ರಾಯಚೂರು | ಮರೆಯದ ಕೆಂಪು ನಕ್ಷತ್ರ ಕೃತಿ ಲೋಕಾರ್ಪಣೆ

Date:

ರಾಯಚೂರಿನಲ್ಲಿ 80ರ ದಶಕದಲ್ಲಿ ಯುವಜನರ ದಮನ ದಲಿತರ ಆಂದೋಲನ ಕಟ್ಟುವುದರಲ್ಲಿ ಶ್ರಮವಹಿಸಿದ ಪುರುಷೋತ್ತಮ ಕಲಾಲಬಂಡಿ ಎಂದು ಸಾಮಾಜಿಕ ಚಿಂತಕ ಆರ್ ಕೆ ಹುಡುಗಿ ಹೇಳಿದರು.

ಪುರುಷೋತ್ತಮ ಕಲಾಲಬಂಡಿರವರ ಒಡನಾಡಿಗಳ ಬಳಗದ ವತಿಯಿಂದ ಪುರುಷೋತ್ತಮ ಕಲಾಲ ಬಂಡಿ ಅವರ 72ನೇ ಜನ್ಮ ದಿನಾಚರಣೆಯ ಅಂಗವಾಗಿ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ʼಮರೆಯದ ಕೆಂಪು ನಕ್ಷತ್ರ ಕೃತಿʼ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಕಲಾಲ ಬಂಡಿ ಅವರು ನಮ್ಮ ಬಲಗೈ ಬಂಟನಾಗಿ ನಮ್ಮ ಮಧ್ಯದಲ್ಲಿ, ಹೋರಾಟದಲ್ಲಿ, ಘೋಷಣೆ ಸದ್ದಿನಲ್ಲಿ, ಕೆಂಪು ಧ್ವಜದಲ್ಲಿಯೂ ಹಾಗೆಯೇ ಪ್ರತಿ ಕ್ಷಣದಲ್ಲಿಯೂ ಇದ್ದಾರೆ. ಕ್ರಾಂತಿಗೆ ಹೇಗೆ ಸಾವಿಲ್ಲವೋ ಹಾಗೆಯೇ ಕ್ರಾಂತಿಕಾರಿಗೂ ಸಾವಿಲ್ಲ. ಪುರುಷೋತ್ತಮ ಕಲಾಲ ಬಂಡಿ ಅವರ ಚಿಂತನೆ, ಹೋರಾಟ ಅವರು ಹೇಳಿದ ಮಾರ್ಗವನ್ನು ಮುನ್ನಡೆಸಿ ಅವರ ಕನಸು ನನಸು ಮಾಡಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೋರಾಟಗಾರ್ತಿ, ಚಿಂತಕಿ ಕೆ ನೀಲಾ ಮಾತನಾಡಿ, “ರಾಯಚೂರು ನಾಡು ಹೋರಾಟದ ಉಲ್ಲಾಸ, ಉತ್ಸಾಹದ ಕೇಂದ್ರ ಬಿಂದುವಾಗುವುದಕ್ಕೆ ಶ್ರಮ ಹಾಕಿದ ಪುರುಷೋತ್ತಮ ಕಲಾಲ ಬಂಡಿ ಅವರೂ ಕೂಡ ಕಾರಣರಾಗಿದ್ದಾರೆ. ಜನರು ಸಮಸ್ಯೆ ಎಂದು ಬಂದಾಗ ಅವರ ಜೀವವನ್ನೇ ಪಣಕ್ಕಿಟ್ಟು ಹೋರಾಟಕ್ಕೆ ಸಿದ್ಧರಾಗುತ್ತಿದ್ದರು. ಈಗಿನ ಕೆಲವು ಘಟನೆ ಪರಿಸ್ಥಿತಿ ನೋಡಿದರೆ ಅವರು ಒಂದು ನಿಮಿಷವೂ ಕೂಡ ಕಾಯುತ್ತಿರಲಿಲ್ಲ” ಎಂದು ಹೇಳಿದರು.

“ಬೀದಿಯ ಮೇಲೆ ರಕ್ತವಿದೆ. ಮಣಿಪುರ, ಪ್ಯಾಲೆಸ್ತೀನ್ ಇವೆಲ್ಲವೂ ನಮ್ಮ ಕಣ್ಣ ಮುಂದೆ ಇದೆ. ನಾವು ಹೋರಾಟದ ಕಿಚ್ಚು ಸದಾ ಕಲ್ಲಿದ್ದಲ ಕೆಂಡವಂತಾಗಿರಬೇಕು. ನಾವು ಪರಸ್ಪರ ಕೈ ಕೈ ಜೋಡಿಸಿ ಗಟ್ಟಿಯಾಗಬೇಕು. ಸಮಾಜಕ್ಕೆ ಬದಲಾವಣೆ ಮಾಡುವುದಕ್ಕೆ ಏನು ಮಾಡಬೇಕೋ ಅದನ್ನು ನಾವು ಮುಂದುವರೆಸಬೇಕು” ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೈಗೆ ಬಾರದ ಬೆಳೆ; ಆದಾಯಕ್ಕೆ ಪರ್ಯಾಯ ಮಾರ್ಗ ಹುಡುಕಿದ ರೈತರು

1989 ಹೋರಾಟದಲ್ಲೂ ಭಾಗಿಯಾದಾಗ ನಾವು ಜನರ ಮಧ್ಯದಲ್ಲಿ ಹೋಗಬೇಕು. ಆವಾಗ ಜನರೇ ನಮ್ಮನ್ನು ಮುಂದೆ ಕರೆದುಕೊಂಡು ಹೋಗುತ್ತಾರೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಭಾರತ ಸಂಪಾದಕ ಚಂದ್ರ ಶೇಖರ ಬಾಳೆ, ಮಾಜಿ ಹಟ್ಟಿ ಚಿನ್ನದಗಣಿ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ವಿಜ್ಞಾನಿ ಪ್ರಭಾ ಬೆಳವಂಗಲ, ಮರೆಯದ ಕೆಂಪು ನಕ್ಷತ್ರ ಕೃತಿಯ ಸಂಪಾದಕ ವೀರ ಹನುಮಾನ, ಏಮ್ಸ್ ಹೋರಾಟಗಾರ ಬಸವರಾಜ್ ಕಳಸ, ಪತ್ರಕರ್ತ ಕೆ ಸತ್ಯನಾರಾಯಣ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...