ನಗರದ ನವೋದಯ ಕಾಲೇಜುಗಳ ಅನಧೀಕೃತವಾಗಿ ಹಾಕಲಾಗಿದ್ದ ಹೋಟೆಲ್ಗಳು, ಅಂಗಡಿಗಳು ಸೇರಿದಂತೆ 20 ಕ್ಕೂ ಹೆಚ್ಚು ಅಂಗಡಿಗಳನ್ನು ಮಹಾನಗರ ಪಾಲಿಕೆಯಿಂದ ಜೆಸಿಬಿಗಳಿಂದ ತೆರವುಗೊಳಿಸಲಾಯಿತು.
ಕಳೆದ ಅನೇಕ ವರ್ಷಗಳಿಂದ ರಸ್ತೆಯ ಬದಿಯಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಹಾಕಿಕೊಂಡು ವ್ಯವಹರಿಸಲಾಗುತ್ತಿತ್ತು ಆದರೂ ಅನೇಕ ಬಾರಿ ಪಾಲಿಕೆ ತೆರವುಗೊಳಿಸಲು ನೋಟಿಸ್ ಸಹ ನೀಡಿದರು ಮಾನಸ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಜನವಾಸ ಮಾಡುತ್ತಿದ್ದು ಬಡಾವಣೆಗೆ ತೆರಳಲು ಸಹ ಸಮಸ್ಯೆಯಾಗಿತ್ತು. ಈ ವಿಷಯವು ಅತಿಕ್ರಮಿತ ಅಂಗಡಿಗಳನ್ನು ತೆರವುಗೊಳಿಸುವ ಕುರಿತಂತೆ ಹೈಕೋರ್ಟನಲ್ಲಿ ಸಹಪ್ರಕರಣ ವಿಚಾರಣೆ ಮುಂದುವರೆದಿತ್ತು. ಹೈಕೋರ್ಟ ಆದೇಶ ಹಾಗೂ ಜನಸಂಚಾರಕ್ಕೆ ಆಗುತ್ತಿರುವ ಅಡ್ಡಿಯ ಹಿನ್ನಲೆಯಲ್ಲಿ ಇಂದು ಪಾಲಿಕೆ ಅಧಿಕಾರಿಗಳು ತೆರಳಿ ಅಂಗಡಿಗಳನ್ನು ತೆರವುಗೊಳಿಸಿದರು.
ಕೆಲ ದಿನಗಳ ಹಿಂದೆಯಷ್ಟ ಜನದಟ್ಟಣೆಯಿಂದ ರಸ್ತೆಯಲ್ಲಿ ಅಪಘಾತಗಳು ಸಹ ಸಂಭವಿಸಿದ್ದವು. ಹೆದ್ದಾರಿ ರಸ್ತೆಗೆ ಹೊಂದಿಕೊಂಡಿರುವಂತೆ ಹಾಕಲಾಗಿರುವ ಅಂಗಡಿಗಳ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಖಾಯಂ ಸ್ವರೂಪ ಕಟ್ಟಡಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದರು . ಪೊಲೀಸ್ ಇಲಾಖೆ ಹಾಗೂ ಹೈಕೋರ್ಟ ಆದೇಶದ ಮೇರೆಗೆ ತೆರವು ಕಾರ್ಯಚರಣೆ ಮುಂದುವರೆಸಲಾಯಿತು. ಅನೇಕ ವ್ಯಾಪಾರಸ್ಥರು ಪಾಲಿಕೆ ಕ್ರಮಕ್ಕೆ ವಿರೋಧಿಸಿ ಕಾಲಾವಕಾಶ ನೀಡಬೇಕೆಂದು ವಾದಿಸಿದರು. ಆದರೆ ಅಧಿಕಾರಿಗಳು ಅವಕಾಶ ನೀಡದೇ ತೆರವುಗೊಳಿಸಿದರು.
ಬಡಾವಣೆ ಮುಖಂಡ ರವೀಂದ್ರ ಜಲ್ದಾರ ಮಾತನಾಡಿ, ಅನೇಕ ವರ್ಷಗಳಿಂದ ಅನಧಿಕೃತ ಅಂಗಡಿಗಳನ್ನು ಹಾಕಿರುವ ಕುರಿತು ನಿವಾಸಿಗಳು ಹೈಕೋರ್ಟನಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ ಆದೇಶದ ಮೇರೆಗೆ ತೆರವು ಕಾರ್ಯ ನಡೆಸಿರುವದು ಸ್ವಾಗತಾರ್ಹವಾಗಿದೆ. ನಗರಸಭೆ ಹಾಗೂ ಮಹಾನಗರ ಪಾಲಿಕೆಯಾದ ನಂತರವೂ ಅನೇಕ ಬಾರಿ ನೋಟಿಸ್ ಸಹ ನೀಡಲಾಗಿತ್ತು. ನಕಲಿ ದಾಖಲೆ ಸೃಷ್ಟಿಸಿರುವ ದೂರುಗಳು ಸಹ ಇವೆ. ಪಾಲಿಕೆ ಆಯುಕ್ತ ಜೋಬಿನ್ ಮಹೋಪಾತ್ರ ಇವರು ತೆರವಿಗೆ ಆದೇಶ ಹೊರಡಿಸಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಿಕ್ಷಕರ ಹುದ್ದೆ ಭರ್ತಿ, ಕನ್ನಡ ನಾಮಫಲಕ ಕಡ್ಡಾಯ; ಕನ್ನಡ ಸೇನೆ ಆಗ್ರಹ
ತೆರವು ಕಾರ್ಯ ನಡೆಸಲಾಗಿದೆ. ರಸ್ತೆ ಬದಿಯಲ್ಲಿ ಅಂಗಡಿಗಳ ವ್ಯವಹರಿಸುತ್ತಿರುವ ಪರಿಣಾಮ ಮೂರು ಜನ ಸಾವು ಸಂಭವಿಸಿತ್ತು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಸಹ ತೆರವಿಗೆ ಸೂಚನೆ ನೀಡಿದ್ದರು ಎಂದರು. ನೇತಾಜಿ ನಗರ ಪೊಲೀಸರ ಬಂದೋಬಸ್ತನಲ್ಲಿ ತೆರವು ಕಾರ್ಯಚರಣೆ ನಡೆಸಲಾಯಿತು. ಅನಧಿಕೃತವಾಗಿರುವ ಕಟ್ಟಡಗಳು ಹಾಗೂ ರಸ್ತೆ ಅತಿಕ್ರಮಿತ ಪ್ರದೇಶಗಳನ್ನು ತೆರವುಗೊಳಿಸುವ ಕಾರ್ಯಚರಣೆ ಮುಂದುವರೆಸಲಾಗುತ್ತದೆ ಎಂದು ಪಾಲಿಕೆ ಸಿಬ್ಬಂದಿಗಳು ಹೇಳಿದರು. ವ್ಯಾಪಾರಸ್ಥರು ಅಂಗಡಿಗಳ ತೆರವಿನಿಂದ ಹಿನ್ನಲೆಯಲ್ಲಿ ಕಂಗಾಲಾಗುವಂತಾಯಿತು.





