ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ. ಸುಳ್ಳ ಪ್ರದೇಶವು ಈ ವರ್ಷದ ಮೊದಲ ಮಳೆ ಕಂಡಿದೆ. ಇನ್ನೂ, ಒಂದೆರಡು ದಿನಗಳ ಕಾಲ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ವಿಟ್ಲ, ಬೆಟ್ಟಂಪಾಡಿ, ಸಂಪಾಜೆ, ಕಡಬ ಮುಂತಾದ ಪ್ರದೇಶಗಳಲ್ಲಿ ತುಂತುರು ಮಳೆ ಸುರಿದಿದೆ. ಕೊಡಗು ಜಿಲ್ಲೆಯ ನಾಪೋಕ್ಲು ಭಾಗದಲ್ಲಿಯೂ ಮಳೆಯಾಗಿದೆ.
ಸಂಪಾಜೆ ಸುತ್ತ-ಮುತ್ತ ಸುಮಾರು 10 ನಿಮಿಷಗಳ ಕಾಲ ಭಾರೀ ಮಳೆ ಸುರಿದಿದೆ. ಈ ಅಕಾಲಿಕ ಮಳೆಯಿಂದಾಗಿ, ಒಣಗಲು ಹಾಕಿದ್ದ ಅಡಿಕೆ ಹಾಗೂ ಇತರೆ ಕೃಷಿ ಉತ್ಪನ್ನಗಳು ಮಳೆಯಲ್ಲಿ ತೋಯ್ದಿವೆ. ಇದು, ನಷ್ಟಕ್ಕೆ ಕಾರಣವಾಗಬಹುದೆಂದು ರೈತರು ಆತಂಕಗೊಂಡಿದ್ದಾರೆ..
ಬಿಸಿಲಿನ ಬೇಗೆಯ ನಡುವೆ ಮಳೆಯು ಭೂಮಿಗೆ ತಂಪೆರೆದಿದೆ. ಆದರೆ, ಮಾರ್ಚ್ ಮೊದಲ ವಾರದವರೆಗೆ ಅಡಿಕೆ ಕಟಾವು ನಡೆಯುವುದರಿಂದ, ಈ ತಿಂಗಳಿನಲ್ಲಿ ಮಳೆಯಾಗದಿದ್ದರೆ, ಉತ್ತಮವೆಂದು ರೈತರು ಹೇಳುತ್ತಾರೆ.




