, ಲಿಂಗ ತಾರತಮ್ಯ ಹಾಗೂ ಸಂಪತ್ತಿನ ಅಸಮಾನತೆಯನ್ನು‌ ಪ್ರತಿಪಾದಿಸುತ್ತದೆ. ದುಡಿಮೆಯನ್ನು ‘ಪಾಪ’ವೆಂದು ಸಾರುತ್ತದೆ. ಅಧಿಕಾರ ಹಾಗೂ ಸಂಪತ್ತಿಗೆ ಯಾವತ್ತೂ ಮೇಲ್ಜಾತಿಗರೇ ಒಡೆಯರಾಗಿರಬೇಕೆಂದು ಹೇಳುತ್ತದೆ. ಆ ವಾದದ ನಿರ್ಮೂಲನೆ ಅತ್ಯಗತ್ಯ” ಎಂದು ಹೇಳಿದೆ.

“ದಲಿತರು, ದುಡಿಮೆಗಾರರು ಹಾಗೂ ಮಹಿಳೆಯರಿಗೆ ಸ್ವಾತಂತ್ರ್ಯ ಇರಬಾರದೆಂಬ ಸಿದ್ದಾಂತ ಸನಾತನ ಧರ್ಮದ್ದಾಗಿದೆ. ಭಾರತದ ಸಂವಿಧಾನ ಹೇಳುವ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಜಾತ್ಯಾತೀತೆಗಳನ್ನು ಸನಾತನವಾದಿಗಳು ಸಂಪೂಣ೯ ತಿರಸ್ಕರಿಸುತ್ತಾರೆ. ಸನಾತನಾವಾದದ ಆಧಾರದ ಮೇಲೆ ಅವರು ಹಿಂದುರಾಷ್ಟ್ರ ನಿಮಾ೯ಣಕ್ಕೆ ಹೊರಟಿದ್ದಾರೆ. ಜಮ್ಮು-ಕಾಶ್ಮೀರ, ಮಣಿಪುರಗಳ ಮಾದರಿ ನಮ್ಮ ಕಣ್ಮುಂದಿದೆ. ‘ಒಂದೇ ರಾಷ್ಟ ಒಂದೇ ಧಮ’೯, ‘ಒಂದೇ ರಾಷ್ಟ್ರ ಒಂದೇ ಪೊಲೀಸ್’ ಹಾಗೂ ‘ಒಂದೇ ರಾಷ್ಟ್ರ, ಒಂದೇ ಚುನಾವಣೆ’ಯ ಮೂಲಕ ಭಾರತದ ಬಹು ಸಂಸ್ಕೃತಿ ಹಾಗೂ ಗಣತಂತ್ರದ ಮೇಲೆ ಸಂಘ ಪರಿವಾರದ ದಬ್ಬಾಳಿಕೆಯು ನಿರಂತರವಾಗಿ ಮುಂದುವರೆದಿದೆ” ಎಂದು ಕಿಡಿಕಾರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸಂಘ ಪರಿವಾರದ ದಬ್ಬಾಳಿಕೆಯನ್ನು ಪ್ರಶ್ನಿಸಿದರೆ ದೇಶದ್ರೋಹಿ ಪಟ್ಟ ಕಟ್ಟಿ ಜೈಲಿಗೆ ತಳ್ಳಲಾಗುತ್ತಿದೆ. ಇಂಥಹ ಫ್ಯಾಸಿಸ್ಟ್ ದಮನ ದಬ್ಬಾಳಿಕೆಗೆ ಸನಾತನವಾದವೆ ಮುಖ್ಯ ಆಧಾರವಾಗಿದೆ. ಇಂದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದೊಂದಿಗೆ ಸೇರಿಕೊಂಡು, ದೇಶದ ಶ್ರಮಶಕ್ತಿ ಹಾಗೂ ಪ್ರಕೃತಿದತ್ತ ಸಂಪನ್ಮೂಲಗಳ ಲೂಟಿಗೆ ಈ ಸನಾತನವಾದಿಗಳೇ ಮುಂದೆ ನಿಂತಿದ್ದಾರೆ” ಎಂದು ಆರೋಪಿಸಿದೆ.

“ದೇಶದ ದುಡಿಯುವ ಜನರು ಹಾಗೂ ದಮನಿತ ಜನಾಂಗಗಳು ಮತ್ತು ಪ್ರಜಾಪ್ರಭುತ್ವಾದಿಗಳು ಈ ಸನಾತನವಾದಿಗಳ ನಿಮೂ೯ಲನೆಗಾಗಿ ಪಣ ತೊಡಬೇಕಾಗಿದೆ. ಇದಕ್ಕಾಗಿ ಮತ್ತೊಮ್ಮೆ ಅತೀ ದೊಡ್ಡ ಸಾಂಸ್ಕೃತಿಕ ರಾಜಕೀಯ ಚಳುವಳಿಗೆ ಮುಂದಾಗಬೇಕಾಗಿದೆ” ಎಂದು ಕರೆ ಕೊಟ್ಟಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...